ಯುವ ಸಮೂಹ ಸಾಮಾಜಿಕ ಜಾಲತಾಣಗಳಲ್ಲೇ ಸಮಯ ವ್ಯರ್ಥ ಮಾಡುತ್ತಿದೆ. ಸಂದೇಶಗಳನ್ನು ಹರಿಬಿಟ್ಟ ತಕ್ಷಣ ಲಕ್ಷಾಂತರ ಜನರಿಗೆ ತಲುಪುತ್ತದೆ ಎಂಬ ಭ್ರಮೆ ಬಹುತೇಕರಲ್ಲಿದೆ. ವ್ಯಕ್ತಿ–ವ್ಯಕ್ತಿಗಳ ಮಧ್ಯೆ, ಸಮುದಾಯಗಳ ಮಧ್ಯೆ ಬೆರೆತು ಕಲಿಯುವ, ಮುಖಾಮುಖಿ ತಲುಪಿಸುವ ಕೆಲಸಗಳು ಆಗಬೇಕಿದೆ. ಅದಕ್ಕಾಗಿ ಮಾನವೀಯ ಸಂಬಂಧಗಳನ್ನು ಬೆಸೆಯಬೇಕಿದೆ ಎಂದರು.