‘ವೈಯಕ್ತಿಕ ರಕ್ಷಣೆಗಾಗಿ ಪೆಪ್ಪರ್ ಸ್ಪ್ರೇ ಎಂದು ಅರ್ಜಿದಾರರು ಹೇಳಿದ್ದಾರೆ. ಆದರೆ, ಇಂತಹ ಹೇಳಿಕೆಯು ಸಾಕ್ಷ್ಯ ಅಧಿನಿಯಮದ ಅನುಸಾರ ತನಿಖೆಗೆ ಒಳಪಟ್ಟು ಸತ್ಯ ಹೊರಬರಬೇಕಿದೆ. ಅಪಾಯಕಾರಿ ಆಯುಧಗಳು ಅಥವಾ ವಿಧಾನಗಳಿಂದ ಗಾಯವನ್ನು ಉಂಟು ಮಾಡುವುದನ್ನು ಭಾರತೀಯ ದಂಡ ಸಂಹಿತೆ–1860ರ ಕಲಂ 324 ವಿವರಿಸುತ್ತದೆ. ಅಂತೆಯೇ, ಇದೇ ಕಲಂನ ವ್ಯಾಪ್ತಿಯಲ್ಲಿ ಪೆಪ್ಪರ್ ಸ್ಪ್ರೇ ಬಳಕೆಯನ್ನೂ ಪರಿಗಣಿಸಬೇಕಾಗುತ್ತದೆ’ ಎಂದು ನ್ಯಾಯಪೀಠ ಹೇಳಿದೆ.