ಶುಕ್ರವಾರ, 10 ಅಕ್ಟೋಬರ್ 2025
×
ADVERTISEMENT
ADVERTISEMENT

ಪ್ರಜಾವಾಣಿ ದೀಪಾವಳಿ ವಿಶೇಷಾಂಕ: ಕಥೆ, ಕವನ ಸ್ಪರ್ಧೆ; ದಯಾನಂದ, ಲಕ್ಷ್ಮಣಗೆ ಬಹುಮಾನ

Published : 10 ಅಕ್ಟೋಬರ್ 2025, 7:34 IST
Last Updated : 10 ಅಕ್ಟೋಬರ್ 2025, 7:48 IST
ಫಾಲೋ ಮಾಡಿ
Comments
ಬಹುಮಾನದ ವಿವರ
ಕಥಾ ಸ್ಪರ್ಧೆಯಲ್ಲಿ ಮೊದಲ ಮೂರು ಸ್ಥಾನ ಪಡೆದ ಕಥೆಗಳಿಗೆ ಕ್ರಮವಾಗಿ ₹20 ಸಾವಿರ, ₹15 ಸಾವಿರ ಹಾಗೂ ₹10 ಸಾವಿರ ನಗದು ಮತ್ತು ಪ್ರಶಸ್ತಿ ಪತ್ರ ಲಭಿಸಲಿದೆ. ಕವನ ಸ್ಪರ್ಧೆ ಮೊದಲ ಮೂರು ಸ್ಥಾನ ಪಡೆದ ಕವನಗಳಿಗೆ ಕ್ರಮವಾಗಿ ₹5,000, ₹3,000 ಹಾಗೂ ₹2,500 ನಗದು ಹಾಗೂ ಪ್ರಶಸ್ತಿ ಪತ್ರ ದೊರೆಯಲಿದೆ.
ತೀರ್ಪುಗಾರರ ಟಿಪ್ಪಣಿ‌
ಇಲ್ಲಿನ ಕಥೆಗಳ ಓದು, ಸಮಕಾಲೀನ ಸಮಾಜದ ವಿದ್ಯಮಾನಗಳಿಗೆ ನಮ್ಮನ್ನು ಮುಖಾಮುಖಿಯಾಗಿಸುತ್ತ, ಆ ಬೆಳವಣಿಗೆಗಳಲ್ಲಿ ನಮ್ಮ ಜವಾಬ್ದಾರಿಯನ್ನು ಪ್ರಶ್ನಿಸುವಂತೆ, ಸಾಮಾಜಿಕ ಸ್ವಾಸ್ಥ್ಯಕ್ಕೆ ನಮ್ಮ ಕೊಡುಗೆ ಏನಾಗಿರಬೇಕೆಂಬ ವಿಚಾರದಲ್ಲಿ ಸೂಕ್ಷ್ಮಜ್ಞರನ್ನಾಗಿಸುತ್ತದೆ
– ಪ್ರೊ.ಸಬಿಹಾ ಭೂಮಿಗೌಡ, ಕಥಾ ಸ್ಪರ್ಧೆ ವಿಭಾಗ
ಹೆಚ್ಚು ಕಡಿಮೆ ಒಂದು ದಶಕದಿಂದೀಚೆಗೆ ಕನ್ನಡದಲ್ಲಿ ಕಥೆ ಕಾದಂಬರಿಗಳ ಸುಗ್ಗಿಯನ್ನೇ ಕಾಣುತ್ತಿದ್ದೇವೆ. ಹೊಸ ತಲೆಮಾರಿನ ಕಥನಕಾರರು ಕಥೆ, ಕಾದಂಬರಿ ಪ್ರಕಾರಗಳ ದಿಗಂತವನ್ನು ಅಚ್ಚರಿಯೆನಿಸುವಂತೆ ವಿಸ್ತರಿಸುತ್ತಿದ್ದಾರೆ.
– ಅಗ್ರಹಾರ ಕೃಷ್ಣಮೂರ್ತಿ, ಕಥಾ ಸ್ಪರ್ಧೆ ವಿಭಾಗ
ಕೆಲವು ಕವಿತೆಗಳ ಒಳ ಬಿಕ್ಕುಗಳು, ಹೇಳಿಕೊಳ್ಳಲಾರದ ಸಂಕಟಗಳು, ಸಮಾಜದ ಒಳರಚನೆಗಳಲ್ಲಿ ಅಡಗಿರುವ ಹಿಂಸೆಯ ನೆಲೆಗಳು ಸೂಕ್ಷ್ಮವಾದ ಹೊಸ ನುಡಿಗಟ್ಟಿನಲ್ಲಿ ಕಾವ್ಯದ ಅನುಭವವಾಗಿ ರೂಪುಗೊಂಡಿದ್ದವು. ಕೊನೆಗೆ ಅವು ಪುಟಗಳಲ್ಲಿ ಮುಗಿದರೂ ಮನಸ್ಸಿನಲ್ಲಿ ಬೆಳೆಯತೊಡಗಿದವು.
– ವಿಕ್ರಮ ವಿಸಾಜಿ, ಕವನ ಸ್ಪರ್ಧೆ ವಿಭಾಗ
ಇತ್ತೀಚೆಗೆ ಬಹುಮಾನ ಗೆಲ್ಲುವ ಹುಕಿಗೆ ಬಿದ್ದಂತ ಬರವಣಿಗೆಗಳು ಹೆಚ್ಚುತ್ತಿವೆ. ಹೀಗೆ ಬರೆದರೆ ಗಮನಸೆಳೆಯಬಹುದೆಂಬ ‘ಪ್ಯಾಟರ್ನ್’ ಒಂದನ್ನು ರೂಪಿಸಿಕೊಳ್ಳಲಾಗುತ್ತಿದೆ. ಆ ಸವಕಲು ಜಾಡಿನಲ್ಲಿ ನಡೆಯುವ ಕಾವ್ಯ ಜೀವಾಂತಃಕರಣವನ್ನು ಸೋಕದೇ ರೆಡಿಮೇಡ್ ಹೂವಿನಂತೆ ಕಂಗೊಳಿಸುತ್ತದೆ.
– ಗೀತಾ ವಸಂತ, ಕವನ ಸ್ಪರ್ಧೆ ವಿಭಾಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT