ಗುರುವಾರ ಸಂಜೆ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಯಾರೇ ದೇಶ ವಿರೋಧಿ ಕೃತ್ಯ ಎಸಗಿದರೂ ಮುಲಾಜಿಲ್ಲದೇ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಬಾಂಬ್ ಇಟ್ಟು ಶರಣಾಗಿರುವ ಆದಿತ್ಯ ರಾವ್ ಹುಚ್ಚನಾಗಿರಲಿ ಅಥವಾ ಅರೆಹುಚ್ಚನಾಗಿರಲಿ, ಮಾನಸಿಕ ಅಸ್ವಸ್ಥನಾಗಿರಲಿ ಆತನ ತಪ್ಪಿಗೆ ಶಿಕ್ಷೆಯಾಗಲೇಬೇಕು’ ಎಂದು ಆಗ್ರಹಿಸಿದರು.