ಏಕ ಸದಸ್ಯ ಆಯೋಗ ರಚನೆಯಾಗುತ್ತಿದ್ದಂತೆ, ಅದರ ಎದುರು ಸಿಐಡಿ ಪರ ವಾದ ಮಂಡಿಸಲು ವಕೀಲ ಅಶೋಕ ನಾಯ್ಕ್ ಅವರನ್ನು ಈ ಹಿಂದೆ ನೇಮಿಸಲಾಗಿತ್ತು. ಒಬ್ಬರಿಂದ ಪರಿಣಾಮಕಾರಿ ವಾದ ಮಂಡಿಸಲು ಕಷ್ಟವೆಂದು ಸಿಐಡಿ ಹಿರಿಯ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದರು. ಇನ್ನೊಬ್ಬ ವಕೀಲರನ್ನು ನೇಮಿಸುವಂತೆ ಕೋರಿದ್ದರು. ಇದರ ಬೆನ್ನಲ್ಲೇ ವಕೀಲ ಸುಧನ್ವ ಅವರನ್ನು ನೇಮಕ ಮಾಡಲಾಗಿದೆ.