ಜೈನಾಪುರದ ರವಿ ತಳವಾರ, ಪತ್ನಿ ಸಂಗೀತಾ, ರವಿ ಸಹೋದರ ಸಂತೋಷ ಸೇರಿದಂತೆ 10 ಜನರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿಕೊಂಡಿದ್ದರು. ಆದರೆ, ರವಿ ಕುಟುಂಬದವರು ನೀಡಿದ ದೂರಿನನ್ವಯ ಕ್ರಮ ಕೈಗೊಂಡಿರಲಿಲ್ಲ. ಪ್ರಕರಣದ ಸಂಬಂಧ ರವಿ, ಸಂಗೀತಾ, ಸಂತೋಷ ಅವರನ್ನು ವಿಚಾರಣಾಧೀನ ಕೈದಿಯಾಗಿ ಕಾರಾಗೃಹಕ್ಕೆ ಕಳಿಸಲಾಗಿತ್ತು. ಸಂಗೀತಾ ಅವರು ತಮ್ಮ ಮೂರು ವರ್ಷದ ಮಗು ಭಾರತಿಯನ್ನೂ ಕಾರಾಗೃಹಕ್ಕೆ ಕರೆದೊಯ್ದಿದ್ದರು. ರಾತ್ರಿ ವೇಳೆ ಮಗುವಿನ ಆರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ, ಮಗು ಚಿಕಿತ್ಸೆಗೆ ಸ್ಪಂದಿಸದೇ ಕೊನೆಯುಸಿರೆಳೆದಿತ್ತು.