<p><strong>ಬೆಂಗಳೂರು</strong>: ‘ನಾಯಕತ್ವ ಬದಲಾವಣೆ, ಸಂಪುಟ ಪುನರ್ರಚನೆ ವಿಚಾರಗಳ ಬಗ್ಗೆ ನಮ್ಮವರೇ ಹೇಳಿಕೆ ನೀಡುತ್ತಿರುವುದರಿಂದ ಪಕ್ಷಕ್ಕೆ ಹಾನಿಯಾಗುತ್ತಿದೆ. ಇಂತಹ ಹೇಳಿಕೆಗಳನ್ನು ನೀಡದಂತೆ ನಮ್ಮ ಬಾಯಿಗೆ ನಾವೇ ಬ್ರೇಕ್ ಹಾಕಿಕೊಳ್ಳಬೇಕು’ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.</p>.<p>ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಐದು ವರ್ಷ ಪೂರ್ಣಾವಧಿ ಮುಖ್ಯಮಂತ್ರಿ, ಅಧಿಕಾರ ಹಂಚಿಕೆ, ಹೆಚ್ಚುವರಿ ಉಪ ಮುಖ್ಯಮಂತ್ರಿ ಹುದ್ದೆಗಳ ಸೃಷ್ಟಿ, ಸಂಪುಟ ಪುನರ್ರಚನೆ ಹೀಗೆ ಹಲವು ವಿಚಾರಗಳ ಬಗ್ಗೆ ಸಾರ್ವಜನಿಕ ಚರ್ಚೆ ಅಗತ್ಯ ಇರಲಿಲ್ಲ. ಹೈಕಮಾಂಡ್ ತೀರ್ಮಾನವನ್ನು ಎಲ್ಲರೂ ಪಾಲಿಸಬೇಕು’ ಎಂದರು.</p>.<p>‘ಆರ್.ವಿ. ದೇಶಪಾಂಡೆ, ಬಸವರಾಜ ರಾಯರಡ್ಡಿ, ಬಿ.ಆರ್. ಪಾಟೀಲ ಸೇರಿದಂತೆ ಇತರೆ ಹಿರಿಯರು ಕೂಡ ಸರ್ಕಾರದ ಕಾರ್ಯವೈಖರಿ ಬಗ್ಗೆ ಬಹಿರಂಗವಾಗಿ ಮಾತನಾಡಿರುವುದರಿಂದಲೂ ಪಕ್ಷಕ್ಕೆ ಹಾನಿಯಾಗುತ್ತಿದೆ’ ಎಂದು ಹೇಳಿದರು.</p>.<p>‘ಬಹಿರಂಗ ಹೇಳಿಕೆ ನೀಡದಂತೆ ಹೈಕಮಾಂಡ್ ಹಲವು ಬಾರಿ ಸೂಚಿಸಿದ್ದರೂ ನಿಂತಿಲ್ಲ. ನಾವೆಲ್ಲರೂ ಚಿಕ್ಕವರೇನಲ್ಲ. ಎರಡು ಬಾರಿ, ನಾಲ್ಕೈದು ಬಾರಿ, ಆರೇಳು ಬಾರಿ ಗೆದ್ದವರು ಇದ್ದಾರೆ. ಸಚಿವರಾಗಿ ಕಾರ್ಯನಿರ್ವಹಿಸಿದವರೂ ಇದ್ದು, 30-40 ವರ್ಷ ಪಕ್ಷದಲ್ಲಿ ದುಡಿದವರಿದ್ದಾರೆ. ಹೀಗಿದ್ದರೂ ಬಹಿರಂಗ ಹೇಳಿಕೆ ನೀಡುವುದು ಸೂಕ್ತವಲ್ಲ. ಬಹಿರಂಗ ಹೇಳಿಕೆಗಳ ಮೂಲಕ ನಾವೇ ಪ್ರತಿಪಕ್ಷಗಳ ಟೀಕೆಗೆ ಆಹಾರವಾಗುತ್ತಿದ್ದೇವೆ’ ಎಂದರು.</p>
<p><strong>ಬೆಂಗಳೂರು</strong>: ‘ನಾಯಕತ್ವ ಬದಲಾವಣೆ, ಸಂಪುಟ ಪುನರ್ರಚನೆ ವಿಚಾರಗಳ ಬಗ್ಗೆ ನಮ್ಮವರೇ ಹೇಳಿಕೆ ನೀಡುತ್ತಿರುವುದರಿಂದ ಪಕ್ಷಕ್ಕೆ ಹಾನಿಯಾಗುತ್ತಿದೆ. ಇಂತಹ ಹೇಳಿಕೆಗಳನ್ನು ನೀಡದಂತೆ ನಮ್ಮ ಬಾಯಿಗೆ ನಾವೇ ಬ್ರೇಕ್ ಹಾಕಿಕೊಳ್ಳಬೇಕು’ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.</p>.<p>ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಐದು ವರ್ಷ ಪೂರ್ಣಾವಧಿ ಮುಖ್ಯಮಂತ್ರಿ, ಅಧಿಕಾರ ಹಂಚಿಕೆ, ಹೆಚ್ಚುವರಿ ಉಪ ಮುಖ್ಯಮಂತ್ರಿ ಹುದ್ದೆಗಳ ಸೃಷ್ಟಿ, ಸಂಪುಟ ಪುನರ್ರಚನೆ ಹೀಗೆ ಹಲವು ವಿಚಾರಗಳ ಬಗ್ಗೆ ಸಾರ್ವಜನಿಕ ಚರ್ಚೆ ಅಗತ್ಯ ಇರಲಿಲ್ಲ. ಹೈಕಮಾಂಡ್ ತೀರ್ಮಾನವನ್ನು ಎಲ್ಲರೂ ಪಾಲಿಸಬೇಕು’ ಎಂದರು.</p>.<p>‘ಆರ್.ವಿ. ದೇಶಪಾಂಡೆ, ಬಸವರಾಜ ರಾಯರಡ್ಡಿ, ಬಿ.ಆರ್. ಪಾಟೀಲ ಸೇರಿದಂತೆ ಇತರೆ ಹಿರಿಯರು ಕೂಡ ಸರ್ಕಾರದ ಕಾರ್ಯವೈಖರಿ ಬಗ್ಗೆ ಬಹಿರಂಗವಾಗಿ ಮಾತನಾಡಿರುವುದರಿಂದಲೂ ಪಕ್ಷಕ್ಕೆ ಹಾನಿಯಾಗುತ್ತಿದೆ’ ಎಂದು ಹೇಳಿದರು.</p>.<p>‘ಬಹಿರಂಗ ಹೇಳಿಕೆ ನೀಡದಂತೆ ಹೈಕಮಾಂಡ್ ಹಲವು ಬಾರಿ ಸೂಚಿಸಿದ್ದರೂ ನಿಂತಿಲ್ಲ. ನಾವೆಲ್ಲರೂ ಚಿಕ್ಕವರೇನಲ್ಲ. ಎರಡು ಬಾರಿ, ನಾಲ್ಕೈದು ಬಾರಿ, ಆರೇಳು ಬಾರಿ ಗೆದ್ದವರು ಇದ್ದಾರೆ. ಸಚಿವರಾಗಿ ಕಾರ್ಯನಿರ್ವಹಿಸಿದವರೂ ಇದ್ದು, 30-40 ವರ್ಷ ಪಕ್ಷದಲ್ಲಿ ದುಡಿದವರಿದ್ದಾರೆ. ಹೀಗಿದ್ದರೂ ಬಹಿರಂಗ ಹೇಳಿಕೆ ನೀಡುವುದು ಸೂಕ್ತವಲ್ಲ. ಬಹಿರಂಗ ಹೇಳಿಕೆಗಳ ಮೂಲಕ ನಾವೇ ಪ್ರತಿಪಕ್ಷಗಳ ಟೀಕೆಗೆ ಆಹಾರವಾಗುತ್ತಿದ್ದೇವೆ’ ಎಂದರು.</p>