<p><strong>ಬೆಂಗಳೂರು</strong>: ರಾಜ್ಯದಲ್ಲಿ ಅದಿರಿನಂತೆ ಕಲ್ಲಿನ ಲೂಟಿಯೂ ನಡೆಯುತ್ತಿದ್ದು, ಗಣಿ ಗುತ್ತಿಗೆದಾರರಿಂದ ಅಧಿಕೃತವಾಗಿ ಬರಬೇಕಾದ ₹1,175 ಕೋಟಿ ರಾಜಧನ ಬಾಕಿ ವಸೂಲು ಮಾಡಲು ಸರ್ಕಾರ ವಿಫಲವಾಗಿದೆ.</p>.<p>2017– 18ನೇ ಸಾಲಿನವರೆಗೆ ಕಲ್ಲು ಗಣಿ ಗುತ್ತಿಗೆದಾರರಿಂದ ₹1,353 ಕೋಟಿ ರಾಜಧನ ಬಾಕಿ ಬರಬೇಕಿದ್ದು, ಇದರಲ್ಲಿ ₹178 ಕೋಟಿ ಮಾತ್ರ ವಸೂಲು ಮಾಡಲು ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಸಾಧ್ಯವಾಗಿದೆ.</p>.<p>ರಾಜ್ಯದಲ್ಲಿ ಈಗ 2,100 ಕಲ್ಲು ಗಣಿ ಗುತ್ತಿಗೆಗಳಲ್ಲಿ ಗಣಿಗಾರಿಕೆ ನಡೆಯುತ್ತಿದೆ. ಎರಡು ದಶಕಗಳಲ್ಲಿ ಈ ಗಣಿಗಳಿಂದ ಎಷ್ಟು ಪ್ರಮಾಣದ ಕಲ್ಲುಗಳನ್ನು ಹೊರತೆಗೆದು ಸಾಗಣೆ ಮಾಡಲಾಗಿದೆ ಎಂಬ ನಿಖರವಾದ ಮಾಹಿತಿ ಇಲಾಖೆ ಬಳಿ ಇಲ್ಲ. ಗುತ್ತಿಗೆದಾರರೂ ಲೆಕ್ಕ ಇಟ್ಟಿಲ್ಲ.</p>.<p>ಆದರೆ, ಇತ್ತೀಚೆಗೆ ಡ್ರೋನ್ ಮೂಲಕ ಸಮೀಕ್ಷೆ ನಡೆಸಲಾಗಿದ್ದು, ಭೂಮಿ ಮೇಲ್ಮೈ ಹಾಗೂ ಗಣಿ ಗುಂಡಿಗಳ ಗಾತ್ರಗಳನ್ನು ಆಧರಿಸಿ ಗಣಿಗಾರಿಕೆ ಮಾಡಿರುವ ಪ್ರಮಾಣ ಅಂದಾಜಿಸಿ, ಕಲ್ಲಿನ ಮೌಲ್ಯ ನಿರ್ಧರಿಸಲಾಗಿದೆ. ಇಲಾಖೆಯ ಈ ಲೆಕ್ಕಾಚಾರಕ್ಕೆ ಗುತ್ತಿಗೆದಾರರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.</p>.<p>ಗಣಿ ಮತ್ತು ಭೂವಿಜ್ಞಾನ ಇಲಾಖೆ ಪ್ರಕಾರ ಬರಬೇಕಾಗಿರುವ ರಾಜಧನದ ಬಾಕಿ ₹ 1,175 ಕೋಟಿ. ಗುತ್ತಿಗೆದಾರರ ಪ್ರಕಾರ ಬಾಕಿ ಕೊಡಬೇಕಾಗಿರುವುದು ₹ 600 ಕೋಟಿ. ಇದೇ ತಿಕ್ಕಾಟದಿಂದಾಗಿ ಬಾಕಿ ವಸೂಲು ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಮೂಲಗಳು ಸ್ಪಷ್ಟಪಡಿಸಿವೆ.</p>.<p>ಪ್ರತಿ ಟನ್ ಕಲ್ಲಿಗೆ 2000ನೇ ವರ್ಷದಲ್ಲಿ ₹15 ರಾಜಧನ ಇತ್ತು. 2008ರ ಆಸುಪಾಸಿನಲ್ಲಿ ₹30ಕ್ಕೆ ಏರಿತ್ತು. 2013ರ ಬಳಿಕ ಪ್ರತಿ ಟನ್ ಕಲ್ಲಿಗೆ ₹60 ನಿಗದಿಪಡಿಸಲಾಗಿದೆ. ಡ್ರೋನ್ ಸಮೀಕ್ಷೆ ಬಳಿಕ ಕಲ್ಲಿನ ರಾಜಧನವನ್ನು ಸಾರಾಸಗಟಾಗಿ ₹ 60ಕ್ಕೆ ನಿಗದಿಪಡಿಸಿದ್ದು, ಹಿಂದಿನ ವರ್ಷಗಳಿಗೂ ಸರಿಯಾದ ಕ್ರಮ ಅಲ್ಲ ಎಂಬುದು ಗುತ್ತಿಗೆದಾರರ ತಗಾದೆ.</p>.<p>ರಾಜಧನ ಬಾಕಿ ಪಾವತಿಸುವಂತೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಗುತ್ತಿಗೆದಾರರಿಗೆ ನೋಟಿಸ್ ಜಾರಿ ಮಾಡಿದ್ದರೂ ರಾಜಧನ ವಸೂಲು ಮಾಡಲು ಸಾಧ್ಯವಾಗುತ್ತಿಲ್ಲ. ಪ್ರತಿ ಟನ್ ಕಲ್ಲಿಗೆ ₹ 60 ಪಾವತಿಸಲು ಹಿಂದುಮುಂದು ನೋಡುವ ಗುತ್ತಿಗೆದಾರರು ಮೈಸೂರು ಮತ್ತು ಬೆಂಗಳೂರಿನಲ್ಲಿ ಪ್ರತಿ ಲೋಡ್ ಜಲ್ಲಿಯನ್ನು ₹ 15ಸಾವಿರಕ್ಕೆ ಮಾರುತ್ತಿದ್ದಾರೆ ಎಂದು ಇಲಾಖೆ ಮೂಲಗಳು ತಿಳಿಸಿವೆ.</p>.<p>ಬೆಂಗಳೂರಿನ ಬನ್ನೇರುಘಟ್ಟ, ತಾವರೆಕೆರೆ, ತುಮಕೂರು, ಕೋಲಾರ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಗಣಿಗಾರಿಕೆ ಎಗ್ಗಿಲ್ಲದೆ ಮುಂದುವರಿದಿದೆ. ಬೆಂಗಳೂರು ನಗರ ಜಿಲ್ಲೆಯಲ್ಲೇ ₹ 412 ಕೋಟಿ ರಾಜಧನ ಬಾಕಿ ಇದೆ. ಕೋಲಾರ ₹ 171 ಕೋಟಿ, ತುಮಕೂರು ಜಿಲ್ಲೆಯಲ್ಲಿ ₹ 146 ಕೋಟಿ ಬಾಕಿ ಬರಬೇಕಿದೆ.</p>.<p><strong>ಬೇನಾಮಿ ಹೆಸರಿನಲ್ಲಿ ಗಣಿಗಾರಿಕೆ</strong><br />ಆಡಳಿತ ಹಾಗೂ ವಿರೋಧ ಪಕ್ಷದ ಕೆಲವು ಶಾಸಕರು ಬೇನಾಮಿ ಮತ್ತು ಸಂಬಂಧಿಕರ ಹೆಸರಿನಲ್ಲಿ ಗಣಿಗಾರಿಕೆ ನಡೆಸುತ್ತಿರುವುದರಿಂದ ರಾಜಧನ ಬಾಕಿ ವಸೂಲಿಗೆ ತೊಂದರೆ ಆಗಿದೆ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಮೂಲಗಳು ತಿಳಿಸಿವೆ.</p>.<p>ಇದೇ ಕಾರಣದಿಂದಾಗಿ ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕಲು ಸಾಧ್ಯವಾಗುತ್ತಿಲ್ಲ. ರಾಜ್ಯ ಸರ್ಕಾರ ಈ ವಿಷಯದಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಇಲಾಖೆ ಮೂಲಗಳು ಸ್ಪಷ್ಟಪಡಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ರಾಜ್ಯದಲ್ಲಿ ಅದಿರಿನಂತೆ ಕಲ್ಲಿನ ಲೂಟಿಯೂ ನಡೆಯುತ್ತಿದ್ದು, ಗಣಿ ಗುತ್ತಿಗೆದಾರರಿಂದ ಅಧಿಕೃತವಾಗಿ ಬರಬೇಕಾದ ₹1,175 ಕೋಟಿ ರಾಜಧನ ಬಾಕಿ ವಸೂಲು ಮಾಡಲು ಸರ್ಕಾರ ವಿಫಲವಾಗಿದೆ.</p>.<p>2017– 18ನೇ ಸಾಲಿನವರೆಗೆ ಕಲ್ಲು ಗಣಿ ಗುತ್ತಿಗೆದಾರರಿಂದ ₹1,353 ಕೋಟಿ ರಾಜಧನ ಬಾಕಿ ಬರಬೇಕಿದ್ದು, ಇದರಲ್ಲಿ ₹178 ಕೋಟಿ ಮಾತ್ರ ವಸೂಲು ಮಾಡಲು ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಸಾಧ್ಯವಾಗಿದೆ.</p>.<p>ರಾಜ್ಯದಲ್ಲಿ ಈಗ 2,100 ಕಲ್ಲು ಗಣಿ ಗುತ್ತಿಗೆಗಳಲ್ಲಿ ಗಣಿಗಾರಿಕೆ ನಡೆಯುತ್ತಿದೆ. ಎರಡು ದಶಕಗಳಲ್ಲಿ ಈ ಗಣಿಗಳಿಂದ ಎಷ್ಟು ಪ್ರಮಾಣದ ಕಲ್ಲುಗಳನ್ನು ಹೊರತೆಗೆದು ಸಾಗಣೆ ಮಾಡಲಾಗಿದೆ ಎಂಬ ನಿಖರವಾದ ಮಾಹಿತಿ ಇಲಾಖೆ ಬಳಿ ಇಲ್ಲ. ಗುತ್ತಿಗೆದಾರರೂ ಲೆಕ್ಕ ಇಟ್ಟಿಲ್ಲ.</p>.<p>ಆದರೆ, ಇತ್ತೀಚೆಗೆ ಡ್ರೋನ್ ಮೂಲಕ ಸಮೀಕ್ಷೆ ನಡೆಸಲಾಗಿದ್ದು, ಭೂಮಿ ಮೇಲ್ಮೈ ಹಾಗೂ ಗಣಿ ಗುಂಡಿಗಳ ಗಾತ್ರಗಳನ್ನು ಆಧರಿಸಿ ಗಣಿಗಾರಿಕೆ ಮಾಡಿರುವ ಪ್ರಮಾಣ ಅಂದಾಜಿಸಿ, ಕಲ್ಲಿನ ಮೌಲ್ಯ ನಿರ್ಧರಿಸಲಾಗಿದೆ. ಇಲಾಖೆಯ ಈ ಲೆಕ್ಕಾಚಾರಕ್ಕೆ ಗುತ್ತಿಗೆದಾರರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.</p>.<p>ಗಣಿ ಮತ್ತು ಭೂವಿಜ್ಞಾನ ಇಲಾಖೆ ಪ್ರಕಾರ ಬರಬೇಕಾಗಿರುವ ರಾಜಧನದ ಬಾಕಿ ₹ 1,175 ಕೋಟಿ. ಗುತ್ತಿಗೆದಾರರ ಪ್ರಕಾರ ಬಾಕಿ ಕೊಡಬೇಕಾಗಿರುವುದು ₹ 600 ಕೋಟಿ. ಇದೇ ತಿಕ್ಕಾಟದಿಂದಾಗಿ ಬಾಕಿ ವಸೂಲು ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಮೂಲಗಳು ಸ್ಪಷ್ಟಪಡಿಸಿವೆ.</p>.<p>ಪ್ರತಿ ಟನ್ ಕಲ್ಲಿಗೆ 2000ನೇ ವರ್ಷದಲ್ಲಿ ₹15 ರಾಜಧನ ಇತ್ತು. 2008ರ ಆಸುಪಾಸಿನಲ್ಲಿ ₹30ಕ್ಕೆ ಏರಿತ್ತು. 2013ರ ಬಳಿಕ ಪ್ರತಿ ಟನ್ ಕಲ್ಲಿಗೆ ₹60 ನಿಗದಿಪಡಿಸಲಾಗಿದೆ. ಡ್ರೋನ್ ಸಮೀಕ್ಷೆ ಬಳಿಕ ಕಲ್ಲಿನ ರಾಜಧನವನ್ನು ಸಾರಾಸಗಟಾಗಿ ₹ 60ಕ್ಕೆ ನಿಗದಿಪಡಿಸಿದ್ದು, ಹಿಂದಿನ ವರ್ಷಗಳಿಗೂ ಸರಿಯಾದ ಕ್ರಮ ಅಲ್ಲ ಎಂಬುದು ಗುತ್ತಿಗೆದಾರರ ತಗಾದೆ.</p>.<p>ರಾಜಧನ ಬಾಕಿ ಪಾವತಿಸುವಂತೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಗುತ್ತಿಗೆದಾರರಿಗೆ ನೋಟಿಸ್ ಜಾರಿ ಮಾಡಿದ್ದರೂ ರಾಜಧನ ವಸೂಲು ಮಾಡಲು ಸಾಧ್ಯವಾಗುತ್ತಿಲ್ಲ. ಪ್ರತಿ ಟನ್ ಕಲ್ಲಿಗೆ ₹ 60 ಪಾವತಿಸಲು ಹಿಂದುಮುಂದು ನೋಡುವ ಗುತ್ತಿಗೆದಾರರು ಮೈಸೂರು ಮತ್ತು ಬೆಂಗಳೂರಿನಲ್ಲಿ ಪ್ರತಿ ಲೋಡ್ ಜಲ್ಲಿಯನ್ನು ₹ 15ಸಾವಿರಕ್ಕೆ ಮಾರುತ್ತಿದ್ದಾರೆ ಎಂದು ಇಲಾಖೆ ಮೂಲಗಳು ತಿಳಿಸಿವೆ.</p>.<p>ಬೆಂಗಳೂರಿನ ಬನ್ನೇರುಘಟ್ಟ, ತಾವರೆಕೆರೆ, ತುಮಕೂರು, ಕೋಲಾರ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಗಣಿಗಾರಿಕೆ ಎಗ್ಗಿಲ್ಲದೆ ಮುಂದುವರಿದಿದೆ. ಬೆಂಗಳೂರು ನಗರ ಜಿಲ್ಲೆಯಲ್ಲೇ ₹ 412 ಕೋಟಿ ರಾಜಧನ ಬಾಕಿ ಇದೆ. ಕೋಲಾರ ₹ 171 ಕೋಟಿ, ತುಮಕೂರು ಜಿಲ್ಲೆಯಲ್ಲಿ ₹ 146 ಕೋಟಿ ಬಾಕಿ ಬರಬೇಕಿದೆ.</p>.<p><strong>ಬೇನಾಮಿ ಹೆಸರಿನಲ್ಲಿ ಗಣಿಗಾರಿಕೆ</strong><br />ಆಡಳಿತ ಹಾಗೂ ವಿರೋಧ ಪಕ್ಷದ ಕೆಲವು ಶಾಸಕರು ಬೇನಾಮಿ ಮತ್ತು ಸಂಬಂಧಿಕರ ಹೆಸರಿನಲ್ಲಿ ಗಣಿಗಾರಿಕೆ ನಡೆಸುತ್ತಿರುವುದರಿಂದ ರಾಜಧನ ಬಾಕಿ ವಸೂಲಿಗೆ ತೊಂದರೆ ಆಗಿದೆ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಮೂಲಗಳು ತಿಳಿಸಿವೆ.</p>.<p>ಇದೇ ಕಾರಣದಿಂದಾಗಿ ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕಲು ಸಾಧ್ಯವಾಗುತ್ತಿಲ್ಲ. ರಾಜ್ಯ ಸರ್ಕಾರ ಈ ವಿಷಯದಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಇಲಾಖೆ ಮೂಲಗಳು ಸ್ಪಷ್ಟಪಡಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>