ಏಕಸದಸ್ಯ ನ್ಯಾಯಪೀಠದ ಆದೇಶದಲ್ಲಿ ಮಧ್ಯಪ್ರವೇಶ ಮಾಡಲು ನಿರಾಕರಿಸಿರುವ ವಿಭಾಗೀಯ ನ್ಯಾಯಪೀಠ, ‘ಹಿಂದೂ ವಿವಾಹ ಕಾಯ್ದೆ–1955ರ ಕಲಂ 17ರ ಪ್ರಕಾರ ದ್ವಿಪತ್ನಿತ್ವ ಅಪರಾಧ. ಕರ್ನಾಟಕ ನಾಗರಿಕ ಸೇವಾ ನಿಯಮಗಳ ಪ್ರಕಾರ ಸರ್ಕಾರಿ ನೌಕರನಿಗೆ ಕಾನೂನು ಬದ್ಧವಾಗಿ ವಿವಾಹವಾದ ಪತ್ನಿಗೆ ಮಾತ್ರವೇ ಕುಟುಂಬದ ಪಿಂಚಣಿ ಸಂದಾಯವಾಗುತ್ತದೆ. ಆದ್ದರಿಂದ, ನಿಯಮಾನುಸಾರ ಕೌಟುಂಬಿಕ ಪಿಂಚಣಿಯನ್ನು ಕಾನೂನುಬದ್ಧ ಪತ್ನಿಗೆ ನೀಡಲಾಗುತ್ತದೆ’ ಎಂದು ವಿವರಿಸಿದೆ.