‘ಸದ್ಯ ಸುರಿಯುತ್ತಿರುವ ಮಳೆ ಪ್ರಮಾಣ, ಜಲಾಶಯದಲ್ಲಿ ಸಂಗ್ರಹವಾಗುವ ನೀರಿನ ಮಟ್ಟ, ಒಳಹರಿವು ಮತ್ತು ಹೊರ ಹರಿವಿನ ಸಾಧ್ಯತೆ
ಬಗ್ಗೆ ಸಂಪೂರ್ಣ ಅವಲೋಕನ ಮಾಡಲಾಗುತ್ತಿದ್ದು, ನಿತ್ಯ ಕೇಂದ್ರ ಕಚೇರಿ ಮಾಹಿತಿ ಪಡೆಯುತ್ತಿದೆ. ಇದರ ಮೇಲ್ವಿಚಾರಣೆಗಾಗಿ ಹೆಚ್ಚುವರಿ ಮುಖ್ಯ ಎಂಜಿನಿಯರ್ ಚಂದ್ರಶೇಖರ್ ಅವರನ್ನು ಕೆಪಿಸಿಯ ವ್ಯವಸ್ಥಾಪಕ ನಿರ್ದೇಶಕ ಪೊನ್ನುರಾಜ್ ನೇಮಿಸಿದ್ದಾರೆ’ ಎಂದು ಚೈತನ್ಯ ಪ್ರಭು ಮಾಹಿತಿ ನೀಡಿದರು.