‘ಇಲ್ಲಿಗೆ ತರುವ ವಾಹನಗಳಲ್ಲಿ ಕಾರುಗಳೇ ಅಧಿಕ ಪ್ರಮಾಣದಲ್ಲಿರುತ್ತವೆ. ನಾವು ಇಲ್ಲಿ ಶೆಡ್ನಂತೆ ಆಶ್ರಯ ನೀಡುವುದು, ಸ್ಥಳ ಬಾಡಿಗೆ ಪಡೆಯುವುದು, ಹರಾಜಿಗೆ ವ್ಯವಸ್ಥೆ ಮಾಡುವುದು ಬಿಟ್ಟರೆ ಬೇರೇನನ್ನೂ ಮಾಡುವುದಿಲ್ಲ. ವ್ಯವಹಾರವೆಲ್ಲವೂ ಹಣಕಾಸು ಸಂಸ್ಥೆಗಳು, ಖರೀದಿದಾರರಿಗೆ ಬಿಟ್ಟದ್ದು. ರೈತರೊಂದಿಗೆ ನಮಗೆ ನೇರ ಸಂಪರ್ಕವೇ ಇಲ್ಲ. ಹರಾಜಿಗೆ ಹಾಕುವಾಗಲೂ ಸಹ ಮೂಲ ಮಾಲೀಕರು ಮತ್ತೆ ಪಡೆಯುವುದಕ್ಕೆ ಆಸಕ್ತಿ ತೋರಿಸಿದರೆ ಅವರಿಗೇ ಅದನ್ನು ನೀಡಲಾಗುತ್ತದೆ, ನಗರಕ್ಕಿಂತಲೂ ಗ್ರಾಮೀಣ ಭಾಗಕ್ಕೇ ಈ ವಾಹನಗಳು ಹೋಗಬೇಕು ಎಂಬ ಆಶಯ ನಮ್ಮದು ಎಂದುಸಂಸ್ಥೆಯ ಸ್ಥಳೀಯ ಉಸ್ತುವಾರಿ ಕೆ.ಎಚ್.ಮಂಜುನಾಥ್ ತಿಳಿಸಿದರು.