ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ಧರಾಮ ಸ್ವಾಮೀಜಿ ಪೀಠಾರೋಹಣ ನಾಳೆ

Last Updated 27 ಅಕ್ಟೋಬರ್ 2018, 20:16 IST
ಅಕ್ಷರ ಗಾತ್ರ

ಗದಗ: ಇಲ್ಲಿನ ತೋಂಟದಾರ್ಯ ಮಠದ 20ನೇ ಪೀಠಾಧಿಪತಿ, ಬೆಳಗಾವಿ ನಾಗನೂರು ರುದ್ರಾಕ್ಷಿ ಮಠದ ಸಿದ್ಧರಾಮ ಸ್ವಾಮೀಜಿ ಅವರ ಪೀಠಾರೋಹಣ ಸಮಾರಂಭ ಸೋಮವಾರ (ಅ.29) ನಡೆಯಲಿದೆ.

ಅ.23ರಂದು ಮಠದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ನ.12ರಂದು ಪೀಠಾರೋಹಣ ಸಮಾರಂಭ ನಡೆಸುವ ನಿರ್ಧಾರವನ್ನು ಕೈಗೊಳ್ಳಲಾಗಿತ್ತು. ಆದರೆ, ಈಗ ದಿನಾಂಕ ದಿಢೀರ್‌ ಬದಲಿಸಲಾಗಿದೆ. ಇದಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ.

ಮಠದ ಆಡಳಿತಾಧಿಕಾರಿ ಎಸ್‌.ಎಸ್‌. ಪಟ್ಟಣಶೆಟ್ಟಿ ಅವರು ಪೀಠಾರೋಹಣ ದಿನಾಂಕ ಬದಲಾಗಿರುವುದನ್ನು ತಿಳಿಸಿದರು.

‘ಲಿಂಗೈಕ್ಯರಾದ ಸಿದ್ಧಲಿಂಗ ಸ್ವಾಮೀಜಿ ಅವರ ಪುಣ್ಯಸ್ಮರಣೋತ್ಸವ ಪೂರ್ವನಿಗದಿಯಂತೆ ನ.11 ರಂದೇ ನಡೆಯಲಿದೆ. ನ.12ರಂದು ಸಿದ್ಧರಾಮ ಸ್ವಾಮೀಜಿ ಅವರಿಗೆ ಗುರುನಮನ ಕಾರ್ಯಕ್ರಮ ನಡೆಯಲಿದೆ’ ಎಂದರು.

‘ಮಠದ ಪರಂಪರೆ, ಧಾರ್ಮಿಕ ವಿಧಿವಿಧಾನಗಳ ಹಿನ್ನೆಲೆಯಲ್ಲಿ ಪೀಠಾರೋಹಣ ದಿನಾಂಕ ಬದಲಿಸಲಾಗಿದೆ. ಪೀಠಾರೋಹಣದ ನಂತರ ಸಿದ್ಧರಾಮ ಸ್ವಾಮೀಜಿ ಅವರು ಮೂಲ ಮಠವಾದ ಎಡೆಯೂರು ಸಿದ್ಧಲಿಂಗೇಶ್ವರ ಮಠಕ್ಕೆ ಭೇಟಿ ನೀಡಲಿದ್ದಾರೆ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಭಾನುವಾರ ಸಂಜೆ 4ಕ್ಕೆ ನೂತನ ಪೀಠಾಧಿಪತಿಗಳ ಪುರಪ್ರವೇಶ ನಡೆಯಲಿದೆ. ಸೋಮವಾರ ಬೆಳಿಗ್ಗೆ 7ರಿಂದ ಪೀಠಾರೋಹಣದ ವಿಧಿ
ವಿಧಾನಗಳು ಪ್ರಾರಂಭವಾಗಲಿವೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT