‘ಆರ್. ಅಶೋಕ ಕಾರ್ಯ ವೈಖರಿ ಬೇರೆ, ನನ್ನ ಕಾರ್ಯವೈಖರಿ ಬೇರೆ. ನಾನು ತೆಗೆದುಕೊಂಡಂತ ರಿಸ್ಕ್ ಯಾರೂ ತೆಗೆದುಕೊಂಡಿಲ್ಲ ಬಿಡಿ. ಯಾರು ಎಲ್ಲಿ ಒಳ ಒಪ್ಪಂದ ಮಾಡಿಕೊಂಡಿದ್ದಾರೋ ನನಗೆ ಗೊತ್ತಿಲ್ಲ. ಪಕ್ಷ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಇಂತಹ ಸ್ಥಿತಿಯಲ್ಲಿ ಅದನ್ನು ಸರಿಪಡಿಸುವ ಕೆಲಸ ಮಾಡಲು ಸಿದ್ಧನಿದ್ದೇನೆ. ನನ್ನಷ್ಟು ಅರ್ಹ ಬೇರೆ ಯಾರೂ ಇಲ್ಲ. ಬಕೆಟ್ ಹಿಡಿದು ಗೊತ್ತಿಲ್ಲ. ಎಲ್ಲರನ್ನೂ ಒಂದುಗೂಡಿಸಿಕೊಂಡು ಹೋಗುತ್ತೇನೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.