<p><strong>ಬೆಂಗಳೂರು</strong>: ‘ತೈಲೇಶ್ವರ ಗಾಣಿಗರ ಮಹಾಸಂಸ್ಥಾನ ಮಠಕ್ಕೆ ಹಿಂದಿನ ಸರ್ಕಾರಗಳು ₹8.50ಕೋಟಿ ಅನುದಾನ ಮಂಜೂರು ಮಾಡಿವೆ. ಅನುದಾನ ಬಳಕೆಗೆ ಲೆಕ್ಕಪತ್ರ ನೀಡದೇ ಇರುವ ಕಾರಣಕ್ಕೇ, ಬಸವರಾಜ ಬೊಮ್ಮಾಯಿ ಅವರ ಸರ್ಕಾರವೇ ಮಠಕ್ಕೆ ಮಂಜೂರಾಗಿದ್ದ ಅನುದಾನದಲ್ಲಿ ₹1.50 ಕೋಟಿ ತಡೆಹಿಡಿದಿತ್ತು’ ಎಂದು ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ರವಿಕುಮಾರ್ ಹೇಳಿದರು.</p>.<p>ನಿಗಮದ ಕಚೇರಿಯಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬೊಮ್ಮಾಯಿ ಅವರ ಸರ್ಕಾರವೇ ₹1.50 ಕೋಟಿ ತಡೆಹಿಡಿದಿತ್ತು ಎಂಬುದನ್ನು ಪೂರ್ಣಾನಂದಪುರಿ ಸ್ವಾಮೀಜಿ ಮುಚ್ಚಿಡುತ್ತಿದ್ದಾರೆ. ಆ ಹಣ ಬಿಡುಗಡೆ ಮಾಡಲು ಸಚಿವ ಶಿವರಾಜ ತಂಗಡಗಿ ಅವರು ಕಮಿಷನ್ ಕೇಳುತ್ತಿದ್ದಾರೆ ಎಂದು ಸ್ವಾಮೀಜಿ ಸುಳ್ಳು–ಸುಳ್ಳು ಆರೋಪ ಮಾಡುತ್ತಿದ್ದಾರೆ’ ಎಂದರು.</p>.<p>‘ಯಡಿಯೂರಪ್ಪ ಅವರ ಮುಖ್ಯಮಂತ್ರಿ ಆಗಿದ್ದಾಗ ಮಠಕ್ಕೆ ₹2 ಕೋಟಿ ಅನುದಾನ ಘೋಷಿಸಿ, ಮಂಜೂರು ಮಾಡಿಸಿದ್ದರು. ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆಗಿದ್ದಾಗ ಒಮ್ಮೆ ₹3 ಕೋಟಿ ಘೋಷಿಸಿ, ಬಿಡುಗಡೆ ಮಾಡಿಸಿದ್ದರು. ಮತ್ತೆ ₹5 ಕೋಟಿ ಘೋಷಿಸಿದ್ದರು. ಆದರೆ, ಅನುದಾನ ಇಲ್ಲದ ಕಾರಣಕ್ಕೆ ₹3.50 ಕೋಟಿ ಬಿಡುಗಡೆ ಮಾಡುವಂತೆ ಸೂಚಿಸಿದ್ದರು’ ಎಂದು ಮಾಹಿತಿ ನೀಡಿದರು.</p>.<p>‘ಅದರಲ್ಲಿ ₹2 ಕೋಟಿ ಬಿಡುಗಡೆ ಆಗಿತ್ತು. ಅದರಂತೆ ಮಠಕ್ಕೆ ಒಟ್ಟು ₹7 ಕೋಟಿ ಬಿಡುಗಡೆಯಾಗಿತ್ತು. ಆದರೆ, ಅದ್ಯಾವುದಕ್ಕೂ ಸರಿಯಾದ ಲೆಕ್ಕಪತ್ರಗಳನ್ನು ಮಠ ನೀಡಿಲ್ಲ. ವಿದ್ಯಾರ್ಥಿನಿಲಯಕ್ಕೆ ₹3.50 ಕೋಟಿ ವೆಚ್ಚವಾಗುತ್ತದೆ ಎಂದು ಮಠವು ತಿಳಿಸಿತ್ತು. ನಿಯಮಗಳ ಪ್ರಕಾರ ಒಟ್ಟು ವೆಚ್ಚದ ಶೇ75ರಷ್ಟನ್ನು ಸರ್ಕಾರ ಒದಗಿಸಿದರೆ, ಉಳಿದಿದ್ದನ್ನು ಮಠವೇ ಭರಿಸಬೇಕು. ಹೀಗಾಗಿಯೂ ಮಠಕ್ಕೆ ₹1.50 ಕೋಟಿ ಬಿಡುಗಡೆ ಸಾಧ್ಯವಿಲ್ಲ ಎಂದು 2022ರಲ್ಲೇ ಆರ್ಥಿಕ ಇಲಾಖೆ ಸರ್ಕಾರಕ್ಕೆ ಟಿಪ್ಪಣಿ ಬರೆದಿತ್ತು’ ಎಂದು ವಿವರಿಸಿದರು.</p>.<p>‘ಈ ಎಲ್ಲ ಅಂಶವನ್ನು ಮುಚ್ಚಿಡುತ್ತಿರುವ ಸ್ವಾಮೀಜಿ ಅವರು ತಮ್ಮ ಪೂರ್ವಾಶ್ರಮದ ರಾಜಕೀಯದಲ್ಲಿ ಮಾಡಿದಂತೆಯೇ, ಈಗಲೂ ರಾಜಕಾರಣ ಮಾಡುತ್ತಿದ್ದಾರೆ. ಬಿಜೆಪಿಯ ವಕ್ತಾರರಂತೆ ಮಾತನಾಡುತ್ತಿದ್ದಾರೆ. ಸ್ವಾಮೀಜಿ ಆಗಿ ಇರಲು ಅವರಿಗೆ ಸಾಧ್ಯವಿಲ್ಲದೇ ಇದ್ದರೆ ಖಾವಿ ತ್ಯಜಿಸಿ, ಮತ್ತೆ ಖಾದಿ ತೊಡಲಿ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ‘ತೈಲೇಶ್ವರ ಗಾಣಿಗರ ಮಹಾಸಂಸ್ಥಾನ ಮಠಕ್ಕೆ ಹಿಂದಿನ ಸರ್ಕಾರಗಳು ₹8.50ಕೋಟಿ ಅನುದಾನ ಮಂಜೂರು ಮಾಡಿವೆ. ಅನುದಾನ ಬಳಕೆಗೆ ಲೆಕ್ಕಪತ್ರ ನೀಡದೇ ಇರುವ ಕಾರಣಕ್ಕೇ, ಬಸವರಾಜ ಬೊಮ್ಮಾಯಿ ಅವರ ಸರ್ಕಾರವೇ ಮಠಕ್ಕೆ ಮಂಜೂರಾಗಿದ್ದ ಅನುದಾನದಲ್ಲಿ ₹1.50 ಕೋಟಿ ತಡೆಹಿಡಿದಿತ್ತು’ ಎಂದು ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ರವಿಕುಮಾರ್ ಹೇಳಿದರು.</p>.<p>ನಿಗಮದ ಕಚೇರಿಯಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬೊಮ್ಮಾಯಿ ಅವರ ಸರ್ಕಾರವೇ ₹1.50 ಕೋಟಿ ತಡೆಹಿಡಿದಿತ್ತು ಎಂಬುದನ್ನು ಪೂರ್ಣಾನಂದಪುರಿ ಸ್ವಾಮೀಜಿ ಮುಚ್ಚಿಡುತ್ತಿದ್ದಾರೆ. ಆ ಹಣ ಬಿಡುಗಡೆ ಮಾಡಲು ಸಚಿವ ಶಿವರಾಜ ತಂಗಡಗಿ ಅವರು ಕಮಿಷನ್ ಕೇಳುತ್ತಿದ್ದಾರೆ ಎಂದು ಸ್ವಾಮೀಜಿ ಸುಳ್ಳು–ಸುಳ್ಳು ಆರೋಪ ಮಾಡುತ್ತಿದ್ದಾರೆ’ ಎಂದರು.</p>.<p>‘ಯಡಿಯೂರಪ್ಪ ಅವರ ಮುಖ್ಯಮಂತ್ರಿ ಆಗಿದ್ದಾಗ ಮಠಕ್ಕೆ ₹2 ಕೋಟಿ ಅನುದಾನ ಘೋಷಿಸಿ, ಮಂಜೂರು ಮಾಡಿಸಿದ್ದರು. ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆಗಿದ್ದಾಗ ಒಮ್ಮೆ ₹3 ಕೋಟಿ ಘೋಷಿಸಿ, ಬಿಡುಗಡೆ ಮಾಡಿಸಿದ್ದರು. ಮತ್ತೆ ₹5 ಕೋಟಿ ಘೋಷಿಸಿದ್ದರು. ಆದರೆ, ಅನುದಾನ ಇಲ್ಲದ ಕಾರಣಕ್ಕೆ ₹3.50 ಕೋಟಿ ಬಿಡುಗಡೆ ಮಾಡುವಂತೆ ಸೂಚಿಸಿದ್ದರು’ ಎಂದು ಮಾಹಿತಿ ನೀಡಿದರು.</p>.<p>‘ಅದರಲ್ಲಿ ₹2 ಕೋಟಿ ಬಿಡುಗಡೆ ಆಗಿತ್ತು. ಅದರಂತೆ ಮಠಕ್ಕೆ ಒಟ್ಟು ₹7 ಕೋಟಿ ಬಿಡುಗಡೆಯಾಗಿತ್ತು. ಆದರೆ, ಅದ್ಯಾವುದಕ್ಕೂ ಸರಿಯಾದ ಲೆಕ್ಕಪತ್ರಗಳನ್ನು ಮಠ ನೀಡಿಲ್ಲ. ವಿದ್ಯಾರ್ಥಿನಿಲಯಕ್ಕೆ ₹3.50 ಕೋಟಿ ವೆಚ್ಚವಾಗುತ್ತದೆ ಎಂದು ಮಠವು ತಿಳಿಸಿತ್ತು. ನಿಯಮಗಳ ಪ್ರಕಾರ ಒಟ್ಟು ವೆಚ್ಚದ ಶೇ75ರಷ್ಟನ್ನು ಸರ್ಕಾರ ಒದಗಿಸಿದರೆ, ಉಳಿದಿದ್ದನ್ನು ಮಠವೇ ಭರಿಸಬೇಕು. ಹೀಗಾಗಿಯೂ ಮಠಕ್ಕೆ ₹1.50 ಕೋಟಿ ಬಿಡುಗಡೆ ಸಾಧ್ಯವಿಲ್ಲ ಎಂದು 2022ರಲ್ಲೇ ಆರ್ಥಿಕ ಇಲಾಖೆ ಸರ್ಕಾರಕ್ಕೆ ಟಿಪ್ಪಣಿ ಬರೆದಿತ್ತು’ ಎಂದು ವಿವರಿಸಿದರು.</p>.<p>‘ಈ ಎಲ್ಲ ಅಂಶವನ್ನು ಮುಚ್ಚಿಡುತ್ತಿರುವ ಸ್ವಾಮೀಜಿ ಅವರು ತಮ್ಮ ಪೂರ್ವಾಶ್ರಮದ ರಾಜಕೀಯದಲ್ಲಿ ಮಾಡಿದಂತೆಯೇ, ಈಗಲೂ ರಾಜಕಾರಣ ಮಾಡುತ್ತಿದ್ದಾರೆ. ಬಿಜೆಪಿಯ ವಕ್ತಾರರಂತೆ ಮಾತನಾಡುತ್ತಿದ್ದಾರೆ. ಸ್ವಾಮೀಜಿ ಆಗಿ ಇರಲು ಅವರಿಗೆ ಸಾಧ್ಯವಿಲ್ಲದೇ ಇದ್ದರೆ ಖಾವಿ ತ್ಯಜಿಸಿ, ಮತ್ತೆ ಖಾದಿ ತೊಡಲಿ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>