<p><strong>ಮಂಗಳೂರು</strong>: ಎರಡೋ ಮೂರೋ ರಸ್ತೆಗಳು ಸೇರುವಲ್ಲಿ ಏಕಾಏಕಿ ಧ್ವನಿವರ್ಧಕ ಕಂಡುಬರುತ್ತದೆ. ಕ್ರಾಂತಿಗೀತೆ ಅಥವಾ ಭಾವಗಾನ ಕೇಳತೊಡಗುತ್ತದೆ. ಸ್ವಲ್ಪ ಹೊತ್ತಿನಲ್ಲಿ ಜನರು ಸೇರುತ್ತಾರೆ. ಹಾಡು ಮುಗಿಯುವುದರೊಳಗೆ ಪ್ರಶ್ನೆಗಳು ಕೇಳಿಬರುತ್ತವೆ, ಸಂವಾದ ನಡೆಯುತ್ತದೆ.</p>.<p>ಮಂಗಳೂರಿನ ಶಾಲಾ ಶಿಕ್ಷಕರಾಗಿರುವ ಅಕ್ಷತಾ ಕುಡ್ಲ ಮತ್ತು ಚೇತನ್ ಕೊಪ್ಪ ದಂಪತಿ ಆರಂಭಿಸಿರುವ ‘ಆನ್ ದ ವೇ’ ಹೆಸರಿನ ಶಿಕ್ಷಣ ಅಭಿಯಾನ ಆರಂಭವಾಗುವುದು ಹೀಗೆ. ಮಕ್ಕಳ ಬದುಕು ಪಠ್ಯದಲ್ಲೇ ಕಳೆದುಹೋಗಬಾರದು, ಪಠ್ಯವನ್ನು ಪೂರಕವಾಗಿ ಬಳಸಿಕೊಂಡು ಜೀವನ ಮುನ್ನಡೆಸಲು ದಾರಿಯೊಂದು ಇದೆ ಎಂಬುದನ್ನು ಪಾಲಕರು ಮತ್ತು ಶಿಕ್ಷಕರಿಗೆ ಮನವರಿಕೆ ಮಾಡುವುದಕ್ಕಾಗಿ ಆರಂಭಿಸಿರುವ ಚಾರಣದ ಅರಂಭಿಕ ಘಟ್ಟ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಗುತ್ತಿದೆ.</p>.<p>ಚೇತನ್ ಕೊಪ್ಪ ಅವರು ದಕ್ಷಿಣ ಕನ್ನಡದ ಉಳಾಯಿಬೆಟ್ಟು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕನ್ನಡ ಶಿಕ್ಷಕ. ಅಕ್ಷತಾ, ಮಂಗಳೂರು ನಗರದ ಸೇಂಟ್ ಅಲೋಶಿಯಸ್ ಗೊನ್ಜಾಗ ಶಾಲೆಯ ಕನ್ನಡ ಶಿಕ್ಷಕಿ. ಪಚ್ಚನಾಡಿಯಲ್ಲಿ ವಾಸವಾಗಿರುವ ಈ ಜೋಡಿಯ ಅಭಿಯಾನ, ಗಾಂಧಿಜಯಂತಿಯ ದಿನ ಉಳಾಯಿಬೆಟ್ಟುವಿನಲ್ಲಿ ಆರಂಭಗೊಂಡಿದ್ದು ಜಿಲ್ಲೆಯ ವಿವಿಧ ಭಾಗಗಳಲ್ಲಿ ಈಗಾಗಲೇ ಸಂವಾದ ನಡೆಸಲಾಗಿದೆ.</p>.<p>‘ಇಂದಿನ ಶಿಕ್ಷಣ ಪದ್ಧತಿ ವಿಚಿತ್ರವಾಗಿದೆ. ಕನ್ನಡದಲ್ಲಿ 100ಕ್ಕೆ 100 ಅಂಕ ಪಡೆದವರು ಸಾಹಿತಿಯಾಗುವುದಿಲ್ಲ. ವಿಜ್ಞಾನ ವಿಷಯದಲ್ಲೂ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದವರು ವಿಜ್ಞಾನಿ ಆಗುವುದಿಲ್ಲ. ಪಠ್ಯವು ಅನುಭವಕ್ಕೆ ಬಾರದೆ ಅಂಕ ಗಳಿಸುವ ವಿಧಾನ ಮಾತ್ರ ಆಗಿರುವುದೇ ಇದಕ್ಕೆ ಕಾರಣ. ಈ ಹಿನ್ನೆಲೆಯಲ್ಲಿ ಶಿಕ್ಷಣದ ಮೂಲಕ ಮಕ್ಕಳನ್ನು ವಿಭಿನ್ನವಾಗಿ ಬೆಳೆಸಲು ಪ್ರೇರೇಪಿಸುವುದೇ ಅಭಿಯಾನದ ಉದ್ದೇಶ’ ಎನ್ನುತ್ತಾರೆ ಈ ದಂಪತಿ.</p>.<p>ಸರ್ಕಾರಿ ಶಾಲೆಯ ವಠಾರದಲ್ಲಿ ಅಥವಾ ಊರ ಪ್ರಮುಖ ಪೇಟೆಯಲ್ಲಿ ಹಾಡು, ಮಿಮಿಕ್ರಿ ಮೂಲಕ ಜನರನ್ನು ಸೇರಿಸಿ ಶಿಕ್ಷಣಕ್ಕೆ ಸಂಬಂಧಿಸಿ ಅವರ ಅನಿಸಿಕೆಯನ್ನು ಕೇಳಿ ಪರಿವರ್ತನೆಗಾಗಿ ಪ್ರೇರೇಪಿಸುವುದು ಕಾರ್ಯಕ್ರಮದ ಪ್ರಮುಖ ಗುರಿ. ದಸರಾ ರಜೆಯನ್ನು ಪೂರ್ತಿಯಾಗಿ ಈ ಕಾರ್ಯಕ್ರಮಕ್ಕಾಗಿ ಬಳಸಿಕೊಳ್ಳಲು ಮುಂದಾಗಿರುವ ದಂಪತಿ, ರಾಜ್ಯದ ವಿವಿಧ ಕಡೆಗಳಲ್ಲಿ ಸುತ್ತಾಡಲಿದ್ದಾರೆ. ದಸರಾ ನಂತರ ರಜಾ ದಿನಗಳಲ್ಲೂ ಕೆಲವೊಮ್ಮೆ ವೃತ್ತಿಗೆ ರಜೆ ಹಾಕಿಯೂ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ‘ಪ್ರಜಾವಾಣಿ’ಗೆ ಅವರು ತಿಳಿಸಿದರು.</p>.<p>‘7 ವರ್ಷಗಳಿಂದ ಸರ್ಕಾರಿ ಶಾಲೆಯಲ್ಲಿ ಶಿಕ್ಷಕನಾಗಿದ್ದೇನೆ. ಅದಕ್ಕೂ ಮೊದಲು 7 ವರ್ಷ ಅನೌಪಚಾರಿಕ ಶಿಕ್ಷಣ ಸಂಸ್ಥೆಯಾದ ‘ಸ್ವರೂಪ ಅಧ್ಯಯನ ಕೇಂದ್ರ’ದಲ್ಲಿದ್ದೆ. ಶಿಕ್ಷಣ ವ್ಯವಸ್ಥೆಗೆ ಹೊಸ ಆಯಾಮ<br />ಬಯಸುವ ಇಂಥ ಅಭಿಯಾನವೊಂದರ ಅಗತ್ಯ ಇದೆ ಎಂದು ತೋಚಿತ್ತು. ಇದು ಪೋಷಕರ ಮನಸ್ಸಿನ ಮೇಲೆ ಪರಿಣಾಮ ಬೀರಿ, ಬದಲಾವಣೆ ಬಯಸಿದರೆ, ಸರ್ಕಾರದ ಮೇಲೆ ಪ್ರಭಾವ ಬೀರುವ ಭರವಸೆ ಇದೆ. ಅಷ್ಟಾದರೆ ನಮ್ಮ ಕಾರ್ಯ ಸಾರ್ಥಕ’ ಎಂದು ಚೇತನ್ ವಿವರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಗಳೂರು</strong>: ಎರಡೋ ಮೂರೋ ರಸ್ತೆಗಳು ಸೇರುವಲ್ಲಿ ಏಕಾಏಕಿ ಧ್ವನಿವರ್ಧಕ ಕಂಡುಬರುತ್ತದೆ. ಕ್ರಾಂತಿಗೀತೆ ಅಥವಾ ಭಾವಗಾನ ಕೇಳತೊಡಗುತ್ತದೆ. ಸ್ವಲ್ಪ ಹೊತ್ತಿನಲ್ಲಿ ಜನರು ಸೇರುತ್ತಾರೆ. ಹಾಡು ಮುಗಿಯುವುದರೊಳಗೆ ಪ್ರಶ್ನೆಗಳು ಕೇಳಿಬರುತ್ತವೆ, ಸಂವಾದ ನಡೆಯುತ್ತದೆ.</p>.<p>ಮಂಗಳೂರಿನ ಶಾಲಾ ಶಿಕ್ಷಕರಾಗಿರುವ ಅಕ್ಷತಾ ಕುಡ್ಲ ಮತ್ತು ಚೇತನ್ ಕೊಪ್ಪ ದಂಪತಿ ಆರಂಭಿಸಿರುವ ‘ಆನ್ ದ ವೇ’ ಹೆಸರಿನ ಶಿಕ್ಷಣ ಅಭಿಯಾನ ಆರಂಭವಾಗುವುದು ಹೀಗೆ. ಮಕ್ಕಳ ಬದುಕು ಪಠ್ಯದಲ್ಲೇ ಕಳೆದುಹೋಗಬಾರದು, ಪಠ್ಯವನ್ನು ಪೂರಕವಾಗಿ ಬಳಸಿಕೊಂಡು ಜೀವನ ಮುನ್ನಡೆಸಲು ದಾರಿಯೊಂದು ಇದೆ ಎಂಬುದನ್ನು ಪಾಲಕರು ಮತ್ತು ಶಿಕ್ಷಕರಿಗೆ ಮನವರಿಕೆ ಮಾಡುವುದಕ್ಕಾಗಿ ಆರಂಭಿಸಿರುವ ಚಾರಣದ ಅರಂಭಿಕ ಘಟ್ಟ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಗುತ್ತಿದೆ.</p>.<p>ಚೇತನ್ ಕೊಪ್ಪ ಅವರು ದಕ್ಷಿಣ ಕನ್ನಡದ ಉಳಾಯಿಬೆಟ್ಟು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕನ್ನಡ ಶಿಕ್ಷಕ. ಅಕ್ಷತಾ, ಮಂಗಳೂರು ನಗರದ ಸೇಂಟ್ ಅಲೋಶಿಯಸ್ ಗೊನ್ಜಾಗ ಶಾಲೆಯ ಕನ್ನಡ ಶಿಕ್ಷಕಿ. ಪಚ್ಚನಾಡಿಯಲ್ಲಿ ವಾಸವಾಗಿರುವ ಈ ಜೋಡಿಯ ಅಭಿಯಾನ, ಗಾಂಧಿಜಯಂತಿಯ ದಿನ ಉಳಾಯಿಬೆಟ್ಟುವಿನಲ್ಲಿ ಆರಂಭಗೊಂಡಿದ್ದು ಜಿಲ್ಲೆಯ ವಿವಿಧ ಭಾಗಗಳಲ್ಲಿ ಈಗಾಗಲೇ ಸಂವಾದ ನಡೆಸಲಾಗಿದೆ.</p>.<p>‘ಇಂದಿನ ಶಿಕ್ಷಣ ಪದ್ಧತಿ ವಿಚಿತ್ರವಾಗಿದೆ. ಕನ್ನಡದಲ್ಲಿ 100ಕ್ಕೆ 100 ಅಂಕ ಪಡೆದವರು ಸಾಹಿತಿಯಾಗುವುದಿಲ್ಲ. ವಿಜ್ಞಾನ ವಿಷಯದಲ್ಲೂ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದವರು ವಿಜ್ಞಾನಿ ಆಗುವುದಿಲ್ಲ. ಪಠ್ಯವು ಅನುಭವಕ್ಕೆ ಬಾರದೆ ಅಂಕ ಗಳಿಸುವ ವಿಧಾನ ಮಾತ್ರ ಆಗಿರುವುದೇ ಇದಕ್ಕೆ ಕಾರಣ. ಈ ಹಿನ್ನೆಲೆಯಲ್ಲಿ ಶಿಕ್ಷಣದ ಮೂಲಕ ಮಕ್ಕಳನ್ನು ವಿಭಿನ್ನವಾಗಿ ಬೆಳೆಸಲು ಪ್ರೇರೇಪಿಸುವುದೇ ಅಭಿಯಾನದ ಉದ್ದೇಶ’ ಎನ್ನುತ್ತಾರೆ ಈ ದಂಪತಿ.</p>.<p>ಸರ್ಕಾರಿ ಶಾಲೆಯ ವಠಾರದಲ್ಲಿ ಅಥವಾ ಊರ ಪ್ರಮುಖ ಪೇಟೆಯಲ್ಲಿ ಹಾಡು, ಮಿಮಿಕ್ರಿ ಮೂಲಕ ಜನರನ್ನು ಸೇರಿಸಿ ಶಿಕ್ಷಣಕ್ಕೆ ಸಂಬಂಧಿಸಿ ಅವರ ಅನಿಸಿಕೆಯನ್ನು ಕೇಳಿ ಪರಿವರ್ತನೆಗಾಗಿ ಪ್ರೇರೇಪಿಸುವುದು ಕಾರ್ಯಕ್ರಮದ ಪ್ರಮುಖ ಗುರಿ. ದಸರಾ ರಜೆಯನ್ನು ಪೂರ್ತಿಯಾಗಿ ಈ ಕಾರ್ಯಕ್ರಮಕ್ಕಾಗಿ ಬಳಸಿಕೊಳ್ಳಲು ಮುಂದಾಗಿರುವ ದಂಪತಿ, ರಾಜ್ಯದ ವಿವಿಧ ಕಡೆಗಳಲ್ಲಿ ಸುತ್ತಾಡಲಿದ್ದಾರೆ. ದಸರಾ ನಂತರ ರಜಾ ದಿನಗಳಲ್ಲೂ ಕೆಲವೊಮ್ಮೆ ವೃತ್ತಿಗೆ ರಜೆ ಹಾಕಿಯೂ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ‘ಪ್ರಜಾವಾಣಿ’ಗೆ ಅವರು ತಿಳಿಸಿದರು.</p>.<p>‘7 ವರ್ಷಗಳಿಂದ ಸರ್ಕಾರಿ ಶಾಲೆಯಲ್ಲಿ ಶಿಕ್ಷಕನಾಗಿದ್ದೇನೆ. ಅದಕ್ಕೂ ಮೊದಲು 7 ವರ್ಷ ಅನೌಪಚಾರಿಕ ಶಿಕ್ಷಣ ಸಂಸ್ಥೆಯಾದ ‘ಸ್ವರೂಪ ಅಧ್ಯಯನ ಕೇಂದ್ರ’ದಲ್ಲಿದ್ದೆ. ಶಿಕ್ಷಣ ವ್ಯವಸ್ಥೆಗೆ ಹೊಸ ಆಯಾಮ<br />ಬಯಸುವ ಇಂಥ ಅಭಿಯಾನವೊಂದರ ಅಗತ್ಯ ಇದೆ ಎಂದು ತೋಚಿತ್ತು. ಇದು ಪೋಷಕರ ಮನಸ್ಸಿನ ಮೇಲೆ ಪರಿಣಾಮ ಬೀರಿ, ಬದಲಾವಣೆ ಬಯಸಿದರೆ, ಸರ್ಕಾರದ ಮೇಲೆ ಪ್ರಭಾವ ಬೀರುವ ಭರವಸೆ ಇದೆ. ಅಷ್ಟಾದರೆ ನಮ್ಮ ಕಾರ್ಯ ಸಾರ್ಥಕ’ ಎಂದು ಚೇತನ್ ವಿವರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>