<p>ರಾಜ್ಯ, ರಾಷ್ಟ್ರೀಯ, ಅಂತರರಾಷ್ಟ್ರೀಯ ವಿಷಯಗಳಿಗೆ ಸಂಬಂಧಪಟ್ಟಂತೆ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ..</p>.<p><strong>ಕಲ್ಯಾಣಿ, ಬಂಗಾಳ</strong>: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದ ಕ್ರಿಕೆಟ್ ತಂಡವು ಇದೇ ಮೊದಲ ಬಾರಿ ರಣಜಿ ಟ್ರೋಫಿ ಟೂರ್ನಿಯ ಫೈನಲ್ ತಲುಪುವ ಮೂಲಕ ಇತಿಹಾಸ ರಚಿಸಿತು. ತಂಡದ 67 ವರ್ಷಗಳ ಇತಿಹಾಸದಲ್ಲಿ ಪ್ರಥಮ ಸಲ ಈ ಸಾಧನೆ ಮೂಡಿಬಂದಿದೆ. </p>.Ranji| 67 ವರ್ಷಗಳಲ್ಲಿ ಇದೇ ಮೊದಲು; ದಾಖಲೆ ಬರೆದ ಜಮ್ಮು ಮತ್ತು ಕಾಶ್ಮೀರ.<p><strong>ನವದೆಹಲಿ</strong> : ‘ಐ–ಪ್ಯಾಕ್’ ಕಚೇರಿಯಲ್ಲಿ ಜನವರಿ 8ರಂದು ಶೋಧ ನಡೆಸುವ ವೇಳೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಸ್ತಕ್ಷೇಪ ಮಾಡಿದ್ದರ ವಿರುದ್ಧ ಜಾರಿ ನಿರ್ದೇಶನಾಲಯ (ಇ.ಡಿ) ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್ ಮಾರ್ಚ್ 18ಕ್ಕೆ ಮುಂದೂಡಿದೆ. </p>. ಇ.ಡಿ ಶೋಧದ ವೇಳೆ ಮಮತಾ ಹಸ್ತಕ್ಷೇಪ: ವಿಚಾರಣೆ ಮಾ.18ಕ್ಕೆ ಮುಂದೂಡಿಕೆ.<p><strong>ನವದೆಹಲಿ</strong> ಸಂತ್ರಸ್ತೆಯ ಸ್ತನಗಳನ್ನು ಮುಟ್ಟುವುದು ಮತ್ತು ಪೈಜಾಮಾದ ದಾರವನ್ನು ಎಳೆಯುವುದು ಕೂಡ ‘ಅತ್ಯಾಚಾರ ಯತ್ನ’ಕ್ಕೆ ಸಮಾನವಾದ ಕೃತ್ಯ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.</p>.ಸ್ತನ ಮುಟ್ಟುವುದು ‘ಅತ್ಯಾಚಾರ ಯತ್ನ’ಅಲ್ಲ ಎಂದಿದ್ದ ಅಲಹಾಬಾದ್ ಹೈಕೋರ್ಟ್ ಆದೇಶ ವಜಾ.<p><strong>ಬೆಂಗಳೂರು:</strong> ರೌಡಿ ಬಿಕ್ಲು ಶಿವು ಕೊಲೆ ಪ್ರಕರಣದಲ್ಲಿ ಸಿಐಡಿ ಪೊಲೀಸರ ಕಸ್ಟಡಿಯಲ್ಲಿರುವ ಐದನೇ ಆರೋಪಿ, ಕೆ.ಆರ್.ಪುರ ಕ್ಷೇತ್ರದ ಬಿಜೆಪಿ ಶಾಸಕ ಬೈರತಿ ಬಸವರಾಜ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ.</p>.ರೌಡಿ ಬಿಕ್ಲು ಶಿವು ಕೊಲೆ ಪ್ರಕರಣ: ಶಾಸಕ ಬೈರತಿ ವಿಚಾರಣೆ ತೀವ್ರ.<p><strong>ಲಖನೌ</strong>: ರವಿಚಂದ್ರನ್ ಸ್ಮರಣ್ ರಣಜಿ ಟ್ರೋಫಿ ಸೆಮಿಫೈನಲ್ ಪಂದ್ಯದಲ್ಲಿ ಎರಡನೇ ಶತಕ ಗಳಿಸಿದರು. ಇದರಿಂದಾಗಿ ಕರ್ನಾಟಕ ತಂಡವು ಉತ್ತರಾಖಂಡ ಎದುರು ಒಟ್ಟು 802 ರನ್ಗಳ ಮುನ್ನಡೆ ಸಾಧಿಸಿದೆ. </p>.ರಣಜಿ ಟ್ರೋಫಿ ಸೆಮಿಫೈನಲ್: ಸ್ಮರಣ್ ಶತಕ, ಕರ್ನಾಟಕ ಭಾರಿ ಮುನ್ನಡೆ.<p><strong>ಅಹಮದಾಬಾದ್:</strong> ಇಲ್ಲಿನ ನರೇಂಂದ್ರ ಮೋದಿ ಅಂತರರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಭಾರತ ಹಾಗೂ ನೆದರ್ಲ್ಯಾಂಡ್ ತಂಡಗಳ ನಡುವೆ ಸಿ ಗುಂಪಿನ ಕೊನೆಯ ಲೀಗ್ ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ ಭಾರತ ತಂಡದ ಸ್ಫೋಟಕ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ ಅನಗತ್ಯ ದಾಖಲೆಯೊಂದನ್ನು ತಮ್ಮ ಹೆಸರಿಗೆ ಸೇರಿಸಿಕೊಂಡಿದ್ದಾರೆ.</p>.T20 ವಿಶ್ವಕಪ್ ಆರಂಭಕ್ಕೂ ಮೊದಲು ಹೀರೊ, ಈಗ ಆತನೇ ವಿಲನ್: ಅಭಿಷೇಕ್ ಅನಗತ್ಯ ದಾಖಲೆ.<p><strong>ನವದೆಹಲಿ</strong>: 'ಕರ್ನಾಟಕದಲ್ಲಿ ಕಾಂಗ್ರೆಸ್ ಭೂಕಬಳಿಕೆ ಮತ್ತು ಭ್ರಷ್ಟಾಚಾರ ನಡೆಸುತ್ತಿದೆ’ ಎಂದು ಬಿಜೆಪಿ ಆರೋಪಿಸಿದೆ.</p>.ಕರ್ನಾಟಕದಲ್ಲಿ ಭೂಕಬಳಿಕೆ: ಬಿಜೆಪಿ ಆರೋಪ.<p><strong>ನವದೆಹಲಿ</strong>: ‘ನಾನು ‘ಗಾಂಧಿವಾದಿ’, ‘ನೆಹರೂವಾದಿ’ ಮತ್ತು ‘ರಾಜೀವ್ವಾದಿ’, ಆದರೆ ‘ರಾಹುಲ್ವಾದಿ’ ಅಲ್ಲ. ಏಕೆಂದರೆ ರಾಹುಲ್ ನನಗಿಂತ ತುಂಬಾ ಕಿರಿಯರು. ರಾಜಕೀಯ ಜೀವನದಲ್ಲಿ ನನ್ನಿಂದ ಬಹಳ ದೂರದಲ್ಲಿದ್ದಾರೆ’ ಎಂದು ಕಾಂಗ್ರೆಸ್ ಹಿರಿಯ ನಾಯಕ ಮಣಿಶಂಕರ್ ಅಯ್ಯರ್ ಬುಧವಾರ ಹೇಳಿದರು.</p>.ನಾನು ರಾಹುಲ್ವಾದಿಯಲ್ಲ: ಮಣಿಶಂಕರ್ ಅಯ್ಯರ್.<p>ಫೆಬ್ರುವರಿ 12ರಂದು ಬಾಂಗ್ಲಾದೇಶದಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯೂ ದೇಶದ ರಾಜಕೀಯ ಚಿತ್ರಣವನ್ನೇ ಬದಲಿಸಿತು. ಬಾಂಗ್ಲಾದೇಶ ರಾಷ್ಟ್ರೀಯವಾದಿ ಪಕ್ಷವು(ಬಿಎನ್ಪಿ) ಅಧಿಕಾರಕ್ಕೆ ಬಂದು ಪಕ್ಷದ ಅಧ್ಯಕ್ಷ ತಾರಿಖ್ ರೆಹಮಾನ್ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದರು.</p>.ಬಾಂಗ್ಲಾದೇಶ ಸಚಿವ ಸಂಪುಟದ ಏಕೈಕ ಹಿಂದೂ ಸಚಿವ ಇವರೇ...<p>ಗಾಲ್ಗೋಟಿಯಾಸ್ ವಿಶ್ವವಿದ್ಯಾಲಯದ ರೋಬೊಡಾಗ್ ವಿವಾದದ ಮಧ್ಯೆ, ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರದ ಆಡಳಿತಾರೂಢ ಬಿಜೆಪಿ ಸರ್ಕಾರದ ಮೇಲೆ ತೀವ್ರ ದಾಳಿ ನಡೆಸಿದ್ದಾರೆ. 'ಕಾಪಿ-ಪೇಸ್ಟ್' ಎಂದು ಜರಿದಿದ್ದಾರೆ.<br></p>.ಫೇಕ್ ಇನ್ ಇಂಡಿಯಾ: ರೊಬೊ ನಾಯಿ ವಿವಾದದ ಬಗ್ಗೆ ಸಿದ್ದರಾಮಯ್ಯ ಕಿಡಿ .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ರಾಜ್ಯ, ರಾಷ್ಟ್ರೀಯ, ಅಂತರರಾಷ್ಟ್ರೀಯ ವಿಷಯಗಳಿಗೆ ಸಂಬಂಧಪಟ್ಟಂತೆ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ..</p>.<p><strong>ಕಲ್ಯಾಣಿ, ಬಂಗಾಳ</strong>: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದ ಕ್ರಿಕೆಟ್ ತಂಡವು ಇದೇ ಮೊದಲ ಬಾರಿ ರಣಜಿ ಟ್ರೋಫಿ ಟೂರ್ನಿಯ ಫೈನಲ್ ತಲುಪುವ ಮೂಲಕ ಇತಿಹಾಸ ರಚಿಸಿತು. ತಂಡದ 67 ವರ್ಷಗಳ ಇತಿಹಾಸದಲ್ಲಿ ಪ್ರಥಮ ಸಲ ಈ ಸಾಧನೆ ಮೂಡಿಬಂದಿದೆ. </p>.Ranji| 67 ವರ್ಷಗಳಲ್ಲಿ ಇದೇ ಮೊದಲು; ದಾಖಲೆ ಬರೆದ ಜಮ್ಮು ಮತ್ತು ಕಾಶ್ಮೀರ.<p><strong>ನವದೆಹಲಿ</strong> : ‘ಐ–ಪ್ಯಾಕ್’ ಕಚೇರಿಯಲ್ಲಿ ಜನವರಿ 8ರಂದು ಶೋಧ ನಡೆಸುವ ವೇಳೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಸ್ತಕ್ಷೇಪ ಮಾಡಿದ್ದರ ವಿರುದ್ಧ ಜಾರಿ ನಿರ್ದೇಶನಾಲಯ (ಇ.ಡಿ) ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್ ಮಾರ್ಚ್ 18ಕ್ಕೆ ಮುಂದೂಡಿದೆ. </p>. ಇ.ಡಿ ಶೋಧದ ವೇಳೆ ಮಮತಾ ಹಸ್ತಕ್ಷೇಪ: ವಿಚಾರಣೆ ಮಾ.18ಕ್ಕೆ ಮುಂದೂಡಿಕೆ.<p><strong>ನವದೆಹಲಿ</strong> ಸಂತ್ರಸ್ತೆಯ ಸ್ತನಗಳನ್ನು ಮುಟ್ಟುವುದು ಮತ್ತು ಪೈಜಾಮಾದ ದಾರವನ್ನು ಎಳೆಯುವುದು ಕೂಡ ‘ಅತ್ಯಾಚಾರ ಯತ್ನ’ಕ್ಕೆ ಸಮಾನವಾದ ಕೃತ್ಯ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.</p>.ಸ್ತನ ಮುಟ್ಟುವುದು ‘ಅತ್ಯಾಚಾರ ಯತ್ನ’ಅಲ್ಲ ಎಂದಿದ್ದ ಅಲಹಾಬಾದ್ ಹೈಕೋರ್ಟ್ ಆದೇಶ ವಜಾ.<p><strong>ಬೆಂಗಳೂರು:</strong> ರೌಡಿ ಬಿಕ್ಲು ಶಿವು ಕೊಲೆ ಪ್ರಕರಣದಲ್ಲಿ ಸಿಐಡಿ ಪೊಲೀಸರ ಕಸ್ಟಡಿಯಲ್ಲಿರುವ ಐದನೇ ಆರೋಪಿ, ಕೆ.ಆರ್.ಪುರ ಕ್ಷೇತ್ರದ ಬಿಜೆಪಿ ಶಾಸಕ ಬೈರತಿ ಬಸವರಾಜ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ.</p>.ರೌಡಿ ಬಿಕ್ಲು ಶಿವು ಕೊಲೆ ಪ್ರಕರಣ: ಶಾಸಕ ಬೈರತಿ ವಿಚಾರಣೆ ತೀವ್ರ.<p><strong>ಲಖನೌ</strong>: ರವಿಚಂದ್ರನ್ ಸ್ಮರಣ್ ರಣಜಿ ಟ್ರೋಫಿ ಸೆಮಿಫೈನಲ್ ಪಂದ್ಯದಲ್ಲಿ ಎರಡನೇ ಶತಕ ಗಳಿಸಿದರು. ಇದರಿಂದಾಗಿ ಕರ್ನಾಟಕ ತಂಡವು ಉತ್ತರಾಖಂಡ ಎದುರು ಒಟ್ಟು 802 ರನ್ಗಳ ಮುನ್ನಡೆ ಸಾಧಿಸಿದೆ. </p>.ರಣಜಿ ಟ್ರೋಫಿ ಸೆಮಿಫೈನಲ್: ಸ್ಮರಣ್ ಶತಕ, ಕರ್ನಾಟಕ ಭಾರಿ ಮುನ್ನಡೆ.<p><strong>ಅಹಮದಾಬಾದ್:</strong> ಇಲ್ಲಿನ ನರೇಂಂದ್ರ ಮೋದಿ ಅಂತರರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಭಾರತ ಹಾಗೂ ನೆದರ್ಲ್ಯಾಂಡ್ ತಂಡಗಳ ನಡುವೆ ಸಿ ಗುಂಪಿನ ಕೊನೆಯ ಲೀಗ್ ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ ಭಾರತ ತಂಡದ ಸ್ಫೋಟಕ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ ಅನಗತ್ಯ ದಾಖಲೆಯೊಂದನ್ನು ತಮ್ಮ ಹೆಸರಿಗೆ ಸೇರಿಸಿಕೊಂಡಿದ್ದಾರೆ.</p>.T20 ವಿಶ್ವಕಪ್ ಆರಂಭಕ್ಕೂ ಮೊದಲು ಹೀರೊ, ಈಗ ಆತನೇ ವಿಲನ್: ಅಭಿಷೇಕ್ ಅನಗತ್ಯ ದಾಖಲೆ.<p><strong>ನವದೆಹಲಿ</strong>: 'ಕರ್ನಾಟಕದಲ್ಲಿ ಕಾಂಗ್ರೆಸ್ ಭೂಕಬಳಿಕೆ ಮತ್ತು ಭ್ರಷ್ಟಾಚಾರ ನಡೆಸುತ್ತಿದೆ’ ಎಂದು ಬಿಜೆಪಿ ಆರೋಪಿಸಿದೆ.</p>.ಕರ್ನಾಟಕದಲ್ಲಿ ಭೂಕಬಳಿಕೆ: ಬಿಜೆಪಿ ಆರೋಪ.<p><strong>ನವದೆಹಲಿ</strong>: ‘ನಾನು ‘ಗಾಂಧಿವಾದಿ’, ‘ನೆಹರೂವಾದಿ’ ಮತ್ತು ‘ರಾಜೀವ್ವಾದಿ’, ಆದರೆ ‘ರಾಹುಲ್ವಾದಿ’ ಅಲ್ಲ. ಏಕೆಂದರೆ ರಾಹುಲ್ ನನಗಿಂತ ತುಂಬಾ ಕಿರಿಯರು. ರಾಜಕೀಯ ಜೀವನದಲ್ಲಿ ನನ್ನಿಂದ ಬಹಳ ದೂರದಲ್ಲಿದ್ದಾರೆ’ ಎಂದು ಕಾಂಗ್ರೆಸ್ ಹಿರಿಯ ನಾಯಕ ಮಣಿಶಂಕರ್ ಅಯ್ಯರ್ ಬುಧವಾರ ಹೇಳಿದರು.</p>.ನಾನು ರಾಹುಲ್ವಾದಿಯಲ್ಲ: ಮಣಿಶಂಕರ್ ಅಯ್ಯರ್.<p>ಫೆಬ್ರುವರಿ 12ರಂದು ಬಾಂಗ್ಲಾದೇಶದಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯೂ ದೇಶದ ರಾಜಕೀಯ ಚಿತ್ರಣವನ್ನೇ ಬದಲಿಸಿತು. ಬಾಂಗ್ಲಾದೇಶ ರಾಷ್ಟ್ರೀಯವಾದಿ ಪಕ್ಷವು(ಬಿಎನ್ಪಿ) ಅಧಿಕಾರಕ್ಕೆ ಬಂದು ಪಕ್ಷದ ಅಧ್ಯಕ್ಷ ತಾರಿಖ್ ರೆಹಮಾನ್ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದರು.</p>.ಬಾಂಗ್ಲಾದೇಶ ಸಚಿವ ಸಂಪುಟದ ಏಕೈಕ ಹಿಂದೂ ಸಚಿವ ಇವರೇ...<p>ಗಾಲ್ಗೋಟಿಯಾಸ್ ವಿಶ್ವವಿದ್ಯಾಲಯದ ರೋಬೊಡಾಗ್ ವಿವಾದದ ಮಧ್ಯೆ, ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರದ ಆಡಳಿತಾರೂಢ ಬಿಜೆಪಿ ಸರ್ಕಾರದ ಮೇಲೆ ತೀವ್ರ ದಾಳಿ ನಡೆಸಿದ್ದಾರೆ. 'ಕಾಪಿ-ಪೇಸ್ಟ್' ಎಂದು ಜರಿದಿದ್ದಾರೆ.<br></p>.ಫೇಕ್ ಇನ್ ಇಂಡಿಯಾ: ರೊಬೊ ನಾಯಿ ವಿವಾದದ ಬಗ್ಗೆ ಸಿದ್ದರಾಮಯ್ಯ ಕಿಡಿ .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>