<p><strong>ಕಲ್ಯಾಣಿ, ಬಂಗಾಳ</strong>: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದ ಕ್ರಿಕೆಟ್ ತಂಡವು ಇದೇ ಮೊದಲ ಬಾರಿ ರಣಜಿ ಟ್ರೋಫಿ ಟೂರ್ನಿಯ ಫೈನಲ್ ತಲುಪುವ ಮೂಲಕ ಇತಿಹಾಸ ರಚಿಸಿತು. ತಂಡದ 67 ವರ್ಷಗಳ ಇತಿಹಾಸದಲ್ಲಿ ಪ್ರಥಮ ಸಲ ಈ ಸಾಧನೆ ಮೂಡಿಬಂದಿದೆ. </p><p><br>ಬಂಗಾಳ ತಂಡವು 2ನೇ ಇನಿಂಗ್ಸ್ನಲ್ಲಿ ಜಮ್ಮು ಕಾಶ್ಮೀರದ ಗೆಲುವಿಗೆ 126 ರನ್ಗಳ ಗುರಿ ನೀಡಿತ್ತು. ಈ ಸುಲಭದ ಗುರಿ ಬೆನ್ನಟ್ಟಿದ ಜಮ್ಮು ಮತ್ತು ಕಾಶ್ಮೀರ ತಂಡವು 34.4 ಓವರ್ಗಳಲ್ಲಿ ಗುರಿ ತಲುಪಿ ಫೈನಲ್ ಪ್ರವೇಶಿಸಿದೆ. ಸುಲಭ ಗುರಿ ಬೆನ್ನಟ್ಟಿದ ಜಮ್ಮು ಮತ್ತು ಕಾಶ್ಮೀರ ತಂಡ ಆರಂಭಿಕ ಆಘಾತ ಅನುಭವಿಸಿತ್ತು. ಆದರೆ, ನಂತರ ಬಂದ ವಂಶಾಜ್ ಶರ್ಮಾ (ಅಜೇಯ 43) ಹಾಗೂ ಅಅಬ್ದುಲ್ ಸಮದ್ (ಅಜೇಯ 30) ರನ್ಗಳ ನೆರವಿನಿಂದ ಗುರಿ ತಲುಪಿತು. </p><p>ಈ ಪಂದ್ಯದಲ್ಲಿ ಕಾಶ್ಮೀರದ ವೇಗಿ ಅಕೀಬ್ ನಬಿ ಅವರು ಒಟ್ಟು 9 ವಿಕೆಟ್ ಗಳಿಸಿದರು. ಆ ಮೂಲಕ ಬಂಗಾಳದ ಉತ್ತಮ ಬ್ಯಾಟಿಂಗ್ ಪಡೆಯನ್ನು ಕಟ್ಟಿಹಾಕಿದರು. ಅದರಲ್ಲೂ ಎರಡನೇ ಇನಿಂಗ್ಸ್ನಲ್ಲಿ ಆತಿಥೇಯ ತಂಡವು ಕುಸಿಯಲು ಕಾರಣರಾದರು. ಬ್ಯಾಟಿಂಗ್ನಲ್ಲೂ ಸಂಕಷ್ಟದಲ್ಲಿ ಸಂದರ್ಭದಲ್ಲಿ 42 ರನ್ ಗಳಿಸಿ ತಂಡಕ್ಕೆ ನೆರವಾದರು. ಅವರ ಈ ಆಲ್ರೌಂಡರ್ ಆಟದಿಂದಾಗಿ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪಡೆದುಕೊಂಡರು.</p><p>1959–60ರ ಋತುವಿನಲ್ಲಿ ಮೊದಲ ಬಾರಿ ಜಮ್ಮು–ಕಾಶ್ಮೀರ ತಂಡವು ಆಡಿತ್ತು. ಇತ್ತೀಚಿನವರೆಗೂ ಬಲಾಢ್ಯ ತಂಡಗಳ ಸಾಲಿನಲ್ಲಿ ಪರಿಗಣಿಸಲ್ಪಟ್ಟಿರಲಿಲ್ಲ. 2013–14ರಲ್ಲಿ ಪ್ರಥಮ ಸಲ ತಂಡವು ನಾಕೌಟ್ಗೆ ಪ್ರವೇಶಿಸಿತ್ತು. </p>.<p>ಮಂಗಳವಾರ ದಿನದಾಟದ ಅಂತ್ಯಕ್ಕೆ ತಂಡವು 2 ವಿಕೆಟ್ಗಳಿಗೆ 43 ರನ್ ಗಳಿಸಿತ್ತು. ಶುಭಮ್ ಪಂಡಿರ (27 ರನ್) ಮತ್ತು ನಾಯಕ ಪಾರಸ್ ಡೋಗ್ರಾ (9 ರನ್) ಅವರ ವಿಕೆಟ್ಗಳು ಬುಧವಾರ ಬೆಳಿ್ಗೆ ಪತನವಾದವು. ಆದರೆ ವಂಶಜ್ ಮತ್ತು ಸಮದ್ ಅವರು ಮುರಿಯದ ಜೊತೆಯಾಟದಲ್ಲಿ 55 ರನ್ ಸೇರಿಸಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಮೊಹಮ್ಮದ್ ಶಮಿ, ಮುಕೇಶ್ ಕುಮಾರ್, ಆಕಾಶ್ ದೀಪ್, ಅಭಿಮನ್ಯು ಈಶ್ವರನ್ ಹಾಗೂ ಶಹಬಾಜ್ ಅಹಮದ್ ಅವರಂತಹ ಅನುಭವಿಗಳು ಇದ್ದ ಬಂಗಾಳ ತಂಡವು ಆಘಾತ ಅನುಭವಿಸಿತು. </p>.ರಣಜಿ ಕ್ರಿಕೆಟ್ | ಚಾರಿತ್ರಿಕ ಸಾಧನೆ ಹೊಸ್ತಿಲಲ್ಲಿ ಜಮ್ಮು.ರಣಜಿ ಟ್ರೋಫಿ ಸೆಮಿಫೈನಲ್: ಮುಂದುವರಿದ ಕರ್ನಾಟಕ ಹಿಡಿತ, ಉತ್ತರಾಖಂಡ ನಿರುತ್ತರ.<p>ಈಗಾಗಲೇ ಫೈನಲ್ ತಲುಪಿರುವ ಜಮ್ಮು ಮತ್ತು ಕಾಶ್ಮೀರ ತಂಡವು, ಲಖನೌನ ಅಟಲ್ ಬಿಹಾರಿ ವಾಜಪೇಯಿ ಏಕಾನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕರ್ನಾಟಕ ಹಾಗೂ ಉತ್ತರಾಖಂಡ ನಡುವಿನ ಪಂದ್ಯದಲ್ಲಿ ಗೆಲ್ಲುವ ತಂಡವನ್ನು ಎದುರಿಸಲಿದೆ.</p>.<p><strong>ಶಮಿ ಮಿಂಚಿನ ಬೌಲಿಂಗ್</strong></p><p>ಬಂಗಾಳ ತಂಡ ಸೆಮಿಫೈನಲ್ನಲ್ಲಿ ಸೋತಿದೆ. ಆದರೆ, ಭಾರತ ತಂಡದಿಂದ ಹೊರಗುಳಿದಿರುವ ಅನುಭವಿ ವೇಗಿ ಮೊಹಮ್ಮದ್ ಶಮಿ ಅವರು ಜಮ್ಮು ಮತ್ತು ಕಾಶ್ಮೀರ ವಿರುದ್ಧದ ಅದ್ಭುತ ಬೌಲಿಂಗ್ ದಾಳಿ ನಡೆಸಿದ್ದಾರೆ. ಸೆಮಿಫೈನಲ್ ಪಂದ್ಯದಲ್ಲಿ, ಶಮಿ ಅವರು ಮೊದಲ ಇನಿಂಗ್ಸ್ನಲ್ಲಿ 8 ವಿಕೆಟ್ ಮತ್ತು ಎರಡನೇ ಇನಿಂಗ್ಸ್ನಲ್ಲಿ 1 ವಿಕೆಟ್ ಪಡೆದುಕೊಂಡರು.</p>.<p><strong>ಸಂಕ್ಷಿಪ್ತ ಸ್ಕೋರು:</strong> ಮೊದಲ ಇನಿಂಗ್ಸ್: ಬಂಗಾಳ: 97.1 ಓವರ್ಗಳಲ್ಲಿ 328. ಜಮ್ಮು–ಕಾಶ್ಮೀರ: 76.1 ಓವರ್ಗಳಲ್ಲಿ 302. ಎರಡನೇ ಇನಿಂಗ್ಸ್: ಬಂಗಾಳ: 25.2 ಓವರ್ಗಳಲ್ಲಿ 99. ಜಮ್ಮು–ಕಾಶ್ಮೀರ: 34.4 ಓವರ್ಗಳಲ್ಲಿ 4ಕ್ಕೆ126 (ಶುಭಂ ಪಂಡಿರ 27, ವಂಶಜ್ ಶರ್ಮಾ ಔಟಾಗದೇ 43, ಅಬ್ದುಲ್ ಸಮದ್ ಔಟಾಗದೇ 30, ಆಕಾಶ್ ದೀಪ್ 46ಕ್ಕೆ3, ಮೊಹಮ್ಮದ್ ಶಮಿ 24ಕ್ಕೆ1) ಫಲಿತಾಂಶ: ಜಮ್ಮು–ಕಾಶ್ಮೀರ ತಂಡಕ್ಕೆ 6 ವಿಕೆಟ್ಗಳ ಜಯ. ಪಂದ್ಯದ ಆಟಗಾರ: ಅಕೀಬ್ ನಬಿ ದಾರ್. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲ್ಯಾಣಿ, ಬಂಗಾಳ</strong>: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದ ಕ್ರಿಕೆಟ್ ತಂಡವು ಇದೇ ಮೊದಲ ಬಾರಿ ರಣಜಿ ಟ್ರೋಫಿ ಟೂರ್ನಿಯ ಫೈನಲ್ ತಲುಪುವ ಮೂಲಕ ಇತಿಹಾಸ ರಚಿಸಿತು. ತಂಡದ 67 ವರ್ಷಗಳ ಇತಿಹಾಸದಲ್ಲಿ ಪ್ರಥಮ ಸಲ ಈ ಸಾಧನೆ ಮೂಡಿಬಂದಿದೆ. </p><p><br>ಬಂಗಾಳ ತಂಡವು 2ನೇ ಇನಿಂಗ್ಸ್ನಲ್ಲಿ ಜಮ್ಮು ಕಾಶ್ಮೀರದ ಗೆಲುವಿಗೆ 126 ರನ್ಗಳ ಗುರಿ ನೀಡಿತ್ತು. ಈ ಸುಲಭದ ಗುರಿ ಬೆನ್ನಟ್ಟಿದ ಜಮ್ಮು ಮತ್ತು ಕಾಶ್ಮೀರ ತಂಡವು 34.4 ಓವರ್ಗಳಲ್ಲಿ ಗುರಿ ತಲುಪಿ ಫೈನಲ್ ಪ್ರವೇಶಿಸಿದೆ. ಸುಲಭ ಗುರಿ ಬೆನ್ನಟ್ಟಿದ ಜಮ್ಮು ಮತ್ತು ಕಾಶ್ಮೀರ ತಂಡ ಆರಂಭಿಕ ಆಘಾತ ಅನುಭವಿಸಿತ್ತು. ಆದರೆ, ನಂತರ ಬಂದ ವಂಶಾಜ್ ಶರ್ಮಾ (ಅಜೇಯ 43) ಹಾಗೂ ಅಅಬ್ದುಲ್ ಸಮದ್ (ಅಜೇಯ 30) ರನ್ಗಳ ನೆರವಿನಿಂದ ಗುರಿ ತಲುಪಿತು. </p><p>ಈ ಪಂದ್ಯದಲ್ಲಿ ಕಾಶ್ಮೀರದ ವೇಗಿ ಅಕೀಬ್ ನಬಿ ಅವರು ಒಟ್ಟು 9 ವಿಕೆಟ್ ಗಳಿಸಿದರು. ಆ ಮೂಲಕ ಬಂಗಾಳದ ಉತ್ತಮ ಬ್ಯಾಟಿಂಗ್ ಪಡೆಯನ್ನು ಕಟ್ಟಿಹಾಕಿದರು. ಅದರಲ್ಲೂ ಎರಡನೇ ಇನಿಂಗ್ಸ್ನಲ್ಲಿ ಆತಿಥೇಯ ತಂಡವು ಕುಸಿಯಲು ಕಾರಣರಾದರು. ಬ್ಯಾಟಿಂಗ್ನಲ್ಲೂ ಸಂಕಷ್ಟದಲ್ಲಿ ಸಂದರ್ಭದಲ್ಲಿ 42 ರನ್ ಗಳಿಸಿ ತಂಡಕ್ಕೆ ನೆರವಾದರು. ಅವರ ಈ ಆಲ್ರೌಂಡರ್ ಆಟದಿಂದಾಗಿ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪಡೆದುಕೊಂಡರು.</p><p>1959–60ರ ಋತುವಿನಲ್ಲಿ ಮೊದಲ ಬಾರಿ ಜಮ್ಮು–ಕಾಶ್ಮೀರ ತಂಡವು ಆಡಿತ್ತು. ಇತ್ತೀಚಿನವರೆಗೂ ಬಲಾಢ್ಯ ತಂಡಗಳ ಸಾಲಿನಲ್ಲಿ ಪರಿಗಣಿಸಲ್ಪಟ್ಟಿರಲಿಲ್ಲ. 2013–14ರಲ್ಲಿ ಪ್ರಥಮ ಸಲ ತಂಡವು ನಾಕೌಟ್ಗೆ ಪ್ರವೇಶಿಸಿತ್ತು. </p>.<p>ಮಂಗಳವಾರ ದಿನದಾಟದ ಅಂತ್ಯಕ್ಕೆ ತಂಡವು 2 ವಿಕೆಟ್ಗಳಿಗೆ 43 ರನ್ ಗಳಿಸಿತ್ತು. ಶುಭಮ್ ಪಂಡಿರ (27 ರನ್) ಮತ್ತು ನಾಯಕ ಪಾರಸ್ ಡೋಗ್ರಾ (9 ರನ್) ಅವರ ವಿಕೆಟ್ಗಳು ಬುಧವಾರ ಬೆಳಿ್ಗೆ ಪತನವಾದವು. ಆದರೆ ವಂಶಜ್ ಮತ್ತು ಸಮದ್ ಅವರು ಮುರಿಯದ ಜೊತೆಯಾಟದಲ್ಲಿ 55 ರನ್ ಸೇರಿಸಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಮೊಹಮ್ಮದ್ ಶಮಿ, ಮುಕೇಶ್ ಕುಮಾರ್, ಆಕಾಶ್ ದೀಪ್, ಅಭಿಮನ್ಯು ಈಶ್ವರನ್ ಹಾಗೂ ಶಹಬಾಜ್ ಅಹಮದ್ ಅವರಂತಹ ಅನುಭವಿಗಳು ಇದ್ದ ಬಂಗಾಳ ತಂಡವು ಆಘಾತ ಅನುಭವಿಸಿತು. </p>.ರಣಜಿ ಕ್ರಿಕೆಟ್ | ಚಾರಿತ್ರಿಕ ಸಾಧನೆ ಹೊಸ್ತಿಲಲ್ಲಿ ಜಮ್ಮು.ರಣಜಿ ಟ್ರೋಫಿ ಸೆಮಿಫೈನಲ್: ಮುಂದುವರಿದ ಕರ್ನಾಟಕ ಹಿಡಿತ, ಉತ್ತರಾಖಂಡ ನಿರುತ್ತರ.<p>ಈಗಾಗಲೇ ಫೈನಲ್ ತಲುಪಿರುವ ಜಮ್ಮು ಮತ್ತು ಕಾಶ್ಮೀರ ತಂಡವು, ಲಖನೌನ ಅಟಲ್ ಬಿಹಾರಿ ವಾಜಪೇಯಿ ಏಕಾನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕರ್ನಾಟಕ ಹಾಗೂ ಉತ್ತರಾಖಂಡ ನಡುವಿನ ಪಂದ್ಯದಲ್ಲಿ ಗೆಲ್ಲುವ ತಂಡವನ್ನು ಎದುರಿಸಲಿದೆ.</p>.<p><strong>ಶಮಿ ಮಿಂಚಿನ ಬೌಲಿಂಗ್</strong></p><p>ಬಂಗಾಳ ತಂಡ ಸೆಮಿಫೈನಲ್ನಲ್ಲಿ ಸೋತಿದೆ. ಆದರೆ, ಭಾರತ ತಂಡದಿಂದ ಹೊರಗುಳಿದಿರುವ ಅನುಭವಿ ವೇಗಿ ಮೊಹಮ್ಮದ್ ಶಮಿ ಅವರು ಜಮ್ಮು ಮತ್ತು ಕಾಶ್ಮೀರ ವಿರುದ್ಧದ ಅದ್ಭುತ ಬೌಲಿಂಗ್ ದಾಳಿ ನಡೆಸಿದ್ದಾರೆ. ಸೆಮಿಫೈನಲ್ ಪಂದ್ಯದಲ್ಲಿ, ಶಮಿ ಅವರು ಮೊದಲ ಇನಿಂಗ್ಸ್ನಲ್ಲಿ 8 ವಿಕೆಟ್ ಮತ್ತು ಎರಡನೇ ಇನಿಂಗ್ಸ್ನಲ್ಲಿ 1 ವಿಕೆಟ್ ಪಡೆದುಕೊಂಡರು.</p>.<p><strong>ಸಂಕ್ಷಿಪ್ತ ಸ್ಕೋರು:</strong> ಮೊದಲ ಇನಿಂಗ್ಸ್: ಬಂಗಾಳ: 97.1 ಓವರ್ಗಳಲ್ಲಿ 328. ಜಮ್ಮು–ಕಾಶ್ಮೀರ: 76.1 ಓವರ್ಗಳಲ್ಲಿ 302. ಎರಡನೇ ಇನಿಂಗ್ಸ್: ಬಂಗಾಳ: 25.2 ಓವರ್ಗಳಲ್ಲಿ 99. ಜಮ್ಮು–ಕಾಶ್ಮೀರ: 34.4 ಓವರ್ಗಳಲ್ಲಿ 4ಕ್ಕೆ126 (ಶುಭಂ ಪಂಡಿರ 27, ವಂಶಜ್ ಶರ್ಮಾ ಔಟಾಗದೇ 43, ಅಬ್ದುಲ್ ಸಮದ್ ಔಟಾಗದೇ 30, ಆಕಾಶ್ ದೀಪ್ 46ಕ್ಕೆ3, ಮೊಹಮ್ಮದ್ ಶಮಿ 24ಕ್ಕೆ1) ಫಲಿತಾಂಶ: ಜಮ್ಮು–ಕಾಶ್ಮೀರ ತಂಡಕ್ಕೆ 6 ವಿಕೆಟ್ಗಳ ಜಯ. ಪಂದ್ಯದ ಆಟಗಾರ: ಅಕೀಬ್ ನಬಿ ದಾರ್. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>