ಬೆಂಗಳೂರು, ಮೈಸೂರು, ಹಾಸನ, ಕಲಬುರಗಿ, ರಾಯಚೂರು, ಕೋಲಾರ, ಚಾಮರಾಜನಗರ ಸೇರಿದಂತೆ 12 ಕೆಐಎಡಿಬಿ ವಿಭಾಗಗಳಲ್ಲಿ ಹಂಚಿಕೆಯಾಗದಿದ್ದ ಸಿ.ಎ.ನಿವೇಶನಗಳಿಗಾಗಿ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಿ, ಹಂಚಿಕೆ ಮಾಡಲಾಗಿದೆ. ಹಲವೆಡೆ ಸಿ.ಎ ನಿವೇಶನಗಳ ಹಂಚಿಕೆ ದಶಕಗಳಿಂದ ನನೆಗುದಿಗೆ ಬಿದ್ದಿತ್ತು. ಇದನ್ನು ಇತ್ಯರ್ಥಪಡಿಸಲು 18 ದಿನ ಸಮಯ ಕೊಟ್ಟು ಅರ್ಜಿ ಆಹ್ವಾನಿಸಿತ್ತು. 193 ನಿವೇಶನಗಳಿಗೆ ಅರ್ಜಿ ಆಹ್ವಾನಿಸಲಾಗಿತ್ತಾದರೂ, ಹಂಚಿಕೆ ಮಾಡಿದ್ದು 41 ನಿವೇಶನಗಳಿಗೆ ಮಾತ್ರ. ಒಂದೇ ಅರ್ಜಿ ಸಲ್ಲಿಕೆಯಾದ ಪ್ರಕರಣಗಳಲ್ಲಿ ಹಂಚಿಕೆಯನ್ನೇ ಮಾಡಿಲ್ಲ. ದಾಖಲೆ ಇಲ್ಲ ಎನ್ನುವ ಕಾರಣಕ್ಕೆ ಯಾವ ಅರ್ಜಿಯನ್ನೂ ತಿರಸ್ಕರಿಸಿಲ್ಲ ಎಂದಿದ್ದಾರೆ.