<p><strong>ಕಲಬುರಗಿ:</strong> ‘ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಗೆ ವಿರೋಧವಿಲ್ಲ. ರಾಜ್ಯ ಸರ್ಕಾರದ ಇಚ್ಛಾಶಕ್ತಿಯ ಬಗ್ಗೆ ನಮಗೆ ಗೊಂದಲವಿದೆ. ರಾಜ್ಯದ ಜನರಿಗೆ ಅನುಮಾನವಿದೆ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.</p><p>ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಜ್ಯ ಸರ್ಕಾರ ಈ ಸಮೀಕ್ಷೆ ಹೆಸರಲ್ಲಿ ಪಗಡೆ ಆಟವಾಡುತ್ತಿದೆ. ಹಿಂದೂ ಸಮಾಜ ಒಡೆಯುವ ಕೆಲಸಕ್ಕೆ ಕೈಹಾಕಿದೆ’ ಎಂದು ಟೀಕಿಸಿದರು.</p><p>‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಈ ಸಮೀಕ್ಷೆ ನಡೆಸುತ್ತಿದ್ದಾರೋ ಅಥವಾ ಪ್ರಾಮಾಣಿಕವಾಗಿ ಹಿಂದುಳಿದ, ಶೋಷಿತ ಸಮುದಾಯಗಳ ನ್ಯಾಯ ಒದಗಿಸಲು ಇದನ್ನು ನಡೆಸುತ್ತಿದ್ದಾರೋ ತಿಳಿಯುತ್ತಿಲ್ಲ. ಅದರಲ್ಲಿ ಸರ್ಕಾರದ ಪ್ರಾಮಾಣಿಕ ಕಳಕಳಿ ನಮಗೂ ಕಾಣುತ್ತಿಲ್ಲ. ಜನರಿಗೂ ಕಾಣುತ್ತಿಲ್ಲ’ ಎಂದು ಟೀಕಿಸಿದರು.</p><p>‘ಸ್ವಾತಂತ್ರ್ಯದ ನಂತರ ಕೇಂದ್ರ ಸರ್ಕಾರ ಒಂದು ಐತಿಹಾಸಿಕ ನಿರ್ಧಾರ ಕೈಗೊಂಡು ಜನಗಣತಿ ಜೊತೆಗೆ ಜಾತಿಗಣತಿಗೂ ಮುಂದಾಗಿದೆ. ಹಿಂದೆ ಯುಪಿಎ ಸರ್ಕಾರ ಈ ಬಗೆಗೆ ನಿರ್ಧರಿಸಿದ್ದರೂ, ರಾಹುಲ್ ಗಾಂಧಿ ಅವರೇ ಅದನ್ನು ವಿರೋಧಿಸಿದ್ದರು’ ಎಂದರು.</p><p><strong>‘ಕ್ರಿಶ್ಚಿಯನ್ ಲಿಂಗಾಯತರು, ಜೈನ ಪಂಚಮಸಾಲಿಗಳು ಇದ್ದಾರಾ?’</strong></p><p>‘ರಾಜ್ಯದಲ್ಲಿ ಕ್ರಿಶ್ಚಿಯನ್ ಲಿಂಗಾಯತರು, ಜೈನ ಪಂಚಮಸಾಲಿಗಳು ಇದ್ದಾರಾ, ಕ್ರಿಶ್ಚಿಯನ್ ದಲಿತರು ಇದ್ದಾರಾ’ ಎಂದು ಸಂಸದ ಗೋವಿಂದ ಕಾರಜೋಳ ಪ್ರಶ್ನಿಸಿದರು.</p><p>‘ಯಾವುದೇ ವ್ಯಕ್ತಿ ಒಮ್ಮೆ ಧರ್ಮಾಂತರವಾಗುವುದು ಅವರ ಹಕ್ಕು. ಆದರೆ, ಧರ್ಮಾಂತರವಾದ ದಿನದಿಂದಲೇ ಅವರ ಪೂರ್ವಾಶ್ರಮದ ಹಂಗುಗಳೆಲ್ಲ ತೊರೆದು ಹೋಗುತ್ತವೆ. ಆ ವ್ಯಕ್ತಿ ಕ್ರಿಶ್ಚಿಯನ್ ಆಗಿದ್ದರೆ, ಕ್ರಿಶ್ಚಯನ್ ಧರ್ಮ, ಇಸ್ಲಾಂಗೆ ಧರ್ಮಾಂತರ ಆಗಿದ್ದರೆ ಇಸ್ಲಾಂ ಧರ್ಮದವರಾಗುತ್ತಾರೆ’ ಎಂದರು.</p><p>‘ಈ ಸರ್ಕಾರಕ್ಕೆ ಹಿಂದುಳಿದವರು, ದಲಿತರ ಬಗೆಗೆ ಅಷ್ಟೊಂದು ಕಾಳಜಿ ಇದ್ದಿದ್ದರೆ ₹180 ಕೋಟಿ ವೆಚ್ಚ ಮಾಡಿ ತಯಾರಿಸಿದ ಕಾಂತರಾಜು ವರದಿ ಯಾಕೆ ಕಸದ ಬುಟ್ಟಿಗೆ ಎಸೆದರು? ಗೋಪ್ಯವಾಗಿ ಇಡಬೇಕಿದ್ದ ವರದಿಯನ್ನು ಸೋರಿಕೆ ಮಾಡಿದ್ದರು ಯಾರು’ ಎಂದು ಪ್ರಶ್ನಿಸಿದರು.</p>.Caste Census | ಹಿಂದೂ ಸಮಾಜ ಒಡೆಯುವ ಕೆಲಸ ಮಾಡಬಾರದು: ಬಿ.ವೈ. ವಿಜಯೇಂದ್ರ.Caste Census | ಸಮೀಕ್ಷೆ ಮುಂದೂಡಲು ಸಾಧ್ಯವೇ?: ಹೈಕೋರ್ಟ್.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಬುರಗಿ:</strong> ‘ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಗೆ ವಿರೋಧವಿಲ್ಲ. ರಾಜ್ಯ ಸರ್ಕಾರದ ಇಚ್ಛಾಶಕ್ತಿಯ ಬಗ್ಗೆ ನಮಗೆ ಗೊಂದಲವಿದೆ. ರಾಜ್ಯದ ಜನರಿಗೆ ಅನುಮಾನವಿದೆ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.</p><p>ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಜ್ಯ ಸರ್ಕಾರ ಈ ಸಮೀಕ್ಷೆ ಹೆಸರಲ್ಲಿ ಪಗಡೆ ಆಟವಾಡುತ್ತಿದೆ. ಹಿಂದೂ ಸಮಾಜ ಒಡೆಯುವ ಕೆಲಸಕ್ಕೆ ಕೈಹಾಕಿದೆ’ ಎಂದು ಟೀಕಿಸಿದರು.</p><p>‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಈ ಸಮೀಕ್ಷೆ ನಡೆಸುತ್ತಿದ್ದಾರೋ ಅಥವಾ ಪ್ರಾಮಾಣಿಕವಾಗಿ ಹಿಂದುಳಿದ, ಶೋಷಿತ ಸಮುದಾಯಗಳ ನ್ಯಾಯ ಒದಗಿಸಲು ಇದನ್ನು ನಡೆಸುತ್ತಿದ್ದಾರೋ ತಿಳಿಯುತ್ತಿಲ್ಲ. ಅದರಲ್ಲಿ ಸರ್ಕಾರದ ಪ್ರಾಮಾಣಿಕ ಕಳಕಳಿ ನಮಗೂ ಕಾಣುತ್ತಿಲ್ಲ. ಜನರಿಗೂ ಕಾಣುತ್ತಿಲ್ಲ’ ಎಂದು ಟೀಕಿಸಿದರು.</p><p>‘ಸ್ವಾತಂತ್ರ್ಯದ ನಂತರ ಕೇಂದ್ರ ಸರ್ಕಾರ ಒಂದು ಐತಿಹಾಸಿಕ ನಿರ್ಧಾರ ಕೈಗೊಂಡು ಜನಗಣತಿ ಜೊತೆಗೆ ಜಾತಿಗಣತಿಗೂ ಮುಂದಾಗಿದೆ. ಹಿಂದೆ ಯುಪಿಎ ಸರ್ಕಾರ ಈ ಬಗೆಗೆ ನಿರ್ಧರಿಸಿದ್ದರೂ, ರಾಹುಲ್ ಗಾಂಧಿ ಅವರೇ ಅದನ್ನು ವಿರೋಧಿಸಿದ್ದರು’ ಎಂದರು.</p><p><strong>‘ಕ್ರಿಶ್ಚಿಯನ್ ಲಿಂಗಾಯತರು, ಜೈನ ಪಂಚಮಸಾಲಿಗಳು ಇದ್ದಾರಾ?’</strong></p><p>‘ರಾಜ್ಯದಲ್ಲಿ ಕ್ರಿಶ್ಚಿಯನ್ ಲಿಂಗಾಯತರು, ಜೈನ ಪಂಚಮಸಾಲಿಗಳು ಇದ್ದಾರಾ, ಕ್ರಿಶ್ಚಿಯನ್ ದಲಿತರು ಇದ್ದಾರಾ’ ಎಂದು ಸಂಸದ ಗೋವಿಂದ ಕಾರಜೋಳ ಪ್ರಶ್ನಿಸಿದರು.</p><p>‘ಯಾವುದೇ ವ್ಯಕ್ತಿ ಒಮ್ಮೆ ಧರ್ಮಾಂತರವಾಗುವುದು ಅವರ ಹಕ್ಕು. ಆದರೆ, ಧರ್ಮಾಂತರವಾದ ದಿನದಿಂದಲೇ ಅವರ ಪೂರ್ವಾಶ್ರಮದ ಹಂಗುಗಳೆಲ್ಲ ತೊರೆದು ಹೋಗುತ್ತವೆ. ಆ ವ್ಯಕ್ತಿ ಕ್ರಿಶ್ಚಿಯನ್ ಆಗಿದ್ದರೆ, ಕ್ರಿಶ್ಚಯನ್ ಧರ್ಮ, ಇಸ್ಲಾಂಗೆ ಧರ್ಮಾಂತರ ಆಗಿದ್ದರೆ ಇಸ್ಲಾಂ ಧರ್ಮದವರಾಗುತ್ತಾರೆ’ ಎಂದರು.</p><p>‘ಈ ಸರ್ಕಾರಕ್ಕೆ ಹಿಂದುಳಿದವರು, ದಲಿತರ ಬಗೆಗೆ ಅಷ್ಟೊಂದು ಕಾಳಜಿ ಇದ್ದಿದ್ದರೆ ₹180 ಕೋಟಿ ವೆಚ್ಚ ಮಾಡಿ ತಯಾರಿಸಿದ ಕಾಂತರಾಜು ವರದಿ ಯಾಕೆ ಕಸದ ಬುಟ್ಟಿಗೆ ಎಸೆದರು? ಗೋಪ್ಯವಾಗಿ ಇಡಬೇಕಿದ್ದ ವರದಿಯನ್ನು ಸೋರಿಕೆ ಮಾಡಿದ್ದರು ಯಾರು’ ಎಂದು ಪ್ರಶ್ನಿಸಿದರು.</p>.Caste Census | ಹಿಂದೂ ಸಮಾಜ ಒಡೆಯುವ ಕೆಲಸ ಮಾಡಬಾರದು: ಬಿ.ವೈ. ವಿಜಯೇಂದ್ರ.Caste Census | ಸಮೀಕ್ಷೆ ಮುಂದೂಡಲು ಸಾಧ್ಯವೇ?: ಹೈಕೋರ್ಟ್.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>