ಶನಿವಾರ, 5 ಜುಲೈ 2025
×
ADVERTISEMENT
ADVERTISEMENT

ಕೇಂದ್ರದ ಜತೆ ಸಂಘರ್ಷ ಇಲ್ಲ, ನ್ಯಾಯ ಕೇಳಿದ್ದೇವೆ: ಮುಖ್ಯಮಂತ್ರಿ ಸಿದ್ದರಾಮಯ್ಯ

Published : 20 ಫೆಬ್ರುವರಿ 2024, 23:30 IST
Last Updated : 20 ಫೆಬ್ರುವರಿ 2024, 23:30 IST
ಫಾಲೋ ಮಾಡಿ
Comments
ವಿಧಾನಸಭೆ ಕಲಾಪದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿದರು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಉಪಸ್ಥಿತರಿದ್ದರು.
ವಿಧಾನಸಭೆ ಕಲಾಪದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿದರು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಉಪಸ್ಥಿತರಿದ್ದರು.
ಬಿಜೆಪಿಯದು ದ್ವೇಷ ತುಂಬಿದ ತುಕ್ಕು ಹಿಡಿದ ಬಸ್ಸು ವಿಷದ ಹೊಗೆಯನ್ನು ಉಗುಳುತ್ತದೆ. ಕಳೆದ ಚುನಾವಣೆಯಲ್ಲಿ ಆ ಬಸ್ಸು ಮುಂದೆ ಹೋಗಲೇ ಇಲ್ಲ. ಜನ ಆ ಬಸ್ಸನ್ನು ಪಕ್ಕಕ್ಕೆ ತಳ್ಳಿದರು.
ಸಿದ್ದರಾಮಯ್ಯ ಮುಖ್ಯಮಂತ್ರಿ
‘ನನ್ನದು ಸಿದ್ದನಾಮಿಕ್ಸ್‌ ಅಲ್ಲ ಗುಡ್‌ ಎಕನಾಮಿಕ್ಸ್‌’
ಎಚ್‌.ಡಿ.ಕುಮಾರಸ್ವಾಮಿ ಅದೇನೋ ‘ಸಿದ್ದನಾಮಿಕ್ಸ್‌’ ಅಂತ ಹೇಳಿದ್ದಾರೆ. ಯಾರಾದರೂ ಆ ಪದವನ್ನು ಕೇಳಿದ್ದೀರಾ? ಪುಸ್ತಕದಲ್ಲಿ ಎಲ್ಲಿಯಾದರೂ ಇದೆಯಾ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಗಿ ಪ್ರಶ್ನಿಸಿದರು. ‘ನಾವು ಏನಿದ್ದರೂ ಗುಡ್‌ ಎಕನಾಮಿಕ್ಸ್‌ನಲ್ಲಿ ನಂಬಿಕೆ ಇಟ್ಟವರು’ ಎಂದು ಹೇಳಿದರು. ‘ನೀವು ಸದಾ ಸುಳ್ಳುಗಳನ್ನು ಹೇಳುತ್ತೀರಲ್ಲ. ಅದಕ್ಕೆ ಹೊಸ ಪದ ಸಿದ್ದನಾಮಿಕ್ಸ್‌ ಎಂಬ ಹೊಸ ಪದ ಹುಟ್ಟಿಕೊಂಡಿದೆ’ ಎಂದು ವಿರೋಧಪಕ್ಷದ ನಾಯಕ ಆರ್‌.ಅಶೋಕ ಹೇಳಿದರು. ‘ಸಿದ್ದನಾಮಿಕ್ಸ್‌ ಎನ್ನುವುದನ್ನು ಟ್ರೇಡ್‌ ಮಾರ್ಕ್‌ ಅಥವಾ ಬ್ರ್ಯಾಂಡ್‌ ನೇಮ್‌ ಮಾಡಿಕೊಳ್ಳಿ’ ಎಂದು ಬಸವರಾಜ ಬೊಮ್ಮಾಯಿ ಹೇಳಿದಾಗ ನನ್ನದೇನಿದ್ದರೂ ಗುಡ್‌ ಎಕಾನಮಿಕ್ಸ್‌. ಅದರಲ್ಲೇ ನಂಬಿಕೆ ಇಟ್ಟಿದ್ದೇನೆ’ ಎಂದು ಸಿದ್ದರಾಮಯ್ಯ ಪ್ರತಿಕ್ರಿಯಿಸಿದರು. ‘ಶ್ರೀಮಂತರಿಂದ ಹೆಚ್ಚು ತೆರಿಗೆ ವಸೂಲಿ ಮಾಡಿ ಬಡವರಿಗೆ ಹಂಚುವುದೇ ನಮ್ಮ ಉದ್ದೇಶ. ಇದಕ್ಕಾಗಿ ಐದು ಗ್ಯಾರಂಟಿಗಳನ್ನು ಜಾರಿ ಮಾಡಿದ್ದೇವೆ. ಇದು ಗುಡ್‌ ಎಕನಾಮಿಕ್ಸ್‌. ಸ್ವಾಭಿಮಾನದ ಎಕನಾಮಿಕ್ಸ್‌ ವಿನಾ  ಸ್ವಾಹಾ ಎಕನಾಮಿಕ್ಸ್‌ ಅಲ್ಲ’ ಎಂದು ಅವರು ಹೇಳಿದರು.
‘ಸಿ.ಎಂ ಅವರಿಂದ ಕಾಗಕ್ಕ ಗುಬ್ಬಕ್ಕನ ಕಥೆ’
ರಾಜ್ಯಪಾಲರ ಭಾಷಣದ ಮೂಲಕ ಕೇಂದ್ರ ಸರ್ಕಾರವನ್ನು ಬಯ್ಯುವುದು ಬಿಟ್ಟರೆ ತಾವು ಮಾಡಿದ ಅಭಿವೃದ್ಧಿ ಕಾರ್ಯ ಏನೆಂದು ತಿಳಿಸಿ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರದು ಸುಳ್ಳಿನ ಆರ್ಥಿಕತೆ ಎಂದು ವಿರೋಧಪಕ್ಷದ ನಾಯಕ ಆರ್.ಅಶೋಕ ಟೀಕಿಸಿದರು. ‘ನಮ್ಮ ಸರ್ಕಾರದ ಅವಧಿಯಲ್ಲಿ ಜಾರಿ ಮಾಡಿದ ರೈತ ವಿದ್ಯಾನಿಧಿ ಕಿಸಾನ್‌ ಸಮ್ಮಾನ್‌ ರದ್ದು ಮಾಡಿದ ಬಗ್ಗೆ ಸಿದ್ದರಾಮಯ್ಯ ಉತ್ತರ ನೀಡಿಲ್ಲ. ₹5000 ದಿಂದ ₹50000 ವರೆಗೆ ನೀಡುತ್ತಿದ್ದ ವಿದ್ಯಾರ್ಥಿ ವೇತನವನ್ನು ₹1200 ಕ್ಕೆ ಇಳಿಸಲಾಗಿದೆ. ಪರಿಶಿಷ್ಟರಿಗೆ ಮೀಸಲಾದ ಹಣದಲ್ಲಿ ₹11 ಸಾವಿರ ಕೋಟಿಗೂ ಹೆಚ್ಚು ಹಣವನ್ನು ಬೇರೆ ಉದ್ದೇಶಕ್ಕೆ ಬಳಸಲಾಗಿದೆ. ರೈತರಿಗೆ ನೀಡುವ ಸಹಾಯಧನದ ಬಗ್ಗೆಯೂ ಪ್ರತಿಕ್ರಿಯೆ ನೀಡದೇ ಕಾಗಕ್ಕ ಗುಬ್ಬಕ್ಕನ ಕಥೆ ಹೇಳಲಾಗುತ್ತಿದೆ. ಇದೇ ‘ಸಿದ್ಧನಾಮಿಕ್ಸ್‌’ ಎಂದರು.
ಯತ್ನಾಳ್‌ ಮೇಲೆ ಸಿ.ಎಂ ಪರೋಕ್ಷ ಗರಂ
ಬಿಜೆಪಿಯ ಬಸನಗೌಡ ಪಾಟೀಲ ಯತ್ನಾಳ ಅವರು ಪದೇ ಪದೇ ಎದ್ದು ನಿಂತು ಅಡ್ಡಿಪಡಿಸುತ್ತಿದ್ದ ಕಾರಣ ಸಿದ್ದರಾಮಯ್ಯ ಅವರು ತಮ್ಮ ಹಿಂದೆ ಕುಳಿತಿದ್ದ ಸಚಿವ ದಿನೇಶ್‌ ಗುಂಡೂರಾವ್ ಅವರನ್ನು ಉದ್ದೇಶಿಸಿ ‘ಯತ್ನಾಳ್ ಪದೇ ಪದೇ ಅಡ್ಡಿ ಮಾಡಿದರೆ ಕ್ರಮ ತಗೋ ಬೇಕಾಗುತ್ತದೆ ಎಂದು ಸಭಾಧ್ಯಕ್ಷರಿಗೆ ಹೇಳಿ’ ಎಂದು ಮೆಲು ಧ್ವನಿಯಲ್ಲಿ ಉಸುರಿದರು. ಆಗ ದಿನೇಶ್‌ ಗುಂಡೂರಾವ್‌ ಅವರು ‘ಯತ್ನಾಳ ಅವರು ಪದೇ ಪದೇ ಅಡ್ಡಿ ಮಾಡುತ್ತಿರುವುದರಿಂದ ಅವರ ಮೇಲೆ ಕ್ರಮ ತಗೆದುಕೊಳ್ಳಬೇಕಾಗುತ್ತದೆ’ ಎಂದರು. ‘ಅದೇನು ಕ್ರಮ ತೆಗೆದುಕೊಳ್ಳುತ್ತೀರೋ ತೆಗೆದುಕೊಳ್ಳಿ’ ಎಂದು ಯತ್ನಾಳ್ ತಿರುಗೇಟು ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT