<p><strong>ಮೈಸೂರು</strong>: ‘ಸಂಘದ ಗಣವೇಷದಲ್ಲಿ ವಿಧಾನಸೌಧಕ್ಕೆ ಬರುತ್ತೇವೆ, ಏನು ಮಾಡುತ್ತೀರಾ? ಮನೆ ಮನೆಯಲ್ಲಿ ಆರ್ಎಸ್ಎಸ್ ಶಾಖೆ ಮಾಡುತ್ತೇವೆ’ ಎಂದು ಬಿಜೆಪಿ ಶಾಸಕ ಟಿ.ಎಸ್. ಶ್ರೀವತ್ಸ ಹೇಳಿದರು.</p><p>ಇಲ್ಲಿ ಸೋಮವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಸರ್ಕಾರಿ ಸ್ಥಳಗಳಲ್ಲಿ ಆರ್ಎಸ್ಎಸ್ ಚಟುವಟಿಕೆಗಳಿಗೆ ನಿಷೇಧ ಹೇರುವಂತೆ ಸಚಿವ ಪ್ರಿಯಾಂಕ್ ಖರ್ಗೆ ಪತ್ರ ಬರೆದಿರುವುದು ಹಾಗೂ ಅದಕ್ಕೆ ಮುಖ್ಯಮಂತ್ರಿ ಪ್ರತಿಕ್ರಿಯಿಸಿರುವುದು ಮೂರ್ಖತನದ ಪರಮಾವಧಿ’ ಎಂದು ದೂರಿದರು.</p><p>‘ಪ್ರಿಯಾಂಕ್ ಆರ್ಎಸ್ಎಸ್ ಶಾಖೆಗೆ ಬಂದು ಒಂದು ತಾಸು ಕೂರಲಿ. ಆಗ ಅವರಿಗೆ ಸಂಘದ ಚಟುವಟಿಕೆ ಗೊತ್ತಾಗುತ್ತದೆ’ ಎಂದರು.</p><p>‘ಆರ್ಎಸ್ಎಸ್ ಎಂದರೆ ಅವರಿಗೆ ಯಾಕಿಷ್ಟು ಅಲರ್ಜಿ? ಯಾರ ಕೈಯಲ್ಲೂ ಸಂಘದ ಚಟುವಟಿಕೆ ನಿಲ್ಲಿಸಲು ಸಾಧ್ಯವಿಲ್ಲ. ನೀವು ಈಗ ಏನೇನು ಮಾಡುತ್ತಿದ್ದೀರೋ ಅದಕ್ಕಿಂತ ಅಪ್ಪನಷ್ಟನ್ನು ನಾವು ಅಧಿಕಾರಕ್ಕೆ ಬಂದಾಗ ಮಾಡುತ್ತೇವೆ, ನೋಡುತ್ತಿರಿ’ ಎಂದು ಹೇಳಿದರು.</p><p>‘ಹಿಂದುತ್ವದ ಬಗ್ಗೆ ಮಾತಾಡುವುದು ಬ್ರೇನ್ ವಾಶಾ, ಸಂವಿಧಾನದ ಬಗ್ಗೆ, ಅಂಬೇಡ್ಕರ್ ಬಗ್ಗೆ ನಾವು ಜನರಿಗೆ ಹೇಳುವುದು ಬೇಡವಾ?’ ಎಂದು ಕೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು</strong>: ‘ಸಂಘದ ಗಣವೇಷದಲ್ಲಿ ವಿಧಾನಸೌಧಕ್ಕೆ ಬರುತ್ತೇವೆ, ಏನು ಮಾಡುತ್ತೀರಾ? ಮನೆ ಮನೆಯಲ್ಲಿ ಆರ್ಎಸ್ಎಸ್ ಶಾಖೆ ಮಾಡುತ್ತೇವೆ’ ಎಂದು ಬಿಜೆಪಿ ಶಾಸಕ ಟಿ.ಎಸ್. ಶ್ರೀವತ್ಸ ಹೇಳಿದರು.</p><p>ಇಲ್ಲಿ ಸೋಮವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಸರ್ಕಾರಿ ಸ್ಥಳಗಳಲ್ಲಿ ಆರ್ಎಸ್ಎಸ್ ಚಟುವಟಿಕೆಗಳಿಗೆ ನಿಷೇಧ ಹೇರುವಂತೆ ಸಚಿವ ಪ್ರಿಯಾಂಕ್ ಖರ್ಗೆ ಪತ್ರ ಬರೆದಿರುವುದು ಹಾಗೂ ಅದಕ್ಕೆ ಮುಖ್ಯಮಂತ್ರಿ ಪ್ರತಿಕ್ರಿಯಿಸಿರುವುದು ಮೂರ್ಖತನದ ಪರಮಾವಧಿ’ ಎಂದು ದೂರಿದರು.</p><p>‘ಪ್ರಿಯಾಂಕ್ ಆರ್ಎಸ್ಎಸ್ ಶಾಖೆಗೆ ಬಂದು ಒಂದು ತಾಸು ಕೂರಲಿ. ಆಗ ಅವರಿಗೆ ಸಂಘದ ಚಟುವಟಿಕೆ ಗೊತ್ತಾಗುತ್ತದೆ’ ಎಂದರು.</p><p>‘ಆರ್ಎಸ್ಎಸ್ ಎಂದರೆ ಅವರಿಗೆ ಯಾಕಿಷ್ಟು ಅಲರ್ಜಿ? ಯಾರ ಕೈಯಲ್ಲೂ ಸಂಘದ ಚಟುವಟಿಕೆ ನಿಲ್ಲಿಸಲು ಸಾಧ್ಯವಿಲ್ಲ. ನೀವು ಈಗ ಏನೇನು ಮಾಡುತ್ತಿದ್ದೀರೋ ಅದಕ್ಕಿಂತ ಅಪ್ಪನಷ್ಟನ್ನು ನಾವು ಅಧಿಕಾರಕ್ಕೆ ಬಂದಾಗ ಮಾಡುತ್ತೇವೆ, ನೋಡುತ್ತಿರಿ’ ಎಂದು ಹೇಳಿದರು.</p><p>‘ಹಿಂದುತ್ವದ ಬಗ್ಗೆ ಮಾತಾಡುವುದು ಬ್ರೇನ್ ವಾಶಾ, ಸಂವಿಧಾನದ ಬಗ್ಗೆ, ಅಂಬೇಡ್ಕರ್ ಬಗ್ಗೆ ನಾವು ಜನರಿಗೆ ಹೇಳುವುದು ಬೇಡವಾ?’ ಎಂದು ಕೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>