ಬೆಂಗಳೂರು: ‘ಕೃಷಿ ಸಚಿವ ಬಿ.ಸಿ.ಪಾಟೀಲ ಅವರು ಇನ್ನು ಸಿನಿಮಾ ಗುಂಗಿನಿಂದ ಹೊರಬಂದಂತಿಲ್ಲ’ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಕೃಷಿ ಸಚಿವ ಬಿ.ಸಿ.ಪಾಟೀಲ ಅವರಿಗೆ ಬಗೆಬಗೆಯ ಫೋಟೋಶೂಟ್ ಮಾಡಿಸುವುದರಲ್ಲಿ ಇರುವಷ್ಟು ಆಸಕ್ತಿ ರೈತರ ಬಗ್ಗೆ ಇಲ್ಲ’ ಎಂದು ವ್ಯಂಗ್ಯವಾಡಿದೆ.
‘ರೈತರ ಹಲವು ಸಮಸ್ಯೆಗಳನ್ನು ಬಗೆಹರಿಸಲಾಗದ, ನೀಡಿದ ಖಾತೆ ನಿಭಾಯಿಸಲಾಗದ ತಮ್ಮ ಹೇಡಿತನ ಮರೆಮಾಚಲು ಬೆವರು ಹರಿಸುವ ರೈತರನ್ನೇ ಹೇಡಿಗಳೆನ್ನುವುದು ಇವರ ಖಯಾಲಿ!’ ಎಂದು ಕಿಡಿಕಾರಿದೆ.
ರಾಜ್ಯ ವಿಧಾನಸಭೆ ಚುನಾವಣೆಗೆ ಒಂದು ವರ್ಷ ಬಾಕಿ ಇರುವಾಗಲೇ ರಾಜಕೀಯ ಮುಖಂಡರ ವಾಕ್ಸಮರ ದಿನದಿಂದ ದಿನಕ್ಕೆ ಜೋರಾಗುತ್ತಿದೆ.
ಸಚಿವ @bcpatilkourava ಅವರು ಇನ್ನೂ ಸಹ ಸಿನೆಮಾ ಗುಂಗಿನಿಂದ ಹೊರಬಂದಂತಿಲ್ಲ! ಬಗೆಬಗೆಯ ಫೋಟೋಶೂಟ್ನಲ್ಲಿ ಇರುವಷ್ಟು ಆಸಕ್ತಿ ರೈತರ ಬಗ್ಗೆ ಇಲ್ಲ.
ರೈತರ ಹತ್ತು ಹಲವು ಸಮಸ್ಯೆಗಳನ್ನು ಬಗೆಹರಿಸಲಾಗದ, ನೀಡಿದ ಖಾತೆ ನಿಭಾಯಿಸಲಾಗದ ತಮ್ಮ ಹೇಡಿತನ ಮರೆಮಾಚಲು ಬೆವರು ಹರಿಸುವ ರೈತರನ್ನೇ ಹೇಡಿಗಳೆನ್ನುವುದು ಇವರ ಖಯಾಲಿ!#ಬಿಜೆಪಿಯಅಸಮರ್ಥರುpic.twitter.com/eKVwJ2S4Gj