<p><strong>ಬೆಂಗಳೂರು: </strong>‘ಕಾಂಗ್ರೆಸ್, ಜೆಡಿಎಸ್ ಬಗ್ಗೆ ಮಾತನಾಡುತ್ತ ಸಮಯ ವ್ಯರ್ಥ ಮಾಡುವುದಿಲ್ಲ. ಇನ್ನು ರಾಜ್ಯದಅಭಿವೃದ್ಧಿ ಹಾಗೂಪಕ್ಷ ಬಲಪಡಿಸುವ ಬಗ್ಗೆಯಷ್ಟೇ ನಮ್ಮ ಯೋಚನೆ’ ಎಂದು ಬಿ.ಎಸ್.ಯಡಿಯೂರಪ್ಪ ಹೇಳಿದರು.</p>.<p>15 ವಿಧಾನಸಭಾ ಕ್ಷೇತ್ರಗಳಲ್ಲಿ 12 ಸ್ಥಾನವನ್ನು ಗೆದ್ದು ಬಿಜೆಪಿ, ತನ್ನ ಸರ್ಕಾರವನ್ನು ಭದ್ರಪಡಿಸಿಕೊಂಡಿದೆ. ಚುನಾವಣಾ ಫಲಿತಾಂಶದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.</p>.<p>‘ಕಾಂಗ್ರೆಸ್, ಜೆಡಿಎಸ್ ಬಗ್ಗೆ ಟೀಕೆ ಮಾಡುವುದರಿಂದ ನಮಗೆ ಲಾಭವಿಲ್ಲ. ಸೋಲಿನ ಹೊಣೆಹೊತ್ತು ಅವರು ರಾಜೀನಾಮೆ ನೀಡುತ್ತಿದ್ದಾರೆ. ಅದು ಅವರ ಪಕ್ಷದ ಆಂತರಿಕವಿಷಯ ಅದರ ಬಗ್ಗೆ ನಾವು ತಲೆಕಡಿಸಿಕೊಳ್ಳಬೇಕಿಲ್ಲ’ ಎಂದರು.</p>.<p>‘ಸಾಮಾನ್ಯ ಜನರು ಕುಳಿತಲ್ಲಿ, ನಿಂತಲ್ಲಿ ರಾಜ್ಯದ ಅಭಿವೃದ್ಧಿ ಬಗ್ಗೆಯೇ ಮಾತನಾಡುವಂತೆ ನಾವು ಕೆಲಸ ಮಾಡಬೇಕು. ನನ್ನ ಸಚಿವ ಸಂಪುಟ ಸದಸ್ಯರು ಈ ಬಗ್ಗೆ ಗಮನಕೊಡಬೇಕು’ ಎಂದು ಸಲಹೆ ನೀಡಿದರು.</p>.<p>‘ಪ್ರಧಾನಿ ನರೇಂದ್ರ ಮೋದಿ ಅವರು ಈ ಚುನಾವಣೆ ಫಲಿತಾಂಶ ಏನಾಗುತ್ತದೆ ಎಂದು ಕಾತರದಿಂದ ಕಾಯುತ್ತಿದ್ದರು. ಬಹಳ ಖುಷಿಯಾಗಿರುವುದುಅವರ ಮಾತುಗಳಿಂದಲೇ ತಿಳಿದಿದೆ.ಸಾಮೂಹಿಕ ನೇತೃತ್ವವೇಈ ದೊಡ್ಡ ಗೆಲುವಿಗೆ ಕಾರಣ.ಉತ್ತರ ಕರ್ನಾಟಕ ಭಾಗದಲ್ಲಿ ಏಳಕ್ಕೆ ಏಳೂ ಸೀಟು ಗೆದ್ದಿದ್ದೇವೆ. ಈಗ ಅಲ್ಲಿಗೆ ಹೋಗಲು ಅವರಿಗೆ ಮುಖವಿಲ್ಲ’ ಎಂದು ತಿಳಿಸಿದರು.</p>.<p>‘ಬೆಂಗಳೂರಿನಲ್ಲಿ ಎಷ್ಟು ದೊಡ್ಡ ಅಂತರದಲ್ಲಿ ಗೆಲವು ಪಡೆದಿದ್ದೇವೆ. ರಾಜ್ಯ ರಾಜಧಾನಿ ಬಗ್ಗೆ ಇಡೀ ದೇಶದ ಗಮನವಿದೆ. ಇನ್ನು 3 ತಿಂಗಳಲ್ಲಿ ಇಲ್ಲಿನ ಸ್ಥಿತಿ ಪೂರ್ತಿ ಬದಲಾಗಬೇಕು. ಇದಕ್ಕೆ ಕಾರ್ಪೊರೇಟರ್ಗಳು ಸಾಕಷ್ಟು ಕೆಲಸ ಮಾಡಬೇಕು. ಇಲ್ಲಿ ಪ್ರಾಮಾಣಿಕತೆಯ ಕೊರತೆ ಇದೆ. ಅದು ಸರಿಯಾದರೆ, ಎಲ್ಲವೂ ಸರಿಯಾಗುತ್ತದೆ’ ಎಂದು ಕಿವಿ ಮಾತು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>‘ಕಾಂಗ್ರೆಸ್, ಜೆಡಿಎಸ್ ಬಗ್ಗೆ ಮಾತನಾಡುತ್ತ ಸಮಯ ವ್ಯರ್ಥ ಮಾಡುವುದಿಲ್ಲ. ಇನ್ನು ರಾಜ್ಯದಅಭಿವೃದ್ಧಿ ಹಾಗೂಪಕ್ಷ ಬಲಪಡಿಸುವ ಬಗ್ಗೆಯಷ್ಟೇ ನಮ್ಮ ಯೋಚನೆ’ ಎಂದು ಬಿ.ಎಸ್.ಯಡಿಯೂರಪ್ಪ ಹೇಳಿದರು.</p>.<p>15 ವಿಧಾನಸಭಾ ಕ್ಷೇತ್ರಗಳಲ್ಲಿ 12 ಸ್ಥಾನವನ್ನು ಗೆದ್ದು ಬಿಜೆಪಿ, ತನ್ನ ಸರ್ಕಾರವನ್ನು ಭದ್ರಪಡಿಸಿಕೊಂಡಿದೆ. ಚುನಾವಣಾ ಫಲಿತಾಂಶದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.</p>.<p>‘ಕಾಂಗ್ರೆಸ್, ಜೆಡಿಎಸ್ ಬಗ್ಗೆ ಟೀಕೆ ಮಾಡುವುದರಿಂದ ನಮಗೆ ಲಾಭವಿಲ್ಲ. ಸೋಲಿನ ಹೊಣೆಹೊತ್ತು ಅವರು ರಾಜೀನಾಮೆ ನೀಡುತ್ತಿದ್ದಾರೆ. ಅದು ಅವರ ಪಕ್ಷದ ಆಂತರಿಕವಿಷಯ ಅದರ ಬಗ್ಗೆ ನಾವು ತಲೆಕಡಿಸಿಕೊಳ್ಳಬೇಕಿಲ್ಲ’ ಎಂದರು.</p>.<p>‘ಸಾಮಾನ್ಯ ಜನರು ಕುಳಿತಲ್ಲಿ, ನಿಂತಲ್ಲಿ ರಾಜ್ಯದ ಅಭಿವೃದ್ಧಿ ಬಗ್ಗೆಯೇ ಮಾತನಾಡುವಂತೆ ನಾವು ಕೆಲಸ ಮಾಡಬೇಕು. ನನ್ನ ಸಚಿವ ಸಂಪುಟ ಸದಸ್ಯರು ಈ ಬಗ್ಗೆ ಗಮನಕೊಡಬೇಕು’ ಎಂದು ಸಲಹೆ ನೀಡಿದರು.</p>.<p>‘ಪ್ರಧಾನಿ ನರೇಂದ್ರ ಮೋದಿ ಅವರು ಈ ಚುನಾವಣೆ ಫಲಿತಾಂಶ ಏನಾಗುತ್ತದೆ ಎಂದು ಕಾತರದಿಂದ ಕಾಯುತ್ತಿದ್ದರು. ಬಹಳ ಖುಷಿಯಾಗಿರುವುದುಅವರ ಮಾತುಗಳಿಂದಲೇ ತಿಳಿದಿದೆ.ಸಾಮೂಹಿಕ ನೇತೃತ್ವವೇಈ ದೊಡ್ಡ ಗೆಲುವಿಗೆ ಕಾರಣ.ಉತ್ತರ ಕರ್ನಾಟಕ ಭಾಗದಲ್ಲಿ ಏಳಕ್ಕೆ ಏಳೂ ಸೀಟು ಗೆದ್ದಿದ್ದೇವೆ. ಈಗ ಅಲ್ಲಿಗೆ ಹೋಗಲು ಅವರಿಗೆ ಮುಖವಿಲ್ಲ’ ಎಂದು ತಿಳಿಸಿದರು.</p>.<p>‘ಬೆಂಗಳೂರಿನಲ್ಲಿ ಎಷ್ಟು ದೊಡ್ಡ ಅಂತರದಲ್ಲಿ ಗೆಲವು ಪಡೆದಿದ್ದೇವೆ. ರಾಜ್ಯ ರಾಜಧಾನಿ ಬಗ್ಗೆ ಇಡೀ ದೇಶದ ಗಮನವಿದೆ. ಇನ್ನು 3 ತಿಂಗಳಲ್ಲಿ ಇಲ್ಲಿನ ಸ್ಥಿತಿ ಪೂರ್ತಿ ಬದಲಾಗಬೇಕು. ಇದಕ್ಕೆ ಕಾರ್ಪೊರೇಟರ್ಗಳು ಸಾಕಷ್ಟು ಕೆಲಸ ಮಾಡಬೇಕು. ಇಲ್ಲಿ ಪ್ರಾಮಾಣಿಕತೆಯ ಕೊರತೆ ಇದೆ. ಅದು ಸರಿಯಾದರೆ, ಎಲ್ಲವೂ ಸರಿಯಾಗುತ್ತದೆ’ ಎಂದು ಕಿವಿ ಮಾತು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>