ಎನ್ಐಎ ಪರ ವಾದ ಮಂಡಿಸಿದ ಪಿ.ಪ್ರಸನ್ನ ಕುಮಾರ್, ‘ಪ್ರಕರಣದ ಇತರ ಆರೋಪಿಗಳು ನನ್ನ ಮನೆಯಲ್ಲಿ ಬಾಂಬ್ ತಯಾರಿಸಿದ್ದರು ಎಂಬುದನ್ನು ಮೊಹಮದ್ ಅಯೂಬ್ ಒಪ್ಪಿಕೊಂಡಿದ್ದಾನೆ. ಅಂತೆಯೇ, ಮೈಸೂರು ಕೋರ್ಟ್ನಲ್ಲಿ ಬಾಂಬ್ ಸ್ಫೋಟಗೊಂಡ ನಂತರ ಬೇಸ್ ಮೂವ್ಮೆಂಟ್ ಘಟನೆಯ ಹೊಣೆ ಹೊತ್ತುಕೊಂಡಿದೆ ಎಂಬುದನ್ನು ಈತ ತನ್ನ ಮೊಬೈಲ್ ಫೋನ್ನಿಂದ ಬಹಿರಂಗಪಡಿಸಿದ್ದಾನೆ’ ಎಂದರು.