<p><strong>ಜೋಹಾನಸ್ಬರ್ಗ್</strong>: ಕೃತಕ ಬುದ್ಧಿಮತ್ತೆಯ ದುರುಪಯೋಗವನ್ನು ತಡೆಗಟ್ಟಲು ಜಾಗತಿಕ ಒಪ್ಪಂದಕ್ಕೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಕರೆ ನೀಡಿದರು. ನಿರ್ಣಾಯಕ ತಂತ್ರಜ್ಞಾನಗಳು ಹಣಕಾಸು ಕೇಂದ್ರಿತವಾಗಿರದೆ ಮಾನವ ಕೇಂದ್ರಿತವಾಗಿರಬೇಕೆಂದು ಬಲವಾಗಿ ಧ್ವನಿ ಎತ್ತಿದರು.</p><p>ಜಿ 20 ಶೃಂಗಸಭೆಯ ಮೂರನೇ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಮೋದಿ, ತಂತ್ರಜ್ಞಾನ ಅನ್ವಯಿಕೆಗಳು ರಾಷ್ಟ್ರಮಟ್ಟಕ್ಕಿಂತ ಜಾಗತಿಕವಾಗಿರಬೇಕು ಮತ್ತು 'ವಿಶೇಷ ಮಾದರಿ'ಗಳಿಗಿಂತ 'ಮುಕ್ತ ಮೂಲ'ವನ್ನು ಆಧರಿಸಿರಬೇಕು ಎಂದು ಹೇಳಿದರು.</p><p>ಈ ದೃಷ್ಟಿಕೋನವನ್ನು ಭಾರತದ ತಂತ್ರಜ್ಞಾನ ಪರಿಸರ ವ್ಯವಸ್ಥೆಯಲ್ಲಿ ಸಂಯೋಜಿಸಲಾಗಿದೆ. ಇದು ಬಾಹ್ಯಾಕಾಶ ಅನ್ವಯಿಕೆಗಳಲ್ಲಿ, ಎಐ ಅಥವಾ ಡಿಜಿಟಲ್ ಪಾವತಿಗಳಲ್ಲಿ ಗಮನಾರ್ಹ ಪ್ರಯೋಜನಗಳಿಗೆ ಕಾರಣವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು,</p><p>‘ಜಾಗತಿಕ ಒಳಿತಿಗಾಗಿ ಎಐ ಬಳಸುವುದನ್ನು ಮತ್ತು ಅದರ ದುರುಪಯೋಗ ತಡೆಯುವುದನ್ನು ನಾವೆಲ್ಲರೂ ಖಚಿತಪಡಿಸಿಕೊಳ್ಳಬೇಕು. ಇದನ್ನು ಮಾಡಲು, ಪರಿಣಾಮಕಾರಿ ಮಾನವ ಮೇಲ್ವಿಚಾರಣೆ, ಸುರಕ್ಷತೆ-ವಿನ್ಯಾಸ, ಪಾರದರ್ಶಕತೆ ಮತ್ತು ಡೀಪ್ಫೇಕ್ಗಳು, ಅಪರಾಧ ಮತ್ತು ಭಯೋತ್ಪಾದಕ ಚಟುವಟಿಕೆಗಳಲ್ಲಿ ಎಐ ಬಳಕೆಯ ಮೇಲೆ ಕಟ್ಟುನಿಟ್ಟಾದ ನಿರ್ಬಂಧಗಳು ಸೇರಿದಂತೆ ಕೆಲವು ಪ್ರಮುಖ ತತ್ವಗಳ ಆಧಾರದ ಮೇಲೆ ನಾವು ಎಐ ಕುರಿತು ಜಾಗತಿಕ ಒಪ್ಪಂದವನ್ನು ರಚಿಸಬೇಕು’ಎಂದು ಮೋದಿ ಹೇಳಿದರು.</p><p>ಮಾನವ ಜೀವನ, ಭದ್ರತೆ ಅಥವಾ ಸಾರ್ವಜನಿಕ ನಂಬಿಕೆಯ ಮೇಲೆ ಪರಿಣಾಮ ಬೀರುವ ಎಐ ವ್ಯವಸ್ಥೆಗಳು ಜವಾಬ್ದಾರಿಯುತವಾಗಿರಬೇಕು ಮತ್ತು ಲೆಕ್ಕಪರಿಶೋಧನೆಗೆ ಒಳಪಟ್ಟಿರಬೇಕು ಎಂದು ಪ್ರಧಾನಿ ಹೇಳಿದರು. </p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಜೋಹಾನಸ್ಬರ್ಗ್</strong>: ಕೃತಕ ಬುದ್ಧಿಮತ್ತೆಯ ದುರುಪಯೋಗವನ್ನು ತಡೆಗಟ್ಟಲು ಜಾಗತಿಕ ಒಪ್ಪಂದಕ್ಕೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಕರೆ ನೀಡಿದರು. ನಿರ್ಣಾಯಕ ತಂತ್ರಜ್ಞಾನಗಳು ಹಣಕಾಸು ಕೇಂದ್ರಿತವಾಗಿರದೆ ಮಾನವ ಕೇಂದ್ರಿತವಾಗಿರಬೇಕೆಂದು ಬಲವಾಗಿ ಧ್ವನಿ ಎತ್ತಿದರು.</p><p>ಜಿ 20 ಶೃಂಗಸಭೆಯ ಮೂರನೇ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಮೋದಿ, ತಂತ್ರಜ್ಞಾನ ಅನ್ವಯಿಕೆಗಳು ರಾಷ್ಟ್ರಮಟ್ಟಕ್ಕಿಂತ ಜಾಗತಿಕವಾಗಿರಬೇಕು ಮತ್ತು 'ವಿಶೇಷ ಮಾದರಿ'ಗಳಿಗಿಂತ 'ಮುಕ್ತ ಮೂಲ'ವನ್ನು ಆಧರಿಸಿರಬೇಕು ಎಂದು ಹೇಳಿದರು.</p><p>ಈ ದೃಷ್ಟಿಕೋನವನ್ನು ಭಾರತದ ತಂತ್ರಜ್ಞಾನ ಪರಿಸರ ವ್ಯವಸ್ಥೆಯಲ್ಲಿ ಸಂಯೋಜಿಸಲಾಗಿದೆ. ಇದು ಬಾಹ್ಯಾಕಾಶ ಅನ್ವಯಿಕೆಗಳಲ್ಲಿ, ಎಐ ಅಥವಾ ಡಿಜಿಟಲ್ ಪಾವತಿಗಳಲ್ಲಿ ಗಮನಾರ್ಹ ಪ್ರಯೋಜನಗಳಿಗೆ ಕಾರಣವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು,</p><p>‘ಜಾಗತಿಕ ಒಳಿತಿಗಾಗಿ ಎಐ ಬಳಸುವುದನ್ನು ಮತ್ತು ಅದರ ದುರುಪಯೋಗ ತಡೆಯುವುದನ್ನು ನಾವೆಲ್ಲರೂ ಖಚಿತಪಡಿಸಿಕೊಳ್ಳಬೇಕು. ಇದನ್ನು ಮಾಡಲು, ಪರಿಣಾಮಕಾರಿ ಮಾನವ ಮೇಲ್ವಿಚಾರಣೆ, ಸುರಕ್ಷತೆ-ವಿನ್ಯಾಸ, ಪಾರದರ್ಶಕತೆ ಮತ್ತು ಡೀಪ್ಫೇಕ್ಗಳು, ಅಪರಾಧ ಮತ್ತು ಭಯೋತ್ಪಾದಕ ಚಟುವಟಿಕೆಗಳಲ್ಲಿ ಎಐ ಬಳಕೆಯ ಮೇಲೆ ಕಟ್ಟುನಿಟ್ಟಾದ ನಿರ್ಬಂಧಗಳು ಸೇರಿದಂತೆ ಕೆಲವು ಪ್ರಮುಖ ತತ್ವಗಳ ಆಧಾರದ ಮೇಲೆ ನಾವು ಎಐ ಕುರಿತು ಜಾಗತಿಕ ಒಪ್ಪಂದವನ್ನು ರಚಿಸಬೇಕು’ಎಂದು ಮೋದಿ ಹೇಳಿದರು.</p><p>ಮಾನವ ಜೀವನ, ಭದ್ರತೆ ಅಥವಾ ಸಾರ್ವಜನಿಕ ನಂಬಿಕೆಯ ಮೇಲೆ ಪರಿಣಾಮ ಬೀರುವ ಎಐ ವ್ಯವಸ್ಥೆಗಳು ಜವಾಬ್ದಾರಿಯುತವಾಗಿರಬೇಕು ಮತ್ತು ಲೆಕ್ಕಪರಿಶೋಧನೆಗೆ ಒಳಪಟ್ಟಿರಬೇಕು ಎಂದು ಪ್ರಧಾನಿ ಹೇಳಿದರು. </p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>