<p><strong>ಢಾಕಾ:</strong> ಮಾಜಿ ಪ್ರಧಾನಿ ಶೇಖ್ ಹಸೀನಾ ಮತ್ತು ಇತರ ಇಬ್ಬರ ವಿರುದ್ಧ ಸಾಮೂಹಿಕ ಹತ್ಯೆ ಸೇರಿದಂತೆ ಹಲವು ಆರೋಪಗಳ ಮೇಲೆ ಬಾಂಗ್ಲಾದೇಶದ ಅಂತರರಾಷ್ಟ್ರೀಯ ಅಪರಾಧ ನ್ಯಾಯಮಂಡಳಿಯು (ಐಸಿಟಿ) ಭಾನುವಾರ ದೋಷಾರೋಪಣೆ ಹೊರಿಸಿದೆ.</p>.<p>ಕಳೆದ ವರ್ಷ ವಿದ್ಯಾರ್ಥಿಗಳ ನೇತೃತ್ವದಲ್ಲಿ ನಡೆದ ಪ್ರತಿಭಟನೆಯನ್ನು ಹಿಂಸಾತ್ಮಕವಾಗಿ ಹತ್ತಿಕ್ಕಲು ಯತ್ನಿಸಿದ ಪ್ರಮುಖ ಆರೋಪ ಅವರ ಮೇಲಿದೆ. ಈ ಪ್ರತಿಭಟನೆ ಬೆನ್ನಲ್ಲೇ ಹಸೀನಾ ನೇತೃತ್ವದ ಸರ್ಕಾರವನ್ನು ಪದಚ್ಯುತಗೊಳಿಸಲಾಯಿತು. ಅದಾದ 10 ತಿಂಗಳ ಬಳಿಕ, ಹಸೀನಾ ಅವರ ಗೈರಿನಲ್ಲಿ ಈ ವಿಚಾರಣೆ ಆರಂಭವಾಗಿದೆ. </p>.<p>ಮೂವರು ನ್ಯಾಯಮೂರ್ತಿಗಳ ಐಸಿಟಿ ಪೀಠವು ವಿಚಾರಣೆ ನಡೆಸಿತು. ಹಸೀನಾ ಅವರ ಸರ್ಕಾರವು ಪ್ರತಿಭಟನೆಯನ್ನು ಅತ್ಯಂತ ಕ್ರೂರವಾಗಿ ಹತ್ತಿಕ್ಕಲು ಪ್ರಯತ್ನಿಸಿತ್ತು ಎಂದು ಪಾಸಿಕ್ಯೂಷನ್ ಮಾಡಿದ ಆರೋಪವನ್ನು ಪೀಠ ಪರಿಗಣಿಸುವುದಾಗಿ ತಿಳಿಸಿತು.</p>.<h2>ಹಸೀನಾ ವಿರುದ್ಧ ವಾರಂಟ್:</h2>.<p>ಹಸೀನಾ ಮತ್ತು ಆಗಿನ ಗೃಹ ಸಚಿವ ಅಸದುಜ್ಜಮಾನ್ ಖಾನ್ ಕಮಲ್ ವಿರುದ್ಧ ಪೀಠವು ಹೊಸದಾಗಿ ಬಂಧನದ ವಾರಂಟ್ ಹೊರಡಿಸಿತು. ಮೂರನೇ ಆರೋಪಿ, ಆಗಿನ ಪೊಲೀಸ್ ಇನ್ಸ್ಪೆಕ್ಟರ್ ಜನರಲ್ ಚೌಧರಿ ಅಬ್ದುಲ್ಲಾ ಅಲ್– ಮಾಮುನ್ ಈಗಾಗಲೇ ಬಂಧನದಲ್ಲಿದ್ದಾರೆ. </p>.<p>ಬಾಂಗ್ಲಾದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ನ್ಯಾಯಮಂಡಳಿ ವಿಚಾರಣೆಯನ್ನು ಸರ್ಕಾರಿ ವಾಹಿನಿಯಲ್ಲಿ ನೇರ ಪ್ರಸಾರ ಮಾಡಲಾಯಿತು. </p>.<p>ಕಳೆದ ವರ್ಷ ಜುಲೈ 15ರಿಂದ ಆಗಸ್ಟ್ 15ರವರೆಗೆ ನಡೆದ ಹಿಂಸಾಚಾರದಲ್ಲಿ 1,400 ಜನರು ಮೃತಪಟ್ಟಿದ್ದರು ಎಂದು ವಿಶ್ವಸಂಸ್ಥೆಯ ವರದಿಯಲ್ಲಿ ಉಲ್ಲೇಖಿಸಲಾಗಿದೆ. </p>.<h2>ವ್ಯವಸ್ಥಿತ ದಾಳಿ– ಪ್ರಾಸಿಕ್ಯೂಷನ್ ಆರೋಪ:</h2>.<p>‘ಪ್ರತಿಭಟನೆಯನ್ನು ವ್ಯವಸ್ಥಿತವಾಗಿ ಹತ್ತಿಕ್ಕಲು ಹಸೀನಾ ಅವರು ಎಲ್ಲ ಮಾರ್ಗಗಳನ್ನು ಬಳಸಿದ್ದರು. ಈ ಮೂಲಕ ಮಾನವೀಯತೆಯ ವಿರುದ್ಧ ಅವರು ಅಪರಾಧಗಳನ್ನು ಎಸಗಿದ್ದಾರೆ’ ಎಂದು ಪ್ರಾಸಿಕ್ಯೂಷನ್ ತಂಡದ ಮುಖ್ಯಸ್ಥ ಮೊಹಮ್ಮದ್ ತಾಜುಲ್ ಇಸ್ಲಾಂ ವಾದಿಸಿದರು.</p>.<p>ಸಾಮೂಹಿಕ ಹತ್ಯೆಯನ್ನು ತಡೆಯುವಲ್ಲಿ ವೈಫಲ್ಯ, ಪ್ರಚೋದನೆ, ಸಹಭಾಗಿತ್ವ, ಪಿತೂರಿ, ಅನುಕೂಲ ಕಲ್ಪಿಸುವುದು ಸೇರಿದಂತೆ ವಿವಿಧ ಆರೋಪಗಳನ್ನು ಹಸೀನಾ ಮತ್ತು ಇತರ ಇಬ್ಬರ ವಿರುದ್ಧ ಇಸ್ಲಾಂ ಮಾಡಿದರು.</p>.<p>‘ನಮ್ಮದು ಪ್ರಜಾಪ್ರಭುತ್ವ ದೇಶ. ಇಲ್ಲಿ ಮಾನವೀಯತೆ ವಿರುದ್ಧ ಅಪರಾಧಗಳು ನಡೆಯಬಾರದು. ಆದರೆ ಹಸೀನಾ ಅವರ ಆದೇಶದ ಮೇರೆಗೆ ವ್ಯವಸ್ಥಿತವಾಗಿ ಹತ್ಯೆಗಳು, ಕೊಲೆಯತ್ನಗಳು ನಡೆದಿವೆ’ ಎಂದು ಅವರು ಹೇಳಿದರು.</p>.<p>ತನಿಖಾಧಿಕಾರಿಗಳು ಹಸೀನಾ ಅವರ ವಿಡಿಯೊ ತುಣುಕುಗಳು, ಆಡಿಯೊ ಸಾಕ್ಷ್ಯ, ದೂರವಾಣಿ ಸಂಭಾಷಣೆ ಮತ್ತಿತರ ದಾಖಲೆಗಳನ್ನು ಸಂಗ್ರಹಿಸಿದ್ದಾರೆ ಎಂದು ಅವರು ವಿವರಿಸಿದರು.</p>.<h2>ಜಮಾತ್–ಎ– ಇಸ್ಲಾಮಿಗೆ ಅನುಮತಿ</h2>.<p> ಶೇಖ್ ಹಸೀನಾ ಅವರ ಅವಧಿಯಲ್ಲಿ ನಿಷೇಧಕ್ಕೆ ಒಳಗಾಗಿದ್ದ ಬಾಂಗ್ಲಾದೇಶದ ಅತ್ಯಂತ ದೊಡ್ಡ ಇಸ್ಲಾಮಿಸ್ಟ್ ಪಕ್ಷವಾದ ‘ಜಮಾತ್–ಎ–ಇಸ್ಲಾಮಿ’ಯದ ನೋಂದಣಿಯನ್ನು ಪುನರ್ಸ್ಥಾಪಿಸಿ ಅಲ್ಲಿನ ಸುಪ್ರೀಂ ಕೋರ್ಟ್ ಭಾನುವಾರ ತೀರ್ಪು ನೀಡಿದೆ. ಅಲ್ಲದೆ ಚುನಾವಣೆಯಲ್ಲಿ ಭಾಗವಹಿಸಲು ಪಕ್ಷಕ್ಕೆ ಅನುಮತಿಯನ್ನೂ ನೀಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಢಾಕಾ:</strong> ಮಾಜಿ ಪ್ರಧಾನಿ ಶೇಖ್ ಹಸೀನಾ ಮತ್ತು ಇತರ ಇಬ್ಬರ ವಿರುದ್ಧ ಸಾಮೂಹಿಕ ಹತ್ಯೆ ಸೇರಿದಂತೆ ಹಲವು ಆರೋಪಗಳ ಮೇಲೆ ಬಾಂಗ್ಲಾದೇಶದ ಅಂತರರಾಷ್ಟ್ರೀಯ ಅಪರಾಧ ನ್ಯಾಯಮಂಡಳಿಯು (ಐಸಿಟಿ) ಭಾನುವಾರ ದೋಷಾರೋಪಣೆ ಹೊರಿಸಿದೆ.</p>.<p>ಕಳೆದ ವರ್ಷ ವಿದ್ಯಾರ್ಥಿಗಳ ನೇತೃತ್ವದಲ್ಲಿ ನಡೆದ ಪ್ರತಿಭಟನೆಯನ್ನು ಹಿಂಸಾತ್ಮಕವಾಗಿ ಹತ್ತಿಕ್ಕಲು ಯತ್ನಿಸಿದ ಪ್ರಮುಖ ಆರೋಪ ಅವರ ಮೇಲಿದೆ. ಈ ಪ್ರತಿಭಟನೆ ಬೆನ್ನಲ್ಲೇ ಹಸೀನಾ ನೇತೃತ್ವದ ಸರ್ಕಾರವನ್ನು ಪದಚ್ಯುತಗೊಳಿಸಲಾಯಿತು. ಅದಾದ 10 ತಿಂಗಳ ಬಳಿಕ, ಹಸೀನಾ ಅವರ ಗೈರಿನಲ್ಲಿ ಈ ವಿಚಾರಣೆ ಆರಂಭವಾಗಿದೆ. </p>.<p>ಮೂವರು ನ್ಯಾಯಮೂರ್ತಿಗಳ ಐಸಿಟಿ ಪೀಠವು ವಿಚಾರಣೆ ನಡೆಸಿತು. ಹಸೀನಾ ಅವರ ಸರ್ಕಾರವು ಪ್ರತಿಭಟನೆಯನ್ನು ಅತ್ಯಂತ ಕ್ರೂರವಾಗಿ ಹತ್ತಿಕ್ಕಲು ಪ್ರಯತ್ನಿಸಿತ್ತು ಎಂದು ಪಾಸಿಕ್ಯೂಷನ್ ಮಾಡಿದ ಆರೋಪವನ್ನು ಪೀಠ ಪರಿಗಣಿಸುವುದಾಗಿ ತಿಳಿಸಿತು.</p>.<h2>ಹಸೀನಾ ವಿರುದ್ಧ ವಾರಂಟ್:</h2>.<p>ಹಸೀನಾ ಮತ್ತು ಆಗಿನ ಗೃಹ ಸಚಿವ ಅಸದುಜ್ಜಮಾನ್ ಖಾನ್ ಕಮಲ್ ವಿರುದ್ಧ ಪೀಠವು ಹೊಸದಾಗಿ ಬಂಧನದ ವಾರಂಟ್ ಹೊರಡಿಸಿತು. ಮೂರನೇ ಆರೋಪಿ, ಆಗಿನ ಪೊಲೀಸ್ ಇನ್ಸ್ಪೆಕ್ಟರ್ ಜನರಲ್ ಚೌಧರಿ ಅಬ್ದುಲ್ಲಾ ಅಲ್– ಮಾಮುನ್ ಈಗಾಗಲೇ ಬಂಧನದಲ್ಲಿದ್ದಾರೆ. </p>.<p>ಬಾಂಗ್ಲಾದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ನ್ಯಾಯಮಂಡಳಿ ವಿಚಾರಣೆಯನ್ನು ಸರ್ಕಾರಿ ವಾಹಿನಿಯಲ್ಲಿ ನೇರ ಪ್ರಸಾರ ಮಾಡಲಾಯಿತು. </p>.<p>ಕಳೆದ ವರ್ಷ ಜುಲೈ 15ರಿಂದ ಆಗಸ್ಟ್ 15ರವರೆಗೆ ನಡೆದ ಹಿಂಸಾಚಾರದಲ್ಲಿ 1,400 ಜನರು ಮೃತಪಟ್ಟಿದ್ದರು ಎಂದು ವಿಶ್ವಸಂಸ್ಥೆಯ ವರದಿಯಲ್ಲಿ ಉಲ್ಲೇಖಿಸಲಾಗಿದೆ. </p>.<h2>ವ್ಯವಸ್ಥಿತ ದಾಳಿ– ಪ್ರಾಸಿಕ್ಯೂಷನ್ ಆರೋಪ:</h2>.<p>‘ಪ್ರತಿಭಟನೆಯನ್ನು ವ್ಯವಸ್ಥಿತವಾಗಿ ಹತ್ತಿಕ್ಕಲು ಹಸೀನಾ ಅವರು ಎಲ್ಲ ಮಾರ್ಗಗಳನ್ನು ಬಳಸಿದ್ದರು. ಈ ಮೂಲಕ ಮಾನವೀಯತೆಯ ವಿರುದ್ಧ ಅವರು ಅಪರಾಧಗಳನ್ನು ಎಸಗಿದ್ದಾರೆ’ ಎಂದು ಪ್ರಾಸಿಕ್ಯೂಷನ್ ತಂಡದ ಮುಖ್ಯಸ್ಥ ಮೊಹಮ್ಮದ್ ತಾಜುಲ್ ಇಸ್ಲಾಂ ವಾದಿಸಿದರು.</p>.<p>ಸಾಮೂಹಿಕ ಹತ್ಯೆಯನ್ನು ತಡೆಯುವಲ್ಲಿ ವೈಫಲ್ಯ, ಪ್ರಚೋದನೆ, ಸಹಭಾಗಿತ್ವ, ಪಿತೂರಿ, ಅನುಕೂಲ ಕಲ್ಪಿಸುವುದು ಸೇರಿದಂತೆ ವಿವಿಧ ಆರೋಪಗಳನ್ನು ಹಸೀನಾ ಮತ್ತು ಇತರ ಇಬ್ಬರ ವಿರುದ್ಧ ಇಸ್ಲಾಂ ಮಾಡಿದರು.</p>.<p>‘ನಮ್ಮದು ಪ್ರಜಾಪ್ರಭುತ್ವ ದೇಶ. ಇಲ್ಲಿ ಮಾನವೀಯತೆ ವಿರುದ್ಧ ಅಪರಾಧಗಳು ನಡೆಯಬಾರದು. ಆದರೆ ಹಸೀನಾ ಅವರ ಆದೇಶದ ಮೇರೆಗೆ ವ್ಯವಸ್ಥಿತವಾಗಿ ಹತ್ಯೆಗಳು, ಕೊಲೆಯತ್ನಗಳು ನಡೆದಿವೆ’ ಎಂದು ಅವರು ಹೇಳಿದರು.</p>.<p>ತನಿಖಾಧಿಕಾರಿಗಳು ಹಸೀನಾ ಅವರ ವಿಡಿಯೊ ತುಣುಕುಗಳು, ಆಡಿಯೊ ಸಾಕ್ಷ್ಯ, ದೂರವಾಣಿ ಸಂಭಾಷಣೆ ಮತ್ತಿತರ ದಾಖಲೆಗಳನ್ನು ಸಂಗ್ರಹಿಸಿದ್ದಾರೆ ಎಂದು ಅವರು ವಿವರಿಸಿದರು.</p>.<h2>ಜಮಾತ್–ಎ– ಇಸ್ಲಾಮಿಗೆ ಅನುಮತಿ</h2>.<p> ಶೇಖ್ ಹಸೀನಾ ಅವರ ಅವಧಿಯಲ್ಲಿ ನಿಷೇಧಕ್ಕೆ ಒಳಗಾಗಿದ್ದ ಬಾಂಗ್ಲಾದೇಶದ ಅತ್ಯಂತ ದೊಡ್ಡ ಇಸ್ಲಾಮಿಸ್ಟ್ ಪಕ್ಷವಾದ ‘ಜಮಾತ್–ಎ–ಇಸ್ಲಾಮಿ’ಯದ ನೋಂದಣಿಯನ್ನು ಪುನರ್ಸ್ಥಾಪಿಸಿ ಅಲ್ಲಿನ ಸುಪ್ರೀಂ ಕೋರ್ಟ್ ಭಾನುವಾರ ತೀರ್ಪು ನೀಡಿದೆ. ಅಲ್ಲದೆ ಚುನಾವಣೆಯಲ್ಲಿ ಭಾಗವಹಿಸಲು ಪಕ್ಷಕ್ಕೆ ಅನುಮತಿಯನ್ನೂ ನೀಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>