<p class="title"><strong>ಕರಾಚಿ:</strong> ಪಾಕಿಸ್ತಾನದ ಕರಾಚಿ ನಗರದ ನಾರಾಯಣಪುರದ ನಾರಾಯಣ ಮಂದಿರದಲ್ಲಿ ಹಿಂದೂ ದೇವರ ಪ್ರತಿಮೆಯನ್ನು ಸೋಮವಾರ ವ್ಯಕ್ತಿಯೊಬ್ಬ ನಾಶಪಡಿಸಿದ್ದಾನೆ.</p>.<p class="title">ಘಟನೆ ಸಂಬಂಧ ಮೊಹಮ್ಮದ್ ವಾಲೀದ್ ಶಬ್ಬೀರ್ ಎಂಬಾತನನ್ನು ಬಂಧಿಸಲಾಗಿದೆ. ಮುಖೇಶ್ ಕುಮಾರ್ ದೂರು ನೀಡಿದ್ದು, ಶಬ್ಬೀರ್ ಪ್ರತಿಮೆ ನಾಶಪಡಿಸಿದ್ದನ್ನು ನೋಡಿದ್ದೇನೆ ಎಂದಿದ್ದಾರೆ.</p>.<p class="title">ದೇಗುಲಕ್ಕೆ ಬಂದಿದ್ದ ಹಿಂದೂಗಳೇ ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಹಿಂದೂಗಳಿಗೆ ರಕ್ಷಣೆ ಒದಗಿಸಬೇಕು ಎಂದು ಒತ್ತಾಯಿಸಿ ಸ್ಥಳೀಯರು ಬಳಿಕ ಪ್ರತಿಭಟನೆಯನ್ನೂ ನಡೆಸಿದರು.</p>.<p>ಇಲ್ಲಿ ಹಿಂದೂಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇಂತಹ ಘಟನೆಗಳು ಅಶಾಂತಿ ಮೂಡಿಸಲಿವೆ. ಇದನ್ನು ಖಂಡಿಸುತ್ತೇನೆ ಎಂದು ಸಿಂಧ್ ಪ್ರಾಂತ್ಯದ ಸಚಿವ ಗ್ಯಾನ್ಚಂದ್ ಇಸ್ರಾಣಿ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="title"><strong>ಕರಾಚಿ:</strong> ಪಾಕಿಸ್ತಾನದ ಕರಾಚಿ ನಗರದ ನಾರಾಯಣಪುರದ ನಾರಾಯಣ ಮಂದಿರದಲ್ಲಿ ಹಿಂದೂ ದೇವರ ಪ್ರತಿಮೆಯನ್ನು ಸೋಮವಾರ ವ್ಯಕ್ತಿಯೊಬ್ಬ ನಾಶಪಡಿಸಿದ್ದಾನೆ.</p>.<p class="title">ಘಟನೆ ಸಂಬಂಧ ಮೊಹಮ್ಮದ್ ವಾಲೀದ್ ಶಬ್ಬೀರ್ ಎಂಬಾತನನ್ನು ಬಂಧಿಸಲಾಗಿದೆ. ಮುಖೇಶ್ ಕುಮಾರ್ ದೂರು ನೀಡಿದ್ದು, ಶಬ್ಬೀರ್ ಪ್ರತಿಮೆ ನಾಶಪಡಿಸಿದ್ದನ್ನು ನೋಡಿದ್ದೇನೆ ಎಂದಿದ್ದಾರೆ.</p>.<p class="title">ದೇಗುಲಕ್ಕೆ ಬಂದಿದ್ದ ಹಿಂದೂಗಳೇ ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಹಿಂದೂಗಳಿಗೆ ರಕ್ಷಣೆ ಒದಗಿಸಬೇಕು ಎಂದು ಒತ್ತಾಯಿಸಿ ಸ್ಥಳೀಯರು ಬಳಿಕ ಪ್ರತಿಭಟನೆಯನ್ನೂ ನಡೆಸಿದರು.</p>.<p>ಇಲ್ಲಿ ಹಿಂದೂಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇಂತಹ ಘಟನೆಗಳು ಅಶಾಂತಿ ಮೂಡಿಸಲಿವೆ. ಇದನ್ನು ಖಂಡಿಸುತ್ತೇನೆ ಎಂದು ಸಿಂಧ್ ಪ್ರಾಂತ್ಯದ ಸಚಿವ ಗ್ಯಾನ್ಚಂದ್ ಇಸ್ರಾಣಿ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>