<p><strong>ನ್ಯೂಯಾರ್ಕ್</strong>: ಅಮೆರಿಕದ ‘ಟೆಕ್ಸಾಸ್ ಎ ಆ್ಯಂಡ್ ಎಂ ಯೂನಿವರ್ಸಿಟಿ ಕಾರ್ಪಸ್ ಕ್ರಿಸ್ಟಿ’ಯಿಂದ ಇತ್ತೀಚೆಗೆ ಪದವಿ ಪಡೆದು ಉದ್ಯೋಗ ಹುಡುಕುತ್ತಿದ್ದ, ಆಂಧ್ರಪ್ರದೇಶದ ರಾಜ್ಯಲಕ್ಷ್ಮಿ ಯರ್ಲಗಡ್ಡ ಅಲಿಯಾಸ್ ರಾಜಿ (23) ಅವರು ತೀವ್ರ ಕೆಮ್ಮು ಮತ್ತು ಎದೆನೋವಿನಿಂದ ನ.7ರಂದು ಮೃತಪಟ್ಟಿದ್ದಾರೆ.</p>.<p>‘ಆಂಧ್ರಪ್ರದೇಶದ ಬಾಪಟ್ಲಾ ಜಿಲ್ಲೆಯ ಕರ್ಮೆಚೇಡು ಗ್ರಾಮದ ರಾಜ್ಯಲಕ್ಷ್ಮಿ ತಂದೆ ಬಡ ರೈತ. ಆಕೆ ತನ್ನ ಕುಟುಂಬಕ್ಕೆ ಉಜ್ವಲ ಭವಿಷ್ಯ ಕಲ್ಪಿಸುವ ಭರವಸೆಯೊಂದಿಗೆ ಅಮೆರಿಕಕ್ಕೆ ಬಂದಿದ್ದಳು. ವೃತ್ತಿಜೀವನ ಪ್ರಾರಂಭಿಸಲು ಉದ್ಯೋಗ ಹುಡುಕುತ್ತಿದ್ದಳು’ ಎಂದು ಆಕೆಯ ಸೋದರ ಸಂಬಂಧಿ ಚೈತನ್ಯ ವೈವಿಕೆ ತಿಳಿಸಿದ್ದಾರೆ.</p>.<p>ಚೈತನ್ಯ ಅವರು ಟೆಕ್ಸಾಸ್ನ ಡೆಂಟನ್ ನಗರದಲ್ಲಿ ‘ಗೋ ಫಂಡ್ ಮಿ’ ಅಭಿಯಾನ ಆರಂಭಿಸಿದ್ದಾರೆ. ರಾಜ್ಯಲಕ್ಷ್ಮಿ ಅವರ ಅಂತ್ಯಕ್ರಿಯೆ ವೆಚ್ಚ, ಶೈಕ್ಷಣಿಕ ಸಾಲಗಳು ಮತ್ತು ಅವರ ಶವವನ್ನು ಭಾರತಕ್ಕೆ ತರಲು ಮತ್ತು ಅವರ ಕುಟುಂಬಕ್ಕೆ ಆರ್ಥಿಕ ಸಹಾಯಕ್ಕಾಗಿ 1.25 ಲಕ್ಷ ಡಾಲರ್ (₹1.10 ಕೋಟಿ) ಸಂಗ್ರಹಿಸುವುದು ಈ ಅಭಿಯಾನದ ಗುರಿಯಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನ್ಯೂಯಾರ್ಕ್</strong>: ಅಮೆರಿಕದ ‘ಟೆಕ್ಸಾಸ್ ಎ ಆ್ಯಂಡ್ ಎಂ ಯೂನಿವರ್ಸಿಟಿ ಕಾರ್ಪಸ್ ಕ್ರಿಸ್ಟಿ’ಯಿಂದ ಇತ್ತೀಚೆಗೆ ಪದವಿ ಪಡೆದು ಉದ್ಯೋಗ ಹುಡುಕುತ್ತಿದ್ದ, ಆಂಧ್ರಪ್ರದೇಶದ ರಾಜ್ಯಲಕ್ಷ್ಮಿ ಯರ್ಲಗಡ್ಡ ಅಲಿಯಾಸ್ ರಾಜಿ (23) ಅವರು ತೀವ್ರ ಕೆಮ್ಮು ಮತ್ತು ಎದೆನೋವಿನಿಂದ ನ.7ರಂದು ಮೃತಪಟ್ಟಿದ್ದಾರೆ.</p>.<p>‘ಆಂಧ್ರಪ್ರದೇಶದ ಬಾಪಟ್ಲಾ ಜಿಲ್ಲೆಯ ಕರ್ಮೆಚೇಡು ಗ್ರಾಮದ ರಾಜ್ಯಲಕ್ಷ್ಮಿ ತಂದೆ ಬಡ ರೈತ. ಆಕೆ ತನ್ನ ಕುಟುಂಬಕ್ಕೆ ಉಜ್ವಲ ಭವಿಷ್ಯ ಕಲ್ಪಿಸುವ ಭರವಸೆಯೊಂದಿಗೆ ಅಮೆರಿಕಕ್ಕೆ ಬಂದಿದ್ದಳು. ವೃತ್ತಿಜೀವನ ಪ್ರಾರಂಭಿಸಲು ಉದ್ಯೋಗ ಹುಡುಕುತ್ತಿದ್ದಳು’ ಎಂದು ಆಕೆಯ ಸೋದರ ಸಂಬಂಧಿ ಚೈತನ್ಯ ವೈವಿಕೆ ತಿಳಿಸಿದ್ದಾರೆ.</p>.<p>ಚೈತನ್ಯ ಅವರು ಟೆಕ್ಸಾಸ್ನ ಡೆಂಟನ್ ನಗರದಲ್ಲಿ ‘ಗೋ ಫಂಡ್ ಮಿ’ ಅಭಿಯಾನ ಆರಂಭಿಸಿದ್ದಾರೆ. ರಾಜ್ಯಲಕ್ಷ್ಮಿ ಅವರ ಅಂತ್ಯಕ್ರಿಯೆ ವೆಚ್ಚ, ಶೈಕ್ಷಣಿಕ ಸಾಲಗಳು ಮತ್ತು ಅವರ ಶವವನ್ನು ಭಾರತಕ್ಕೆ ತರಲು ಮತ್ತು ಅವರ ಕುಟುಂಬಕ್ಕೆ ಆರ್ಥಿಕ ಸಹಾಯಕ್ಕಾಗಿ 1.25 ಲಕ್ಷ ಡಾಲರ್ (₹1.10 ಕೋಟಿ) ಸಂಗ್ರಹಿಸುವುದು ಈ ಅಭಿಯಾನದ ಗುರಿಯಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>