<p><strong>ಕಠ್ಮಂಡು</strong>: ನೇಪಾಳದಲ್ಲಿ ‘ಜೆನ್-ಝಿ’ ಗುಂಪು ಸಂಘಟಿಸಿದ್ದ ಪ್ರತಿಭಟನೆಯಲ್ಲಿ ಮೃತಪಟ್ಟ ಕೆಲವರ ಅಂತ್ಯಕ್ರಿಯೆಯನ್ನು ಕಠ್ಮಂಡುವಿನ ಪಶುಪತಿ ಆರ್ಯಘಾಟ್ನಲ್ಲಿ ಸರ್ಕಾರಿ ಗೌರವಗಳೊಂದಿಗೆ ಮಂಗಳವಾರ ನೆರವೇರಿಸಲಾಯಿತು.</p>.<p>ಮಹಾರಾಜ್ಗುಂಜ್ನಲ್ಲಿರುವ ತ್ರಿಭುವನ್ ವಿಶ್ವವಿದ್ಯಾಲಯ ಮತ್ತು ಬೋಧನಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ, ನಾಲ್ವರ ಪಾರ್ಥಿವ ಶರೀರಗಳನ್ನು ಮೆರವಣಿಗೆ ಮೂಲಕ ಪಶುಪತಿಗೆ ಕೊಂಡೊಯ್ಯಲಾಯಿತು. ಆರು ಶವಗಳನ್ನು ವಿವಿಧ ಜಿಲ್ಲೆಗಳಿಗೆ ಕೊಂಡೊಯ್ಯಲಾಯಿತು.</p>.<p>ಪಶುಪತಿ ಆರ್ಯಘಾಟ್ನಲ್ಲಿ ನಡೆದ ಮೃತರ ಅಂತಿಮ ವಿಧಿವಿಧಾನಗಳಲ್ಲಿ ಇಂಧನ ಮತ್ತು ಮೂಲಸೌಕರ್ಯ ಸಚಿವ ಕುಲ್ಮನ್ ಘೀಸಿಂಗ್ ಮತ್ತು ಗೃಹ ಸಚಿವ ಓಂ ಪ್ರಕಾಶ್ ಆರ್ಯಲ್ ಭಾಗವಹಿಸಿದ್ದರು. ಹುತಾತ್ಮರಿಗೆ ಸಾವಿರಾರು ಜನರು ಗೌರವ ಸಲ್ಲಿಸಿದರು.</p>.<p>ಸೆಪ್ಟೆಂಬರ್ 8 ಮತ್ತು 9ರಂದು ನಡೆಸಿದ್ದ ಪ್ರತಿಭಟನೆಯಲ್ಲಿ ಮೃತಪಟ್ಟವರನ್ನು ‘ಹುತಾತ್ಮರು’ ಎಂದು ಪ್ರಧಾನಿ ಸುಶೀಲಾ ಕಾರ್ಕಿ ಭಾನುವಾರ ಘೋಷಿಸಿದ್ದರು.</p>.<p>ಸರ್ಕಾರವು ಮೃತರ ಕುಟುಂಬಸ್ಥರಿಗೆ ತಲಾ 15 ಲಕ್ಷ ನೇಪಾಳಿ ರೂಪಾಯಿ (₹9.37 ಲಕ್ಷ) ಪರಿಹಾರ ಘೋಷಿಸಿದೆ. ಮೃತರ ಸಾವಿಗೆ ಶೋಕ ವ್ಯಕ್ತಪಡಿಸಲು ಬುಧವಾರ ಸಾರ್ವಜನಿಕ ರಜೆ ಘೋಷಿಸಿದೆ. ರಾಷ್ಟ್ರಧ್ವಜವನ್ನು ಅರ್ಧಕ್ಕೆ ಇಳಿಸಲು ಸೂಚಿಸಿದೆ.</p>.<p>ಸೆ.8 ಮತ್ತು 9ರಂದು ನಡೆಸಿದ್ದ ಹಿಂಸಾತ್ಮಕ ಪ್ರತಿಭಟನೆಯಲ್ಲಿ ಮೂವರು ಪೊಲೀಸರು ಮತ್ತು 10 ಕೈದಿಗಳು ಸೇರಿದಂತೆ 72 ಮಂದಿ ಮೃತಪಟ್ಟಿದ್ದರು.</p>.<p>ಪ್ರತಿಭಟನೆಯಲ್ಲಿ ಉಂಟಾದ ಹಾನಿ ಪ್ರಮಾಣವನ್ನು ಲೆಕ್ಕ ಹಾಕಲು ವಿವಿಧ ಸಚಿವಾಲಯಗಳು ಮುಂದಾಗಿವೆ ಎಂದು ಮೈ ರಿಪಬ್ಲಿಕಾ ಸುದ್ದಿ ಪೋರ್ಟಲ್ ಮಂಗಳವಾರ ವರದಿ ಮಾಡಿದೆ.</p>.<p>ಅಂತ್ಯಕ್ರಿಯೆಯಲ್ಲಿ ಕುಲ್ಮನ್ ಘೀಸಿಂಗ್, ಓಂ ಪ್ರಕಾಶ್ ಆರ್ಯಲ್ ಭಾಗಿ ಮೃತರ ಕುಟುಂಬಸ್ಥರಿಗೆ ತಲಾ 15 ಲಕ್ಷ ನೇಪಾಳಿ ರೂಪಾಯಿ ಪರಿಹಾರ ಬುಧವಾರ ಸಾರ್ವಜನಿಕ ರಜೆ ಘೋಷಣೆ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಠ್ಮಂಡು</strong>: ನೇಪಾಳದಲ್ಲಿ ‘ಜೆನ್-ಝಿ’ ಗುಂಪು ಸಂಘಟಿಸಿದ್ದ ಪ್ರತಿಭಟನೆಯಲ್ಲಿ ಮೃತಪಟ್ಟ ಕೆಲವರ ಅಂತ್ಯಕ್ರಿಯೆಯನ್ನು ಕಠ್ಮಂಡುವಿನ ಪಶುಪತಿ ಆರ್ಯಘಾಟ್ನಲ್ಲಿ ಸರ್ಕಾರಿ ಗೌರವಗಳೊಂದಿಗೆ ಮಂಗಳವಾರ ನೆರವೇರಿಸಲಾಯಿತು.</p>.<p>ಮಹಾರಾಜ್ಗುಂಜ್ನಲ್ಲಿರುವ ತ್ರಿಭುವನ್ ವಿಶ್ವವಿದ್ಯಾಲಯ ಮತ್ತು ಬೋಧನಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ, ನಾಲ್ವರ ಪಾರ್ಥಿವ ಶರೀರಗಳನ್ನು ಮೆರವಣಿಗೆ ಮೂಲಕ ಪಶುಪತಿಗೆ ಕೊಂಡೊಯ್ಯಲಾಯಿತು. ಆರು ಶವಗಳನ್ನು ವಿವಿಧ ಜಿಲ್ಲೆಗಳಿಗೆ ಕೊಂಡೊಯ್ಯಲಾಯಿತು.</p>.<p>ಪಶುಪತಿ ಆರ್ಯಘಾಟ್ನಲ್ಲಿ ನಡೆದ ಮೃತರ ಅಂತಿಮ ವಿಧಿವಿಧಾನಗಳಲ್ಲಿ ಇಂಧನ ಮತ್ತು ಮೂಲಸೌಕರ್ಯ ಸಚಿವ ಕುಲ್ಮನ್ ಘೀಸಿಂಗ್ ಮತ್ತು ಗೃಹ ಸಚಿವ ಓಂ ಪ್ರಕಾಶ್ ಆರ್ಯಲ್ ಭಾಗವಹಿಸಿದ್ದರು. ಹುತಾತ್ಮರಿಗೆ ಸಾವಿರಾರು ಜನರು ಗೌರವ ಸಲ್ಲಿಸಿದರು.</p>.<p>ಸೆಪ್ಟೆಂಬರ್ 8 ಮತ್ತು 9ರಂದು ನಡೆಸಿದ್ದ ಪ್ರತಿಭಟನೆಯಲ್ಲಿ ಮೃತಪಟ್ಟವರನ್ನು ‘ಹುತಾತ್ಮರು’ ಎಂದು ಪ್ರಧಾನಿ ಸುಶೀಲಾ ಕಾರ್ಕಿ ಭಾನುವಾರ ಘೋಷಿಸಿದ್ದರು.</p>.<p>ಸರ್ಕಾರವು ಮೃತರ ಕುಟುಂಬಸ್ಥರಿಗೆ ತಲಾ 15 ಲಕ್ಷ ನೇಪಾಳಿ ರೂಪಾಯಿ (₹9.37 ಲಕ್ಷ) ಪರಿಹಾರ ಘೋಷಿಸಿದೆ. ಮೃತರ ಸಾವಿಗೆ ಶೋಕ ವ್ಯಕ್ತಪಡಿಸಲು ಬುಧವಾರ ಸಾರ್ವಜನಿಕ ರಜೆ ಘೋಷಿಸಿದೆ. ರಾಷ್ಟ್ರಧ್ವಜವನ್ನು ಅರ್ಧಕ್ಕೆ ಇಳಿಸಲು ಸೂಚಿಸಿದೆ.</p>.<p>ಸೆ.8 ಮತ್ತು 9ರಂದು ನಡೆಸಿದ್ದ ಹಿಂಸಾತ್ಮಕ ಪ್ರತಿಭಟನೆಯಲ್ಲಿ ಮೂವರು ಪೊಲೀಸರು ಮತ್ತು 10 ಕೈದಿಗಳು ಸೇರಿದಂತೆ 72 ಮಂದಿ ಮೃತಪಟ್ಟಿದ್ದರು.</p>.<p>ಪ್ರತಿಭಟನೆಯಲ್ಲಿ ಉಂಟಾದ ಹಾನಿ ಪ್ರಮಾಣವನ್ನು ಲೆಕ್ಕ ಹಾಕಲು ವಿವಿಧ ಸಚಿವಾಲಯಗಳು ಮುಂದಾಗಿವೆ ಎಂದು ಮೈ ರಿಪಬ್ಲಿಕಾ ಸುದ್ದಿ ಪೋರ್ಟಲ್ ಮಂಗಳವಾರ ವರದಿ ಮಾಡಿದೆ.</p>.<p>ಅಂತ್ಯಕ್ರಿಯೆಯಲ್ಲಿ ಕುಲ್ಮನ್ ಘೀಸಿಂಗ್, ಓಂ ಪ್ರಕಾಶ್ ಆರ್ಯಲ್ ಭಾಗಿ ಮೃತರ ಕುಟುಂಬಸ್ಥರಿಗೆ ತಲಾ 15 ಲಕ್ಷ ನೇಪಾಳಿ ರೂಪಾಯಿ ಪರಿಹಾರ ಬುಧವಾರ ಸಾರ್ವಜನಿಕ ರಜೆ ಘೋಷಣೆ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>