<p><strong>ಇಸ್ಲಾಮಾಬಾದ್:</strong> ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಇಸ್ಲಾಮಾಬಾದ್ ಭಾಗಿಯಾಗಿದೆ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಯಿಂದ ಹತಾಶಗೊಂಡಿರುವುದಾಗಿ ಪಾಕಿಸ್ತಾನ ಶುಕ್ರವಾರ ಹೇಳಿದೆ.</p><p>ಏಪ್ರಿಲ್ 22ರಂದು ನಡೆದ ಗುಂಡಿನ ದಾಳಿಯಲ್ಲಿ 26 ಪ್ರವಾಸಿಗರು ಮೃತಪಟ್ಟಿದ್ದರು.</p><p>ಪಾಕಿಸ್ತಾನವು ಪಹಲ್ಗಾಮ್ ದಾಳಿಯು ಮೂಲಕ ಕಾಶ್ಮೀರ ಮತ್ತು ಮಾನವೀಯತೆ ಮೇಲೆ ದಾಳಿ ಮಾಡಿದೆ ಎಂದು ಮೋದಿ ಶುಕ್ರವಾರ ಆರೋಪಿಸಿದ್ದರು.</p><p>ಕಾಶ್ಮೀರ ಕಣಿವೆಯಲ್ಲಿ ಮೊದಲ ರೈಲು ಸೇವೆಗೆ ಶುಕ್ರವಾರ ಚಾಲನೆ ನೀಡಿದ್ದ ಪ್ರಧಾನಿ, ರಿಯಾಸಿ ಜಿಲ್ಲೆಯ ಕಟ್ರಾದಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿದ್ದರು. 'ನಮ್ಮ ನೆರೆಯ ರಾಷ್ಟ್ರವು ಮಾನವೀಯತೆ, ಸಾಮಾಜಿಕ ಸೌಹಾರ್ದತೆ ಮತ್ತು ಆರ್ಥಿಕ ಪ್ರಗತಿಯ ವಿರುದ್ಧ ನಿಂತಿದೆ' ಎಂದು ದೂರಿದ್ದರು.</p><p>'ಅದಷ್ಟೇ ಅಲ್ಲ. (ಪಾಕಿಸ್ತಾನ) ಬಡವರ ಅನ್ನದ ಶತ್ರುವೂ ಹೌದು' ಎಂದು ಕಿಡಿಕಾರಿದ್ದ ಮೋದಿ, 'ಭಾರತದಲ್ಲಿ ಕೋಮು ಸಂಘರ್ಷವನ್ನು ಪ್ರಚೋದಿಸಲು ಹಾಗೂ ಶ್ರಮಶೀಲ ಕಾಶ್ಮೀರಿಗಳ ಗಳಿಕೆಯನ್ನು ಕುಗ್ಗಿಸಲು ಪಾಕಿಸ್ತಾನ ಉದ್ದೇಶಿಸಿದೆ ಎಂಬುದಕ್ಕೆ ಪಹಲ್ಗಾಮ್ ದಾಳಿ ಸ್ಪಷ್ಟ ಉದಾಹರಣೆಯಾಗಿದೆ' ಎಂದು ಪುನರುಚ್ಚರಿಸಿದ್ದರು.</p><p>ಇದಕ್ಕೆ ಪ್ರತಿಕ್ರಿಯಿಸಿರುವ ಪಾಕಿಸ್ತಾನ ವಿದೇಶಾಂಗ ಸಚಿವಾಲಯ, ಆಧಾರರಹಿತ ಹಾಗೂ ದಿಕ್ಕು ತಪ್ಪಿಸುವಂತಹ ಆರೋಪಗಳನ್ನು ಸ್ಪಷ್ಟವಾಗಿ ಅಲ್ಲಗಳೆಯುವುದಾಗಿ ಹೇಳಿದೆ.</p><p>'ಒಂದೇ ಒಂದು ವಿಶ್ವಾಸಾರ್ಹ ಪುರಾವೆಯನ್ನೂ ನೀಡದೆ, ಪಹಲ್ಗಾಮ್ ದಾಳಿಯಲ್ಲಿ ಪಾಕಿಸ್ತಾನದ ಕೈವಾಡವಿದೆ ಎಂಬುದಾಗಿ ಭಾರತದ ಪ್ರಧಾನಿ ಮತ್ತೊಮ್ಮೆ ಆರೋಪಿಸಿರುವುದು ಹತಾಶೆ ಮೂಡಿಸಿದೆ' ಎಂದು ಹೇಳಿಕೆ ಬಿಡುಗಡೆ ಮಾಡಿದೆ.</p><p>ಪಹಲ್ಗಾಮ್ ದಾಳಿ ನಡೆದ ಎರಡು ವಾರಗಳ ಬಳಿಕ, ಭಾರತೀಯ ಸೇನಾ ಪಡೆಗಳು ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದನಾ ನೆಲೆಗಳನ್ನು ಗುರಿಯಾಗಿಸಿ ಮೇ 7ರಂದು ದಾಳಿ ನಡೆಸಿದ್ದವು. ಇದರ ಬೆನ್ನಲ್ಲೇ, ಪಾಕ್ ಪಡೆಗಳು ಗಡಿಯುದ್ದಕ್ಕೂ ಭಾರತದ ವಿರುದ್ಧ ದಾಳಿ ಮಾಡಿದ್ದವು.</p><p>ಈ ವೇಳೆ ಉಭಯ ರಾಷ್ಟ್ರಗಳ ನಡುವೆ ಸಂಘರ್ಷ ಸ್ಥಿತಿ ನಿರ್ಮಾನವಾಗಿತ್ತು. ಮೇ 10ರಂದು ಕದನ ವಿರಾಮ ಒಪ್ಪಂದಕ್ಕೆ ಬರಲಾಯಿತು.</p>.ವಿಶ್ವ ಅತಿ ಎತ್ತರದ ರೈಲ್ವೆ ಸೇತುವೆ ಉದ್ಗಾಟನೆ: ರೈಲು ಸಂಪರ್ಕದಲ್ಲಿ ಮೈಲಿಗಲ್ಲು.Operation Sindoor | ಪಾಕ್ ಮಂಡಿಯೂರಿಸಿದ ಸೇನೆ ದಾಳಿ: ರಾಜನಾಥ ಸಿಂಗ್ .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಇಸ್ಲಾಮಾಬಾದ್:</strong> ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಇಸ್ಲಾಮಾಬಾದ್ ಭಾಗಿಯಾಗಿದೆ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಯಿಂದ ಹತಾಶಗೊಂಡಿರುವುದಾಗಿ ಪಾಕಿಸ್ತಾನ ಶುಕ್ರವಾರ ಹೇಳಿದೆ.</p><p>ಏಪ್ರಿಲ್ 22ರಂದು ನಡೆದ ಗುಂಡಿನ ದಾಳಿಯಲ್ಲಿ 26 ಪ್ರವಾಸಿಗರು ಮೃತಪಟ್ಟಿದ್ದರು.</p><p>ಪಾಕಿಸ್ತಾನವು ಪಹಲ್ಗಾಮ್ ದಾಳಿಯು ಮೂಲಕ ಕಾಶ್ಮೀರ ಮತ್ತು ಮಾನವೀಯತೆ ಮೇಲೆ ದಾಳಿ ಮಾಡಿದೆ ಎಂದು ಮೋದಿ ಶುಕ್ರವಾರ ಆರೋಪಿಸಿದ್ದರು.</p><p>ಕಾಶ್ಮೀರ ಕಣಿವೆಯಲ್ಲಿ ಮೊದಲ ರೈಲು ಸೇವೆಗೆ ಶುಕ್ರವಾರ ಚಾಲನೆ ನೀಡಿದ್ದ ಪ್ರಧಾನಿ, ರಿಯಾಸಿ ಜಿಲ್ಲೆಯ ಕಟ್ರಾದಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿದ್ದರು. 'ನಮ್ಮ ನೆರೆಯ ರಾಷ್ಟ್ರವು ಮಾನವೀಯತೆ, ಸಾಮಾಜಿಕ ಸೌಹಾರ್ದತೆ ಮತ್ತು ಆರ್ಥಿಕ ಪ್ರಗತಿಯ ವಿರುದ್ಧ ನಿಂತಿದೆ' ಎಂದು ದೂರಿದ್ದರು.</p><p>'ಅದಷ್ಟೇ ಅಲ್ಲ. (ಪಾಕಿಸ್ತಾನ) ಬಡವರ ಅನ್ನದ ಶತ್ರುವೂ ಹೌದು' ಎಂದು ಕಿಡಿಕಾರಿದ್ದ ಮೋದಿ, 'ಭಾರತದಲ್ಲಿ ಕೋಮು ಸಂಘರ್ಷವನ್ನು ಪ್ರಚೋದಿಸಲು ಹಾಗೂ ಶ್ರಮಶೀಲ ಕಾಶ್ಮೀರಿಗಳ ಗಳಿಕೆಯನ್ನು ಕುಗ್ಗಿಸಲು ಪಾಕಿಸ್ತಾನ ಉದ್ದೇಶಿಸಿದೆ ಎಂಬುದಕ್ಕೆ ಪಹಲ್ಗಾಮ್ ದಾಳಿ ಸ್ಪಷ್ಟ ಉದಾಹರಣೆಯಾಗಿದೆ' ಎಂದು ಪುನರುಚ್ಚರಿಸಿದ್ದರು.</p><p>ಇದಕ್ಕೆ ಪ್ರತಿಕ್ರಿಯಿಸಿರುವ ಪಾಕಿಸ್ತಾನ ವಿದೇಶಾಂಗ ಸಚಿವಾಲಯ, ಆಧಾರರಹಿತ ಹಾಗೂ ದಿಕ್ಕು ತಪ್ಪಿಸುವಂತಹ ಆರೋಪಗಳನ್ನು ಸ್ಪಷ್ಟವಾಗಿ ಅಲ್ಲಗಳೆಯುವುದಾಗಿ ಹೇಳಿದೆ.</p><p>'ಒಂದೇ ಒಂದು ವಿಶ್ವಾಸಾರ್ಹ ಪುರಾವೆಯನ್ನೂ ನೀಡದೆ, ಪಹಲ್ಗಾಮ್ ದಾಳಿಯಲ್ಲಿ ಪಾಕಿಸ್ತಾನದ ಕೈವಾಡವಿದೆ ಎಂಬುದಾಗಿ ಭಾರತದ ಪ್ರಧಾನಿ ಮತ್ತೊಮ್ಮೆ ಆರೋಪಿಸಿರುವುದು ಹತಾಶೆ ಮೂಡಿಸಿದೆ' ಎಂದು ಹೇಳಿಕೆ ಬಿಡುಗಡೆ ಮಾಡಿದೆ.</p><p>ಪಹಲ್ಗಾಮ್ ದಾಳಿ ನಡೆದ ಎರಡು ವಾರಗಳ ಬಳಿಕ, ಭಾರತೀಯ ಸೇನಾ ಪಡೆಗಳು ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದನಾ ನೆಲೆಗಳನ್ನು ಗುರಿಯಾಗಿಸಿ ಮೇ 7ರಂದು ದಾಳಿ ನಡೆಸಿದ್ದವು. ಇದರ ಬೆನ್ನಲ್ಲೇ, ಪಾಕ್ ಪಡೆಗಳು ಗಡಿಯುದ್ದಕ್ಕೂ ಭಾರತದ ವಿರುದ್ಧ ದಾಳಿ ಮಾಡಿದ್ದವು.</p><p>ಈ ವೇಳೆ ಉಭಯ ರಾಷ್ಟ್ರಗಳ ನಡುವೆ ಸಂಘರ್ಷ ಸ್ಥಿತಿ ನಿರ್ಮಾನವಾಗಿತ್ತು. ಮೇ 10ರಂದು ಕದನ ವಿರಾಮ ಒಪ್ಪಂದಕ್ಕೆ ಬರಲಾಯಿತು.</p>.ವಿಶ್ವ ಅತಿ ಎತ್ತರದ ರೈಲ್ವೆ ಸೇತುವೆ ಉದ್ಗಾಟನೆ: ರೈಲು ಸಂಪರ್ಕದಲ್ಲಿ ಮೈಲಿಗಲ್ಲು.Operation Sindoor | ಪಾಕ್ ಮಂಡಿಯೂರಿಸಿದ ಸೇನೆ ದಾಳಿ: ರಾಜನಾಥ ಸಿಂಗ್ .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>