<p><strong>ಪೆಶಾವರ</strong>: ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಹರಿಯುವ ಸ್ವಾಟ್ ನದಿಯಲ್ಲಿ ಏಕಾಏಕಿ ಉಂಟಾದ ಪ್ರವಾಹದಿಂದಾಗಿ ಒಂದೇ ಕುಟುಂಬದ ಕನಿಷ್ಠ 18 ಮಂದಿ ಕೊಚ್ಚಿಹೋಗಿರುವ ದುರಂತ ಶುಕ್ರವಾರ ಸಂಭವಿಸಿದೆ.</p><p>ನಾಲ್ಕು ಮಂದಿಯ ಶವಗಳು ಪತ್ತೆಯಾಗಿವೆ. ನಾಪತ್ತೆಯಾಗಿರುವ ಉಳಿದವರಿಗಾಗಿ ಶೋಧ ಮುಂದುವರಿದಿದೆ ಎಂದು ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿರುವ ಅಧಿಕಾರಿಗಳು ತಿಳಿಸಿದ್ದಾರೆ.</p><p>'ಐದು ವಿಭಿನ್ನ ಸ್ಥಳಗಳಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದೇವೆ. ತುರ್ತು ರಕ್ಷಣಾ ಸೇವೆಗಳ 80 ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ' ಎಂದು ತುರ್ತು ರಕ್ಷಣಾ ಇಲಾಖೆಯ ಮಹಾನಿರ್ದೇಶಕ ಶಾ ಫಹಾದ್ ತಿಳಿಸಿರುವುದಾಗಿ ಹೇಳಿಕೆ ಬಿಡುಗಡೆಯಾಗಿದೆ.</p><p>ಪ್ರಾಥಮಿಕ ಮಾಹಿತಿ ಪ್ರಕಾರ, ಸಂತ್ರಸ್ತ ಕುಟಂಬವು ಈ ಪ್ರದೇಶಕ್ಕೆ ಪ್ರವಾಸಕ್ಕೆ ಬಂದಿತ್ತು. ಮಳೆಯಿಂದಾಗಿ ನದಿಯಲ್ಲಿ ಏಕಾಏಕಿ ಪ್ರವಾಹ ಉಂಟಾಗಿದ್ದರಿಂದ ಅಪಾಯಕ್ಕೆ ಸಿಲುಕಿತ್ತು ಎನ್ನಲಾಗಿದೆ.</p>.ಇರಾನ್ ನಾಯಕ ಖಮೇನಿ ಭೂಗತವಾಗದೇ ಇದ್ದಿದ್ದರೆ ಹತ್ಯೆ ಮಾಡುತ್ತಿದ್ದೆವು: ಇಸ್ರೇಲ್.ಭಾರತದೊಂದಿಗೆ 'ಅತಿ ದೊಡ್ಡ' ವ್ಯಾಪಾರ ಒಪ್ಪಂದ: ಟ್ರಂಪ್ ಸೂಚನೆ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪೆಶಾವರ</strong>: ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಹರಿಯುವ ಸ್ವಾಟ್ ನದಿಯಲ್ಲಿ ಏಕಾಏಕಿ ಉಂಟಾದ ಪ್ರವಾಹದಿಂದಾಗಿ ಒಂದೇ ಕುಟುಂಬದ ಕನಿಷ್ಠ 18 ಮಂದಿ ಕೊಚ್ಚಿಹೋಗಿರುವ ದುರಂತ ಶುಕ್ರವಾರ ಸಂಭವಿಸಿದೆ.</p><p>ನಾಲ್ಕು ಮಂದಿಯ ಶವಗಳು ಪತ್ತೆಯಾಗಿವೆ. ನಾಪತ್ತೆಯಾಗಿರುವ ಉಳಿದವರಿಗಾಗಿ ಶೋಧ ಮುಂದುವರಿದಿದೆ ಎಂದು ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿರುವ ಅಧಿಕಾರಿಗಳು ತಿಳಿಸಿದ್ದಾರೆ.</p><p>'ಐದು ವಿಭಿನ್ನ ಸ್ಥಳಗಳಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದೇವೆ. ತುರ್ತು ರಕ್ಷಣಾ ಸೇವೆಗಳ 80 ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ' ಎಂದು ತುರ್ತು ರಕ್ಷಣಾ ಇಲಾಖೆಯ ಮಹಾನಿರ್ದೇಶಕ ಶಾ ಫಹಾದ್ ತಿಳಿಸಿರುವುದಾಗಿ ಹೇಳಿಕೆ ಬಿಡುಗಡೆಯಾಗಿದೆ.</p><p>ಪ್ರಾಥಮಿಕ ಮಾಹಿತಿ ಪ್ರಕಾರ, ಸಂತ್ರಸ್ತ ಕುಟಂಬವು ಈ ಪ್ರದೇಶಕ್ಕೆ ಪ್ರವಾಸಕ್ಕೆ ಬಂದಿತ್ತು. ಮಳೆಯಿಂದಾಗಿ ನದಿಯಲ್ಲಿ ಏಕಾಏಕಿ ಪ್ರವಾಹ ಉಂಟಾಗಿದ್ದರಿಂದ ಅಪಾಯಕ್ಕೆ ಸಿಲುಕಿತ್ತು ಎನ್ನಲಾಗಿದೆ.</p>.ಇರಾನ್ ನಾಯಕ ಖಮೇನಿ ಭೂಗತವಾಗದೇ ಇದ್ದಿದ್ದರೆ ಹತ್ಯೆ ಮಾಡುತ್ತಿದ್ದೆವು: ಇಸ್ರೇಲ್.ಭಾರತದೊಂದಿಗೆ 'ಅತಿ ದೊಡ್ಡ' ವ್ಯಾಪಾರ ಒಪ್ಪಂದ: ಟ್ರಂಪ್ ಸೂಚನೆ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>