<p><strong>ಢಾಕಾ:</strong> ಮಾಜಿ ಪ್ರಧಾನಿ ಶೇಖ್ ಹಸೀನಾ ಎಲ್ಲವನ್ನೂ ಸರ್ವನಾಶ ಮಾಡಿದ್ದಾರೆ ಎಂದು ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಸಲಹೆಗಾರರಾಗಿರುವ ಮೊಹಮ್ಮದ್ ಯೂನುಸ್ ಹೇಳಿದ್ದಾರೆ.</p><p>‘ಸಾಂವಿಧಾನಿಕ ಹಾಗೂ ನ್ಯಾಯಾಂಗ ಸುಧಾರಣೆ ಆದ ಬಳಿಕವಷ್ಟೇ ದೇಶದಲ್ಲಿ ಚುನಾವಣೆ ನಡೆಸಲಾಗುವುದು’ ಎಂದು ಯೂನುಸ್ ಅವರು ಜಪಾನ್ನ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನವನ್ನು ಉಲ್ಲೇಖಿಸಿ ‘ಬಾಂಗ್ಲಾದೇಶ್ ಸಂಗ್ಬದ್ ಸಂಗ್ಸ್ಥಾ’ ವರದಿ ಮಾಡಿದೆ.</p>.ಬಾಂಗ್ಲಾದೇಶ: ಭಾರತದ ಹೈಕಮಿಷನರ್ ಪ್ರಣಯ್ ವರ್ಮಾಗೆ ಸಮನ್ಸ್.<p>‘ಚುನಾವಣೆಗೂ ಮುನ್ನ ಆರ್ಥಿಕತೆ, ಆಡಳಿತ, ಆಧಿಕಾರಿ ವರ್ಗ ಹಾಗೂ ನ್ಯಾಯಾಂಗದಲ್ಲಿ ಅಮೂಲಾಗ್ರ ಬದಲಾವಣೆ ಬೇಕಿದೆ’ ಎಂದು ಅವರು ಹೇಳಿದ್ದಾರೆ.</p><p>ಬಾಂಗ್ಲಾದೇಶದ ಅಂತರಾಷ್ಟ್ರೀಯ ಅಪರಾಧಗಳ ನ್ಯಾಯಮಂಡಳಿಯಲ್ಲಿ ಹಸೀನಾ ಅವರ ವಿಚಾರಣೆ ಮುಗಿದ ನಂತರ, ಅವರನ್ನು ಭಾರತ ಹಸ್ತಾಂತರಿಸಬೇಕು ಎಂದು ಯೂನುಸ್ ಪುನರುಚ್ಚರಿಸಿದ್ದಾರೆ.</p>.ಹಿಂದೂಗಳ ರಕ್ಷಣೆಯ ಹೊಣೆ ಬಾಂಗ್ಲಾ ಸರ್ಕಾರದ ಮೇಲಿದೆ: ಅಮೆರಿಕ ಕಾಂಗ್ರೆಸ್ ಸದಸ್ಯ.<p>‘ವಿಚಾರಣೆ ಮುಕ್ತಾಯಗೊಂಡು, ತೀರ್ಪು ಪ್ರಕಟವಾದರೆ ಭಾರತದೊಂದಿಗೆ ನಾವು ಮತ್ತೆ ಮನವಿ ಮಾಡುತ್ತೇವೆ. ಉಭಯ ರಾಷ್ಟ್ರಗಳು ಅಂತರರಾಷ್ಟ್ರೀಯ ಕಾನೂನಿಗೆ ಸಹಿ ಹಾಕಿವೆ’ ಎಂದು ಹೇಳಿದ್ದಾರೆ.</p><p>‘ಇಲ್ಲಿನ ಹಿಂದೂಗಳ ಬಗ್ಗೆ ಭಾರತದ ಕಾಳಜಿಯು ವಾಸ್ತವಾಧಾರಿತವಾಗಿಲ್ಲ. ಸುಳ್ಳು ಪ್ರಚಾರ ಆಧಾರಿತವಾಗಿದೆ’ ಎಂದಿದ್ದಾರೆ.</p>.ಬಾಂಗ್ಲಾ ಅಸಿಸ್ಟೆಂಟ್ ಹೈಕಮಿಷನ್ ಕಚೇರಿ ಮೇಲಿನ ದಾಳಿ ಪ್ರಕರಣ: ಏಳು ಮಂದಿ ಬಂಧನ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಢಾಕಾ:</strong> ಮಾಜಿ ಪ್ರಧಾನಿ ಶೇಖ್ ಹಸೀನಾ ಎಲ್ಲವನ್ನೂ ಸರ್ವನಾಶ ಮಾಡಿದ್ದಾರೆ ಎಂದು ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಸಲಹೆಗಾರರಾಗಿರುವ ಮೊಹಮ್ಮದ್ ಯೂನುಸ್ ಹೇಳಿದ್ದಾರೆ.</p><p>‘ಸಾಂವಿಧಾನಿಕ ಹಾಗೂ ನ್ಯಾಯಾಂಗ ಸುಧಾರಣೆ ಆದ ಬಳಿಕವಷ್ಟೇ ದೇಶದಲ್ಲಿ ಚುನಾವಣೆ ನಡೆಸಲಾಗುವುದು’ ಎಂದು ಯೂನುಸ್ ಅವರು ಜಪಾನ್ನ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನವನ್ನು ಉಲ್ಲೇಖಿಸಿ ‘ಬಾಂಗ್ಲಾದೇಶ್ ಸಂಗ್ಬದ್ ಸಂಗ್ಸ್ಥಾ’ ವರದಿ ಮಾಡಿದೆ.</p>.ಬಾಂಗ್ಲಾದೇಶ: ಭಾರತದ ಹೈಕಮಿಷನರ್ ಪ್ರಣಯ್ ವರ್ಮಾಗೆ ಸಮನ್ಸ್.<p>‘ಚುನಾವಣೆಗೂ ಮುನ್ನ ಆರ್ಥಿಕತೆ, ಆಡಳಿತ, ಆಧಿಕಾರಿ ವರ್ಗ ಹಾಗೂ ನ್ಯಾಯಾಂಗದಲ್ಲಿ ಅಮೂಲಾಗ್ರ ಬದಲಾವಣೆ ಬೇಕಿದೆ’ ಎಂದು ಅವರು ಹೇಳಿದ್ದಾರೆ.</p><p>ಬಾಂಗ್ಲಾದೇಶದ ಅಂತರಾಷ್ಟ್ರೀಯ ಅಪರಾಧಗಳ ನ್ಯಾಯಮಂಡಳಿಯಲ್ಲಿ ಹಸೀನಾ ಅವರ ವಿಚಾರಣೆ ಮುಗಿದ ನಂತರ, ಅವರನ್ನು ಭಾರತ ಹಸ್ತಾಂತರಿಸಬೇಕು ಎಂದು ಯೂನುಸ್ ಪುನರುಚ್ಚರಿಸಿದ್ದಾರೆ.</p>.ಹಿಂದೂಗಳ ರಕ್ಷಣೆಯ ಹೊಣೆ ಬಾಂಗ್ಲಾ ಸರ್ಕಾರದ ಮೇಲಿದೆ: ಅಮೆರಿಕ ಕಾಂಗ್ರೆಸ್ ಸದಸ್ಯ.<p>‘ವಿಚಾರಣೆ ಮುಕ್ತಾಯಗೊಂಡು, ತೀರ್ಪು ಪ್ರಕಟವಾದರೆ ಭಾರತದೊಂದಿಗೆ ನಾವು ಮತ್ತೆ ಮನವಿ ಮಾಡುತ್ತೇವೆ. ಉಭಯ ರಾಷ್ಟ್ರಗಳು ಅಂತರರಾಷ್ಟ್ರೀಯ ಕಾನೂನಿಗೆ ಸಹಿ ಹಾಕಿವೆ’ ಎಂದು ಹೇಳಿದ್ದಾರೆ.</p><p>‘ಇಲ್ಲಿನ ಹಿಂದೂಗಳ ಬಗ್ಗೆ ಭಾರತದ ಕಾಳಜಿಯು ವಾಸ್ತವಾಧಾರಿತವಾಗಿಲ್ಲ. ಸುಳ್ಳು ಪ್ರಚಾರ ಆಧಾರಿತವಾಗಿದೆ’ ಎಂದಿದ್ದಾರೆ.</p>.ಬಾಂಗ್ಲಾ ಅಸಿಸ್ಟೆಂಟ್ ಹೈಕಮಿಷನ್ ಕಚೇರಿ ಮೇಲಿನ ದಾಳಿ ಪ್ರಕರಣ: ಏಳು ಮಂದಿ ಬಂಧನ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>