<p><strong>ಕೊಲಂಬೊ/ವಾಷಿಂಗ್ಟನ್:</strong> ಶ್ರೀಲಂಕಾದಲ್ಲಿ ಉಂಟಾಗಿರುವ ಸಾಂವಿಧಾನಿಕ ಬಿಕ್ಕಟ್ಟು ‘ರಕ್ತಪಾತ’ಕ್ಕೆ ತಿರುಗಬಹುದು ಎಂದು ಸೋಮವಾರ ಎಚ್ಚರಿಕೆ ನೀಡಿರುವ ಉಚ್ಚಾಟಿತ ಪ್ರಧಾನಿ ರನಿಲ್ ವಿಕ್ರಮ್ಸಿಂಘೆ, ಆಡಳಿತ ನಡೆಸಲು ಒಬ್ಬರು ನಾಯಕರನ್ನು ಆಯ್ಕೆ ಮಾಡಲು ಸಂಸತ್ತಿಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿದ್ದಾರೆ.</p>.<p>ಬಿಕ್ಕಟ್ಟು ಬಗೆಹರಿಸಲು ಸಂಸತ್ತಿಗೆ ಸಾಂವಿಧಾನಿಕ ಅಧಿಕಾರ ಇದೆ ಎಂದಿರುವ ವಿಕ್ರಮಸಿಂಘೆ, ತಮ್ಮನ್ನು ಉಚ್ಚಾಟನೆಗೊಳಿಸಿದ್ದು ಅಕ್ರಮ ಎಂದಿದ್ದಾರೆ.</p>.<p>‘ಆದ್ದರಿಂದ ತಕ್ಷಣವೇ ಯಾರಿಗೆಬಹುಮತ ಇದೆ ಎಂದು ಸಾಬೀತುಪಡಿಸಲು ಸಂಸತ್ ಅಧಿವೇಶನ ನಡೆಸಬೇಕು ಎಂದು ನಾವು ಹೇಳುತ್ತಿರುವುದು. ಈಗಲೂ ಬಹುಮತ ಇರುವ ಪ್ರಧಾನಿ ನಾನೇ’ ಎಂದು ಅವರು ತಿಳಿಸಿದ್ದಾರೆ.</p>.<p>‘ಈ ಸಂದರ್ಭ ಎಲ್ಲವೂ ಖಾಲಿ ಎನಿಸುತ್ತಿದೆ. ಯಾರೂ ದೇಶದ ಸಂಪೂರ್ಣ ಹೊಣೆ ಹೊತ್ತುಕೊಂಡಿಲ್ಲ’ ಎಂದು ವಿಕ್ರಮಸಿಂಘೆ ಹೇಳಿದ್ದಾರೆ.</p>.<p>ಶುಕ್ರವಾರ ಪ್ರಧಾನಿ ಸ್ಥಾನದಿಂದ ಉಚ್ಛಾಟನೆಗೊಂಡ ನಂತರವೂ ಅವರು ಅಧಿಕೃತ ನಿವಾಸದಲ್ಲಿಯೇ ವಾಸ್ತವ್ಯ ಮುಂದುವರಿಸಿದ್ದಾರೆ.</p>.<p><strong>ಅಂತರರಾಷ್ಟ್ರೀಯ ಮಟ್ಟದಲ್ಲಿ ಆಗ್ರಹ:</strong> ಅಧಿಕಾರದ ಬಿಕ್ಕಟ್ಟು ಕೊನೆಗಾಣಿಸುವ ಸಲುವಾಗಿ,ಮೈತ್ರಿಪಾಲ ಸಿರಿಸೇನ ಅವರು ಸಂಸತ್ತನ್ನು ಅಮಾನತುಗೊಳಿಸಿರುವ ತಮ್ಮ ಕ್ರಮವನ್ನು ಅಮಾನ್ಯವೆಂದು ಘೋಷಿಸಬೇಕೆಂಬ ಆಗ್ರಹ ಅಂತರರಾಷ್ಟ್ರೀಯ ಮಟ್ಟದಲ್ಲಿ ಕೇಳಿಬರುತ್ತಿದ್ದು, ಅಮೆರಿಕ ಸಹ ಇದಕ್ಕೆ ದನಿಗೂಡಿಸಿದೆ.</p>.<p>ತಕ್ಷಣವೇ ಸಂಸತ್ ಅಧಿವೇಶನ ನಡೆಸಬೇಕು ಎಂದು ವಿದೇಶಾಂಗ ಇಲಾಖೆ ವಕ್ತಾರೆ ಹೆದರ್ ನೊವರ್ಟ್ ಆಗ್ರಹಿಸಿದ್ದಾರೆ.‘ಈ ಸಂಬಂಧ ಅಧ್ಯಕ್ಷರು ಹಾಗೂ ಸ್ಪೀಕರ್ ಕ್ರಮ ಕೈಗೊಳ್ಳಬೇಕು.ಜನಪ್ರತಿನಿಧಿಗಳು ತಮ್ಮ ಸರ್ಕಾರ ಮುನ್ನಡೆಸುವನಾಯಕನನ್ನು ಆಯ್ಕೆ ಮಾಡುವ ಹೊಣೆಗಾರಿಕೆ ನಿರ್ವಹಿಸಲು ಅವಕಾಶ ನೀಡಬೇಕು’ ಎಂದು ಹೇಳಿದ್ದಾರೆ.</p>.<p class="Subhead"><strong>ಅಧಿಕಾರ ಸ್ವೀಕರಿಸಿದ ರಾಜಪಕ್ಸೆ:</strong> ಪ್ರಧಾನಿಯಾಗಿ ಸೋಮವಾರ ಅಧಿಕಾರ ಸ್ವೀಕರಿಸಿದ ರಾಜಪಕ್ಸೆ ಕರ್ತವ್ಯ ಆರಂಭಿಸಿದ್ದಾರೆ. ಕೆಲವು ಸಚಿವರನ್ನು ನೇಮಕಗೊಳಿಸುವ ಸಾಧ್ಯತೆ ಇದೆ.<strong></strong></p>.<p class="Subhead"><strong>ರಣತುಂಗ ಬಂಧನ</strong></p>.<p>ಶ್ರೀಲಂಕಾದಲ್ಲಿ ಭಾನುವಾರ ನಡೆದ ಗುಂಡಿನ ದಾಳಿಯಲ್ಲಿ ವ್ಯಕ್ತಿಯೊಬ್ಬ ಮೃತಪಟ್ಟ ಸಂಬಂಧಪೆಟ್ರೋಲಿಯಂ ಸಚಿವ ಅರ್ಜುನ್ ರಣತುಂಗ ಅವರನ್ನು ಸೋಮವಾರ ಬಂಧಿಸಲಾಗಿದೆ. ರನಿಲ್ ವಿಕ್ರಮಸಿಂಘೆ ಆಪ್ತರಾಗಿರುವ ಅವರನ್ನು ಗುಂಪೊಂದು ಅಪಹರಿಸಲು ಯತ್ನಿಸಿದಾಗ, ಅವರ ಅಂಗರಕ್ಷಕರಲ್ಲಿ ಒಬ್ಬ ಗುಂಡಿನ ದಾಳಿ ನಡೆಸಿದ್ದ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಲಂಬೊ/ವಾಷಿಂಗ್ಟನ್:</strong> ಶ್ರೀಲಂಕಾದಲ್ಲಿ ಉಂಟಾಗಿರುವ ಸಾಂವಿಧಾನಿಕ ಬಿಕ್ಕಟ್ಟು ‘ರಕ್ತಪಾತ’ಕ್ಕೆ ತಿರುಗಬಹುದು ಎಂದು ಸೋಮವಾರ ಎಚ್ಚರಿಕೆ ನೀಡಿರುವ ಉಚ್ಚಾಟಿತ ಪ್ರಧಾನಿ ರನಿಲ್ ವಿಕ್ರಮ್ಸಿಂಘೆ, ಆಡಳಿತ ನಡೆಸಲು ಒಬ್ಬರು ನಾಯಕರನ್ನು ಆಯ್ಕೆ ಮಾಡಲು ಸಂಸತ್ತಿಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿದ್ದಾರೆ.</p>.<p>ಬಿಕ್ಕಟ್ಟು ಬಗೆಹರಿಸಲು ಸಂಸತ್ತಿಗೆ ಸಾಂವಿಧಾನಿಕ ಅಧಿಕಾರ ಇದೆ ಎಂದಿರುವ ವಿಕ್ರಮಸಿಂಘೆ, ತಮ್ಮನ್ನು ಉಚ್ಚಾಟನೆಗೊಳಿಸಿದ್ದು ಅಕ್ರಮ ಎಂದಿದ್ದಾರೆ.</p>.<p>‘ಆದ್ದರಿಂದ ತಕ್ಷಣವೇ ಯಾರಿಗೆಬಹುಮತ ಇದೆ ಎಂದು ಸಾಬೀತುಪಡಿಸಲು ಸಂಸತ್ ಅಧಿವೇಶನ ನಡೆಸಬೇಕು ಎಂದು ನಾವು ಹೇಳುತ್ತಿರುವುದು. ಈಗಲೂ ಬಹುಮತ ಇರುವ ಪ್ರಧಾನಿ ನಾನೇ’ ಎಂದು ಅವರು ತಿಳಿಸಿದ್ದಾರೆ.</p>.<p>‘ಈ ಸಂದರ್ಭ ಎಲ್ಲವೂ ಖಾಲಿ ಎನಿಸುತ್ತಿದೆ. ಯಾರೂ ದೇಶದ ಸಂಪೂರ್ಣ ಹೊಣೆ ಹೊತ್ತುಕೊಂಡಿಲ್ಲ’ ಎಂದು ವಿಕ್ರಮಸಿಂಘೆ ಹೇಳಿದ್ದಾರೆ.</p>.<p>ಶುಕ್ರವಾರ ಪ್ರಧಾನಿ ಸ್ಥಾನದಿಂದ ಉಚ್ಛಾಟನೆಗೊಂಡ ನಂತರವೂ ಅವರು ಅಧಿಕೃತ ನಿವಾಸದಲ್ಲಿಯೇ ವಾಸ್ತವ್ಯ ಮುಂದುವರಿಸಿದ್ದಾರೆ.</p>.<p><strong>ಅಂತರರಾಷ್ಟ್ರೀಯ ಮಟ್ಟದಲ್ಲಿ ಆಗ್ರಹ:</strong> ಅಧಿಕಾರದ ಬಿಕ್ಕಟ್ಟು ಕೊನೆಗಾಣಿಸುವ ಸಲುವಾಗಿ,ಮೈತ್ರಿಪಾಲ ಸಿರಿಸೇನ ಅವರು ಸಂಸತ್ತನ್ನು ಅಮಾನತುಗೊಳಿಸಿರುವ ತಮ್ಮ ಕ್ರಮವನ್ನು ಅಮಾನ್ಯವೆಂದು ಘೋಷಿಸಬೇಕೆಂಬ ಆಗ್ರಹ ಅಂತರರಾಷ್ಟ್ರೀಯ ಮಟ್ಟದಲ್ಲಿ ಕೇಳಿಬರುತ್ತಿದ್ದು, ಅಮೆರಿಕ ಸಹ ಇದಕ್ಕೆ ದನಿಗೂಡಿಸಿದೆ.</p>.<p>ತಕ್ಷಣವೇ ಸಂಸತ್ ಅಧಿವೇಶನ ನಡೆಸಬೇಕು ಎಂದು ವಿದೇಶಾಂಗ ಇಲಾಖೆ ವಕ್ತಾರೆ ಹೆದರ್ ನೊವರ್ಟ್ ಆಗ್ರಹಿಸಿದ್ದಾರೆ.‘ಈ ಸಂಬಂಧ ಅಧ್ಯಕ್ಷರು ಹಾಗೂ ಸ್ಪೀಕರ್ ಕ್ರಮ ಕೈಗೊಳ್ಳಬೇಕು.ಜನಪ್ರತಿನಿಧಿಗಳು ತಮ್ಮ ಸರ್ಕಾರ ಮುನ್ನಡೆಸುವನಾಯಕನನ್ನು ಆಯ್ಕೆ ಮಾಡುವ ಹೊಣೆಗಾರಿಕೆ ನಿರ್ವಹಿಸಲು ಅವಕಾಶ ನೀಡಬೇಕು’ ಎಂದು ಹೇಳಿದ್ದಾರೆ.</p>.<p class="Subhead"><strong>ಅಧಿಕಾರ ಸ್ವೀಕರಿಸಿದ ರಾಜಪಕ್ಸೆ:</strong> ಪ್ರಧಾನಿಯಾಗಿ ಸೋಮವಾರ ಅಧಿಕಾರ ಸ್ವೀಕರಿಸಿದ ರಾಜಪಕ್ಸೆ ಕರ್ತವ್ಯ ಆರಂಭಿಸಿದ್ದಾರೆ. ಕೆಲವು ಸಚಿವರನ್ನು ನೇಮಕಗೊಳಿಸುವ ಸಾಧ್ಯತೆ ಇದೆ.<strong></strong></p>.<p class="Subhead"><strong>ರಣತುಂಗ ಬಂಧನ</strong></p>.<p>ಶ್ರೀಲಂಕಾದಲ್ಲಿ ಭಾನುವಾರ ನಡೆದ ಗುಂಡಿನ ದಾಳಿಯಲ್ಲಿ ವ್ಯಕ್ತಿಯೊಬ್ಬ ಮೃತಪಟ್ಟ ಸಂಬಂಧಪೆಟ್ರೋಲಿಯಂ ಸಚಿವ ಅರ್ಜುನ್ ರಣತುಂಗ ಅವರನ್ನು ಸೋಮವಾರ ಬಂಧಿಸಲಾಗಿದೆ. ರನಿಲ್ ವಿಕ್ರಮಸಿಂಘೆ ಆಪ್ತರಾಗಿರುವ ಅವರನ್ನು ಗುಂಪೊಂದು ಅಪಹರಿಸಲು ಯತ್ನಿಸಿದಾಗ, ಅವರ ಅಂಗರಕ್ಷಕರಲ್ಲಿ ಒಬ್ಬ ಗುಂಡಿನ ದಾಳಿ ನಡೆಸಿದ್ದ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>