<p><strong>ವಿಶ್ವ ಸಂಸ್ಥೆ:</strong> ‘ಪಾಕಿಸ್ತಾನವು ತನ್ನ ಜನರ ಮೇಲೆಯೇ ಬಾಂಬ್ ಸ್ಫೋಟಿಸುತ್ತದೆ ಮತ್ತು ತನ್ನ ಜನರನ್ನೇ ವ್ಯವಸ್ಥಿತವಾಗಿ ನರಮೇಧ ಮಾಡುತ್ತದೆ’ ಎಂದು ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತವು ಸೋಮವಾರ ಬಲವಾದ ಪ್ರತ್ಯುತ್ತರವನ್ನು ನೀಡಿದೆ.</p>.<p>‘ಮಹಿಳೆ, ಶಾಂತಿ ಮತ್ತು ಭದ್ರತೆ’ ವಿಷಯದ ಕುರಿತ ಚರ್ಚೆಯಲ್ಲಿ ಭಾರತವು ಪಾಕಿಸ್ತಾನದ ವಿರುದ್ಧ ಪ್ರಬಲ ವಾಗ್ದಾಳಿ ನಡೆಸಿದೆ. ಈ ಚರ್ಚೆಯ ಅಧ್ಯಕ್ಷತೆಯನ್ನು ರಷ್ಯಾ ವಹಿಸಿಕೊಂಡಿತ್ತು. ವಿಶ್ವಸಂಸ್ಥೆಯಲ್ಲಿ ಭಾರತದ ಕಾಯಂ ಪ್ರತಿನಿಧಿ ಪರ್ವತನೇನಿ ಹರೀಶ್ ಚರ್ಚೆಯಲ್ಲಿ ಮಾತನಾಡಿದರು.</p>.<p>ಇದೇ ವಿಷಯದ ಕುರಿತು ವಿಷಯ ಮಂಡಿಸಿದ್ದ ಪಾಕಿಸ್ತಾನವು ಜಮ್ಮು ಮತ್ತು ಕಾಶ್ಮೀರದ ವಿಚಾರವನ್ನು ಪ್ರಸ್ತಾಪಿಸಿತ್ತು. ‘ಮಹಿಳೆ, ಶಾಂತಿ ಮತ್ತು ಭದ್ರತೆ ವಿಷಯದ ಕಾರ್ಯಸೂಚಿಯಲ್ಲಿ ಕಾಶ್ಮೀರಿ ಮಹಿಳೆಯರನ್ನು ಭಾರತವು ಹೊರಗಿಟ್ಟಿದೆ. ಈ ನಡೆಯು ಆ ದೇಶದ ನ್ಯಾಯಪರತೆ ಎಷ್ಟರ ಮಟ್ಟಿಗೆ ಇದೆ ಎನ್ನುವುದು ತೋರಿಸುತ್ತದೆ’ ಎಂದಿತ್ತು.</p>.<p>‘ಪೂರ್ವ ಪಾಕಿಸ್ತಾನದಲ್ಲಿ (ಇಂದಿನ ಬಾಂಗ್ಲಾದೇಶ) 1971ರ ಮಾರ್ಚ್ 25ರಂದು ಪಾಕಿಸ್ತಾನದ ಸೇನೆಯು ಕ್ರೂರವಾದ ದಾಳಿ ನಡೆಸಿತ್ತು. ದೊಡ್ಡ ಸಂಖ್ಯೆಯಲ್ಲಿ ಜನರನ್ನು ಕೊಲ್ಲಲಾಗಿತ್ತು. ಇದಕ್ಕೆ ‘ಆಪರೇಷನ್ ಸರ್ಚ್ಲೈಟ್’ ಎಂದು ಹೆಸರಿಡಲಾಗಿತ್ತು. ಈ ಆಪರೇಷನ್ ಮೂಲಕ ತನ್ನದೇ ಸೇನೆಯಿಂದ 4 ಲಕ್ಷ ಮಹಿಳೆಯರ ಮೇಲೆ ಅತ್ಯಾಚಾರ ಮಾಡಿಸಿದ ದೇಶವೊಂದು ತಪ್ಪು ಮಾಹಿತಿಗಳಿಂದ, ತನ್ನ ಅತಿಶಯೋಕ್ತಿಯ ಮಾತುಗಳಿಂದ ಜಗತ್ತನ್ನು ತಪ್ಪು ದಾರಿಗೆ ಎಳೆಯುತ್ತಿದೆ’ ಎಂದು ಭಾರತ ಹೇಳಿತು.</p>.<div><blockquote>ಭಾರತದ ಭೂಪ್ರದೇಶವಾದ ಜಮ್ಮು ಮತ್ತು ಕಾಶ್ಮೀರವನ್ನು ತನ್ನದು ಎಂದು ಪ್ರತಿಪಾದಿಸುತ್ತಿರುವ ಪಾಕಿಸ್ತಾನವು ಆ ಪ್ರದೇಶದ ವಿರುದ್ಧ ಉನ್ಮತ್ತವಾದ ಪುಂಖಾನುಪುಂಖ ಮಾತುಗಳನ್ನು ಆಡುತ್ತಿರುವುದು ನಮ್ಮ ದುರಾದೃಷ್ಟ</blockquote><span class="attribution"> ಪರ್ವತನೇನಿ ಹರೀಶ್ ವಿಶ್ವಸಂಸ್ಥೆಯಲ್ಲಿ ಭಾರತ ಕಾಯಂ ಪ್ರತಿನಿಧಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಶ್ವ ಸಂಸ್ಥೆ:</strong> ‘ಪಾಕಿಸ್ತಾನವು ತನ್ನ ಜನರ ಮೇಲೆಯೇ ಬಾಂಬ್ ಸ್ಫೋಟಿಸುತ್ತದೆ ಮತ್ತು ತನ್ನ ಜನರನ್ನೇ ವ್ಯವಸ್ಥಿತವಾಗಿ ನರಮೇಧ ಮಾಡುತ್ತದೆ’ ಎಂದು ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತವು ಸೋಮವಾರ ಬಲವಾದ ಪ್ರತ್ಯುತ್ತರವನ್ನು ನೀಡಿದೆ.</p>.<p>‘ಮಹಿಳೆ, ಶಾಂತಿ ಮತ್ತು ಭದ್ರತೆ’ ವಿಷಯದ ಕುರಿತ ಚರ್ಚೆಯಲ್ಲಿ ಭಾರತವು ಪಾಕಿಸ್ತಾನದ ವಿರುದ್ಧ ಪ್ರಬಲ ವಾಗ್ದಾಳಿ ನಡೆಸಿದೆ. ಈ ಚರ್ಚೆಯ ಅಧ್ಯಕ್ಷತೆಯನ್ನು ರಷ್ಯಾ ವಹಿಸಿಕೊಂಡಿತ್ತು. ವಿಶ್ವಸಂಸ್ಥೆಯಲ್ಲಿ ಭಾರತದ ಕಾಯಂ ಪ್ರತಿನಿಧಿ ಪರ್ವತನೇನಿ ಹರೀಶ್ ಚರ್ಚೆಯಲ್ಲಿ ಮಾತನಾಡಿದರು.</p>.<p>ಇದೇ ವಿಷಯದ ಕುರಿತು ವಿಷಯ ಮಂಡಿಸಿದ್ದ ಪಾಕಿಸ್ತಾನವು ಜಮ್ಮು ಮತ್ತು ಕಾಶ್ಮೀರದ ವಿಚಾರವನ್ನು ಪ್ರಸ್ತಾಪಿಸಿತ್ತು. ‘ಮಹಿಳೆ, ಶಾಂತಿ ಮತ್ತು ಭದ್ರತೆ ವಿಷಯದ ಕಾರ್ಯಸೂಚಿಯಲ್ಲಿ ಕಾಶ್ಮೀರಿ ಮಹಿಳೆಯರನ್ನು ಭಾರತವು ಹೊರಗಿಟ್ಟಿದೆ. ಈ ನಡೆಯು ಆ ದೇಶದ ನ್ಯಾಯಪರತೆ ಎಷ್ಟರ ಮಟ್ಟಿಗೆ ಇದೆ ಎನ್ನುವುದು ತೋರಿಸುತ್ತದೆ’ ಎಂದಿತ್ತು.</p>.<p>‘ಪೂರ್ವ ಪಾಕಿಸ್ತಾನದಲ್ಲಿ (ಇಂದಿನ ಬಾಂಗ್ಲಾದೇಶ) 1971ರ ಮಾರ್ಚ್ 25ರಂದು ಪಾಕಿಸ್ತಾನದ ಸೇನೆಯು ಕ್ರೂರವಾದ ದಾಳಿ ನಡೆಸಿತ್ತು. ದೊಡ್ಡ ಸಂಖ್ಯೆಯಲ್ಲಿ ಜನರನ್ನು ಕೊಲ್ಲಲಾಗಿತ್ತು. ಇದಕ್ಕೆ ‘ಆಪರೇಷನ್ ಸರ್ಚ್ಲೈಟ್’ ಎಂದು ಹೆಸರಿಡಲಾಗಿತ್ತು. ಈ ಆಪರೇಷನ್ ಮೂಲಕ ತನ್ನದೇ ಸೇನೆಯಿಂದ 4 ಲಕ್ಷ ಮಹಿಳೆಯರ ಮೇಲೆ ಅತ್ಯಾಚಾರ ಮಾಡಿಸಿದ ದೇಶವೊಂದು ತಪ್ಪು ಮಾಹಿತಿಗಳಿಂದ, ತನ್ನ ಅತಿಶಯೋಕ್ತಿಯ ಮಾತುಗಳಿಂದ ಜಗತ್ತನ್ನು ತಪ್ಪು ದಾರಿಗೆ ಎಳೆಯುತ್ತಿದೆ’ ಎಂದು ಭಾರತ ಹೇಳಿತು.</p>.<div><blockquote>ಭಾರತದ ಭೂಪ್ರದೇಶವಾದ ಜಮ್ಮು ಮತ್ತು ಕಾಶ್ಮೀರವನ್ನು ತನ್ನದು ಎಂದು ಪ್ರತಿಪಾದಿಸುತ್ತಿರುವ ಪಾಕಿಸ್ತಾನವು ಆ ಪ್ರದೇಶದ ವಿರುದ್ಧ ಉನ್ಮತ್ತವಾದ ಪುಂಖಾನುಪುಂಖ ಮಾತುಗಳನ್ನು ಆಡುತ್ತಿರುವುದು ನಮ್ಮ ದುರಾದೃಷ್ಟ</blockquote><span class="attribution"> ಪರ್ವತನೇನಿ ಹರೀಶ್ ವಿಶ್ವಸಂಸ್ಥೆಯಲ್ಲಿ ಭಾರತ ಕಾಯಂ ಪ್ರತಿನಿಧಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>