<p>ಕೊಲಂಬೊ (ಪಿಟಿಐ): ಭಾರತದ ದಕ್ಷಿಣ ಭಾಗದಲ್ಲಿರುವ ಪರಮಾಣು ಸ್ಥಾವರಗಳಿಂದ ಉಂಟಾಗಬಹುದಾದ ವಿಕಿರಣದ ಅಪಾಯದ ಬಗ್ಗೆ ಶ್ರೀಲಂಕಾ ತೀವ್ರ ಕಳವಳ ವ್ಯಕ್ತಪಡಿಸಿದ್ದು, ಇದನ್ನು ಜಾಗತಿಕ ಪರಮಾಣು ಕಾವಲು ಸಂಸ್ಥೆ (ಐಎಇಎ) ಮುಂದೆ ಪ್ರಸ್ತಾಪಿಸಲು ಮುಂದಾಗಿದೆ.<br /> <br /> ಬರುವ ಸೆಪ್ಟೆಂಬರ್ ತಿಂಗಳಲ್ಲಿ ನಡೆಯಲಿರುವ ಅಂತರ ರಾಷ್ಟ್ರೀಯ ಪರಮಾಣು ಇಂಧನ ಸಂಸ್ಥೆಯ ಸಭೆಯಲ್ಲಿ ಈ ವಿಷಯವನ್ನು ಅಧಿಕೃತವಾಗಿ ಪ್ರಸ್ತಾಪಿಸಲಾಗುವುದು ಎಂದು ವಿದ್ಯುತ್ ಮತ್ತು ಇಂಧನ ಖಾತೆ ಸಚಿವ ಚಂಪಿಕಾ ರನಾವಕಾ ತಿಳಿಸಿದ್ದಾರೆ.<br /> <br /> `ಪರಮಾಣು ಸ್ಥಾವರ ಹೊಂದುವುದು ಭಾರತದ ಹಕ್ಕು. ಇದನ್ನು ನಾವು ಗೌರವಿಸುತ್ತೇವೆ. ಆದರೆ, ನಮ್ಮ ಚಿಂತೆ ಇರುವುದು ವಿಕಿರಣಗಳಿಂದ ಉಂಟಾಗಬಹುದಾದ ಗಂಭೀರ ಪರಿಣಾಮದ ಬಗ್ಗೆ. ಹಾಗಾಗಿ ಈ ಕುರಿತು ಈಗಾಗಲೇ ಪತ್ರ ಬರೆಯಲಾಗಿದೆ~ ಎಂದು ಹೇಳಿದ್ದಾರೆ.<br /> <br /> ಚೆರ್ನೊಬಿಲ್ ಮತ್ತು ಫುಕುಶಿಮಾದಲ್ಲಿ ಸಂಭವಿಸಿದ ದುರಂತದ ಹಿನ್ನೆಲೆಯಲ್ಲಿ ನಮಗೆ ಈ ಕಳವಳ ಉಂಟಾಗಿದೆ. ನಾವು ಪರಮಾಣು ಸುರಕ್ಷೆಗಾಗಿ ಕಾರ್ಯ ನಿರ್ವಹಿಸಲಿದ್ದೇವೆ ಎಂದೂ ಸಚಿವರು ಸ್ಪಷ್ಟಪಡಿಸಿದ್ದಾರೆ.<br /> ಈ ವಿಷಯದ ಕುರಿತು ಎರಡು ರಾಷ್ಟ್ರಗಳ ನಡುವೆ ಒಪ್ಪಂದ ಏರ್ಪಡಬೇಕು ಎಂದು ಐಎಇಎ ತಿಳಿಸಿತ್ತು. <br /> <br /> ವಿದೇಶಾಂಗ ಸಚಿವಾಲಯದ ಮುಖೇನ ಭಾರತಕ್ಕೆ ಈ ಪ್ರಸ್ತಾವ ಕಳಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.<br /> ಮೂರು ಅಣು ಸ್ಥಾವರಗಳು ತಮಿಳುನಾಡಿನ ದಕ್ಷಿಣ ಕರಾವಳಿಯಲ್ಲಿದ್ದು, ದ್ವೀಪ ರಾಷ್ಟ್ರದಿಂದ ತುಂಬ ಸನಿಹದಲ್ಲಿವೆ. <br /> ಕೂಡುಂಕುಳಂ ಅಣು ಸ್ಥಾವರ ಲಂಕಾದ ಮನ್ನಾರ ಕರಾವಳಿಯಿಂದ 250 ಕಿ.ಮೀ ದೂರದಲ್ಲಿದೆ. ಅಣು ಸ್ಥಾವರದಿಂದ ಯಾವುದೇ ರೀತಿಯ ದುರಂತ ಸಂಭವಿಸಿದರೆ ಅದನ್ನು ಎದುರಿಸುವ ಸೂಕ್ತ ವ್ಯವಸ್ಥೆಯನ್ನು ಶ್ರೀಲಂಕಾದ ಹೊಂದಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕೊಲಂಬೊ (ಪಿಟಿಐ): ಭಾರತದ ದಕ್ಷಿಣ ಭಾಗದಲ್ಲಿರುವ ಪರಮಾಣು ಸ್ಥಾವರಗಳಿಂದ ಉಂಟಾಗಬಹುದಾದ ವಿಕಿರಣದ ಅಪಾಯದ ಬಗ್ಗೆ ಶ್ರೀಲಂಕಾ ತೀವ್ರ ಕಳವಳ ವ್ಯಕ್ತಪಡಿಸಿದ್ದು, ಇದನ್ನು ಜಾಗತಿಕ ಪರಮಾಣು ಕಾವಲು ಸಂಸ್ಥೆ (ಐಎಇಎ) ಮುಂದೆ ಪ್ರಸ್ತಾಪಿಸಲು ಮುಂದಾಗಿದೆ.<br /> <br /> ಬರುವ ಸೆಪ್ಟೆಂಬರ್ ತಿಂಗಳಲ್ಲಿ ನಡೆಯಲಿರುವ ಅಂತರ ರಾಷ್ಟ್ರೀಯ ಪರಮಾಣು ಇಂಧನ ಸಂಸ್ಥೆಯ ಸಭೆಯಲ್ಲಿ ಈ ವಿಷಯವನ್ನು ಅಧಿಕೃತವಾಗಿ ಪ್ರಸ್ತಾಪಿಸಲಾಗುವುದು ಎಂದು ವಿದ್ಯುತ್ ಮತ್ತು ಇಂಧನ ಖಾತೆ ಸಚಿವ ಚಂಪಿಕಾ ರನಾವಕಾ ತಿಳಿಸಿದ್ದಾರೆ.<br /> <br /> `ಪರಮಾಣು ಸ್ಥಾವರ ಹೊಂದುವುದು ಭಾರತದ ಹಕ್ಕು. ಇದನ್ನು ನಾವು ಗೌರವಿಸುತ್ತೇವೆ. ಆದರೆ, ನಮ್ಮ ಚಿಂತೆ ಇರುವುದು ವಿಕಿರಣಗಳಿಂದ ಉಂಟಾಗಬಹುದಾದ ಗಂಭೀರ ಪರಿಣಾಮದ ಬಗ್ಗೆ. ಹಾಗಾಗಿ ಈ ಕುರಿತು ಈಗಾಗಲೇ ಪತ್ರ ಬರೆಯಲಾಗಿದೆ~ ಎಂದು ಹೇಳಿದ್ದಾರೆ.<br /> <br /> ಚೆರ್ನೊಬಿಲ್ ಮತ್ತು ಫುಕುಶಿಮಾದಲ್ಲಿ ಸಂಭವಿಸಿದ ದುರಂತದ ಹಿನ್ನೆಲೆಯಲ್ಲಿ ನಮಗೆ ಈ ಕಳವಳ ಉಂಟಾಗಿದೆ. ನಾವು ಪರಮಾಣು ಸುರಕ್ಷೆಗಾಗಿ ಕಾರ್ಯ ನಿರ್ವಹಿಸಲಿದ್ದೇವೆ ಎಂದೂ ಸಚಿವರು ಸ್ಪಷ್ಟಪಡಿಸಿದ್ದಾರೆ.<br /> ಈ ವಿಷಯದ ಕುರಿತು ಎರಡು ರಾಷ್ಟ್ರಗಳ ನಡುವೆ ಒಪ್ಪಂದ ಏರ್ಪಡಬೇಕು ಎಂದು ಐಎಇಎ ತಿಳಿಸಿತ್ತು. <br /> <br /> ವಿದೇಶಾಂಗ ಸಚಿವಾಲಯದ ಮುಖೇನ ಭಾರತಕ್ಕೆ ಈ ಪ್ರಸ್ತಾವ ಕಳಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.<br /> ಮೂರು ಅಣು ಸ್ಥಾವರಗಳು ತಮಿಳುನಾಡಿನ ದಕ್ಷಿಣ ಕರಾವಳಿಯಲ್ಲಿದ್ದು, ದ್ವೀಪ ರಾಷ್ಟ್ರದಿಂದ ತುಂಬ ಸನಿಹದಲ್ಲಿವೆ. <br /> ಕೂಡುಂಕುಳಂ ಅಣು ಸ್ಥಾವರ ಲಂಕಾದ ಮನ್ನಾರ ಕರಾವಳಿಯಿಂದ 250 ಕಿ.ಮೀ ದೂರದಲ್ಲಿದೆ. ಅಣು ಸ್ಥಾವರದಿಂದ ಯಾವುದೇ ರೀತಿಯ ದುರಂತ ಸಂಭವಿಸಿದರೆ ಅದನ್ನು ಎದುರಿಸುವ ಸೂಕ್ತ ವ್ಯವಸ್ಥೆಯನ್ನು ಶ್ರೀಲಂಕಾದ ಹೊಂದಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>