ರಾಜ್ಯ ಹೆದ್ದಾರಿಗಳನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತಿಸಬೇಕೆಂಬ ಹದಿನೇಳು ಪ್ರಸ್ತಾವಗಳು ಕೇಂದ್ರದ ಮುಂದಿವೆ. ಇವುಗಳಲ್ಲಿ ಆದ್ಯತೆಯ ಮೂರು ರಸ್ತೆಗಳನ್ನು ಸೂಚಿಸಬೇಕೆಂಬ ಕೋರಿಕೆ ಮೇರೆಗೆ ಗುಂತಕಲ್– ಬಳ್ಳಾರಿ, ಬೆಳಗಾವಿ– ವಿಜಾಪುರ, ದೇವನಹಳ್ಳಿ– ಹೊಸಕೋಟೆ ನಡುವಿನ ರಸ್ತೆಗಳನ್ನು ಶಿಫಾರಸು ಮಾಡಲಾಗಿದೆ ಎಂದು ಅವರು ತಮ್ಮನ್ನು ಭೇಟಿ ಮಾಡಿದ ಪತ್ರಕರ್ತರಿಗೆ ತಿಳಿಸಿದರು.