<p><strong>ಕಾಂಗೈನಿಂದ ಸಿಡಿದ ಬಣಕ್ಕೆ ಅರ್ಜುನ್ ಸಿಂಗ್ ಕಾರ್ಯಾಧ್ಯಕ್ಷ</strong></p>.<p>ನವದೆಹಲಿ, ಮೇ 22 (ಪಿಟಿಐ)– ಕಾಂಗ್ರೆಸ್ (ಐ)ನಿಂದ ಸಿಡಿದ ಬಣದ ಕಾರ್ಯಾಧ್ಯಕ್ಷರನ್ನಾಗಿ ಅರ್ಜುನ್ ಸಿಂಗ್ ಅವರನ್ನು ಇಂದು ನೇಮಿಸಲಾಯಿತು. ಇದರೊಂದಿಗೆ ಕಾಂಗೈ ವಿಭಜನೆಗೆ ಅಧಿಕೃತ ಮುದ್ರೆ ಬಿದ್ದಂತಾಗಿದೆ. ಎನ್.ಡಿ.ತಿವಾರಿ– ಅರ್ಜುನ್ ಸಿಂಗ್ ನೇತೃತ್ವದ ಪಕ್ಷವು ಸಾಂಸ್ಥಿಕ ಸ್ವರೂಪ ತಾಳಿದೆ.</p>.<p>ಪಕ್ಷದ ವಿವಿಧ ಸಾಂಸ್ಥಿಕ ಘಟಕಗಳನ್ನು ರಚಿಸುವ ಕಾರ್ಯವನ್ನು ಪಕ್ಷಾಧ್ಯಕ್ಷ ಎನ್.ಡಿ.ತಿವಾರಿ ಅವರು ಇಂದು ಆರಂಭಿಸಿದರು.</p>.<p>ಸೋನಿಯಾ ಗಾಂಧಿ ಅವರ ಒಲವು ಯಾರ ಕಡೆಗೆ ಎಂಬ ಕಾತರ ಭಿನ್ನಮತೀಯರ ವಲಯದಲ್ಲಿ ಕಂಡುಬಂದಿದೆ.</p>.<p><strong>ಅಪರಾಧ ಕಾನೂನಿಗೆ ತಿದ್ದುಪಡಿ</strong></p>.<p>ನವದೆಹಲಿ, ಮೇ 22 (ಯುಎನ್ಐ, ಪಿಟಿಐ)– ಭಯೋತ್ಪಾದನೆ ಮತ್ತು ವಿಚ್ಛಿದ್ರಕಾರಿ ಚಟುವಟಿಕೆಗಳಲ್ಲಿ ತೊಡಗಿದ ಆರೋಪದ ಮೇಲೆ ಬಂಧಿತರಾದ ವ್ಯಕ್ತಿಗಳು ಜಾಮೀನು ಪಡೆಯಲು ಅವಕಾಶ ನೀಡುವ ಅಪರಾಧ ಕಾನೂನು ತಿದ್ದುಪಡಿ ಮಸೂದೆ(1995)ಯನ್ನು ಸರ್ಕಾರ ಇಂದು ರಾಜ್ಯಸಭೆಯಲ್ಲಿ ಮಂಡಿಸಿತು.</p>.<p>ನಾಳೆಗೆ ಅವಧಿ ಮುಕ್ತಾಯವಾಗಲಿರುವ ವಿವಾದಾತ್ಮಕ ಟಾಡಾ ಕಾಯ್ದೆಯ ಸ್ಥಾನವನ್ನು ಈ ಮಸೂದೆ ತುಂಬಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾಂಗೈನಿಂದ ಸಿಡಿದ ಬಣಕ್ಕೆ ಅರ್ಜುನ್ ಸಿಂಗ್ ಕಾರ್ಯಾಧ್ಯಕ್ಷ</strong></p>.<p>ನವದೆಹಲಿ, ಮೇ 22 (ಪಿಟಿಐ)– ಕಾಂಗ್ರೆಸ್ (ಐ)ನಿಂದ ಸಿಡಿದ ಬಣದ ಕಾರ್ಯಾಧ್ಯಕ್ಷರನ್ನಾಗಿ ಅರ್ಜುನ್ ಸಿಂಗ್ ಅವರನ್ನು ಇಂದು ನೇಮಿಸಲಾಯಿತು. ಇದರೊಂದಿಗೆ ಕಾಂಗೈ ವಿಭಜನೆಗೆ ಅಧಿಕೃತ ಮುದ್ರೆ ಬಿದ್ದಂತಾಗಿದೆ. ಎನ್.ಡಿ.ತಿವಾರಿ– ಅರ್ಜುನ್ ಸಿಂಗ್ ನೇತೃತ್ವದ ಪಕ್ಷವು ಸಾಂಸ್ಥಿಕ ಸ್ವರೂಪ ತಾಳಿದೆ.</p>.<p>ಪಕ್ಷದ ವಿವಿಧ ಸಾಂಸ್ಥಿಕ ಘಟಕಗಳನ್ನು ರಚಿಸುವ ಕಾರ್ಯವನ್ನು ಪಕ್ಷಾಧ್ಯಕ್ಷ ಎನ್.ಡಿ.ತಿವಾರಿ ಅವರು ಇಂದು ಆರಂಭಿಸಿದರು.</p>.<p>ಸೋನಿಯಾ ಗಾಂಧಿ ಅವರ ಒಲವು ಯಾರ ಕಡೆಗೆ ಎಂಬ ಕಾತರ ಭಿನ್ನಮತೀಯರ ವಲಯದಲ್ಲಿ ಕಂಡುಬಂದಿದೆ.</p>.<p><strong>ಅಪರಾಧ ಕಾನೂನಿಗೆ ತಿದ್ದುಪಡಿ</strong></p>.<p>ನವದೆಹಲಿ, ಮೇ 22 (ಯುಎನ್ಐ, ಪಿಟಿಐ)– ಭಯೋತ್ಪಾದನೆ ಮತ್ತು ವಿಚ್ಛಿದ್ರಕಾರಿ ಚಟುವಟಿಕೆಗಳಲ್ಲಿ ತೊಡಗಿದ ಆರೋಪದ ಮೇಲೆ ಬಂಧಿತರಾದ ವ್ಯಕ್ತಿಗಳು ಜಾಮೀನು ಪಡೆಯಲು ಅವಕಾಶ ನೀಡುವ ಅಪರಾಧ ಕಾನೂನು ತಿದ್ದುಪಡಿ ಮಸೂದೆ(1995)ಯನ್ನು ಸರ್ಕಾರ ಇಂದು ರಾಜ್ಯಸಭೆಯಲ್ಲಿ ಮಂಡಿಸಿತು.</p>.<p>ನಾಳೆಗೆ ಅವಧಿ ಮುಕ್ತಾಯವಾಗಲಿರುವ ವಿವಾದಾತ್ಮಕ ಟಾಡಾ ಕಾಯ್ದೆಯ ಸ್ಥಾನವನ್ನು ಈ ಮಸೂದೆ ತುಂಬಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>