ನವದೆಹಲಿ, ಜುಲೈ 31– ಮಂಗಳೂರಿನ ಎರಡು ಖಾಸಗಿ ಶಾಖೋತ್ಪನ್ನ ವಿದ್ಯುತ್ ಯೋಜನೆ, ರಾಯಚೂರು ಮತ್ತು ತೋರಣಗಲ್ನ (ಖಾಸಗಿ) ಎರಡು ಶಾಖೋತ್ಪನ್ನ ಮತ್ತು ಯಲಹಂಕದ ಡೀಸೆಲ್ ಜನರೇಟರ್ ಸೆಟ್ಗಳ ಕೇಂದ್ರದ ವಿಸ್ತರಣೆಯ ವಿದ್ಯುತ್ ಯೋಜನೆಗಳಿಗೆ ಸಂಬಂಧಿಸಿದಂತೆ ಇನ್ನೂ ಕೆಲವು ವಿಧಿ ವಿಧಾನಗಳು ಪೂರ್ಣಗೊಳ್ಳಬೇಕಾಗಿರುವುದರಿಂದ ಅವುಗಳಿಗೆ ಕೇಂದ್ರ ಸರ್ಕಾರ ಇನ್ನೂ ಮಂಜೂರಾತಿ ನೀಡಿಲ್ಲ ಎಂದು ವಿದ್ಯುತ್ ಖಾತೆ ರಾಜ್ಯ ಸಚಿವೆ ಉರ್ಮಿಳಾ ಬೆನ್ ಪಟೇಲ್ ಇಂದು ಲೋಕಸಭೆಗೆ ತಿಳಿಸಿದರು.