ನವದೆಹಲಿ, ಜುಲೈ 20 (ಪಿಟಿಐ, ಯುಎನ್ಐ)– ಮುಂದಿನ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಷ್ಟ್ರೀಯ ರಂಗವನ್ನು ಬಲಪಡಿಸುವ ಪ್ರಯತ್ನ ಮುಂದುವರಿಯುತ್ತಿರುವ ಮಧ್ಯೆ, ರಂಗದಿಂದ ಡಿಎಂಕೆ ಹೊರಬರುವುದು ಬಹುತೇಕ ಖಚಿತವಾದಂತಾಗಿದೆ. ಇದೇ ವೇಳೆ, ಡಿಎಂಕೆಯ ಕಟ್ಟಾ ವಿರೋಧಿಯಾಗಿರುವ ಎಐಎಡಿಎಂಕೆ ಮತ್ತು ಮುಲಾಯಂ ಸಿಂಗ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷವು ರಾಷ್ಟ್ರೀಯ ರಂಗದ ಜತೆ ನಂಟು ಬೆಳೆಸಿಕೊಳ್ಳುವ ಸಾಧ್ಯತೆ ನಿಚ್ಚಳವಾಗಿದೆ.