ಕೊಯಮತ್ತೂರು, ಡಿ. 4 (ಪಿಟಿಐ)– ತಮಿಳುನಾಡಿನ ಉನ್ನತ ಪೊಲೀಸ್ ಅಧಿಕಾರಿ ಮತ್ತು ಅವರ ಮೂವರು ಸಂಬಂಧಿಗಳನ್ನು ಕುಖ್ಯಾತ ನರಹಂತಕ, ದಂತಚೋರ ವೀರಪ್ಪನ್, ಮೆಟ್ಟುಪಾಳ್ಯಂ ಅರಣ್ಯ ವಲಯದ ಸಿರುಮುಗೈನಿಂದ ನಿನ್ನೆ ಅಪಹರಿಸಿದ್ದಾನೆ. ಭ್ರಷ್ಟಾಚಾರ ತಡೆ ದಳದ ಡಿಎಸ್ಪಿ ಚಿದಂಬರನಾಥ್, ಅವರ ಭಾವ ಶೇಖರ್ರಾಜ್ ಮತ್ತು ಸಹೋದರ ಅಪಹರಣಕ್ಕೆ ಒಳಗಾದವರಾಗಿದ್ದಾರೆ.