<p><strong>ಗೂಢಚರ್ಯೆ: ತನಿಖೆ ಆರಂಭ</strong></p>.<p><strong>ನವದೆಹಲಿ, ಡಿ. 4 (ಯುಎನ್ಐ)–</strong> ಪಾಕಿಸ್ತಾನದ ಗೂಢಚರ್ಯೆ ಸಂಸ್ಥೆ ಐಎಸ್ಐ ಪರ ಕೆಲಸ ಮಾಡುತ್ತಿದ್ದುದು ನಿಜ ಎಂದು ಬೆಂಗಳೂರು ಮೂಲದ ವಾಣಿಜ್ಯೋದ್ಯಮಿ ಚಂದ್ರಶೇಖರ್ ಅವರು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.</p>.<p>ಭಾರತದ ಬಾಹ್ಯಾಕಾಶ ಕಾರ್ಯಕ್ರಮದ ಮಹತ್ವದ ರಹಸ್ಯಗಳನ್ನು ವಿದೇಶಗಳಿಗೆ ಕಳುಹಿಸಲಾಗಿದೆ ಎಂದು ಶಂಕಿಸಲಾಗಿರುವ ಗೂಢಚರ್ಯೆ ಪ್ರಕರಣದ ತನಿಖೆಯನ್ನು ಸಿಬಿಐ ಇಂದು ಆರಂಭಿಸಿದೆ.</p>.<p><strong>ವೀರಪ್ಪನ್ನಿಂದ ಪೊಲೀಸ್ ಅಧಿಕಾರಿ ಅಪಹರಣ</strong></p>.<p><strong>ಕೊಯಮತ್ತೂರು, ಡಿ. 4 (ಪಿಟಿಐ)– </strong>ತಮಿಳುನಾಡಿನ ಉನ್ನತ ಪೊಲೀಸ್ ಅಧಿಕಾರಿ ಮತ್ತು ಅವರ ಮೂವರು ಸಂಬಂಧಿಗಳನ್ನು ಕುಖ್ಯಾತ ನರಹಂತಕ, ದಂತಚೋರ ವೀರಪ್ಪನ್, ಮೆಟ್ಟುಪಾಳ್ಯಂ ಅರಣ್ಯ ವಲಯದ ಸಿರುಮುಗೈನಿಂದ ನಿನ್ನೆ ಅಪಹರಿಸಿದ್ದಾನೆ. ಭ್ರಷ್ಟಾಚಾರ ತಡೆ ದಳದ ಡಿಎಸ್ಪಿ ಚಿದಂಬರನಾಥ್, ಅವರ ಭಾವ ಶೇಖರ್ರಾಜ್ ಮತ್ತು ಸಹೋದರ ಅಪಹರಣಕ್ಕೆ ಒಳಗಾದವರಾಗಿದ್ದಾರೆ.</p>.<p><strong>ಮುಖ್ಯಕಾರ್ಯದರ್ಶಿಯಾಗಿ ಮುದ್ದಪ್ಪ</strong></p>.<p><strong>ಬೆಂಗಳೂರು, ಡಿ. 4– </strong>ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಬಿ. ಮುದ್ದಪ್ಪ ಅವರನ್ನು ರಾಜ್ಯ ಮುಖ್ಯಕಾರ್ಯದರ್ಶಿಯನ್ನಾಗಿ ಸರ್ಕಾರ ನೇಮಿಸಿದೆ.</p>.<p><strong>ಕೃಷ್ಣಾ ಪ್ರಾಧಿಕಾರಕ್ಕೆ ಅಂಗೀಕಾರ</strong></p>.<p><strong>ಬೆಂಗಳೂರು, ಡಿ. 4–</strong> ಕೃಷ್ಣಾ ಜಲಾನಯನ ಪ್ರದೇಶದಲ್ಲಿನ ನೀರಾವರಿ ಯೋಜನೆಗಳನ್ನು ಆದಷ್ಟು ಶೀಘ್ರ ಕಾರ್ಯರೂಪಕ್ಕೆ ತರಲು ಅನುಕೂಲವಾಗುವ ಕೃಷ್ಣಾ ಕಣಿವೆ ಅಭಿವೃದ್ಧಿ ಪ್ರಾಧಿಕಾರ ಮಸೂದೆಗೆ ರಾಷ್ಟ್ರಪತಿ ಡಾ. ಶಂಕರ್ದಯಾಳ್ ಶರ್ಮಾ ಅವರು ಅಂಗೀಕಾರ ನೀಡಿದ್ದಾರೆ ಎಂದು ಉಪಮುಖ್ಯಮಂತ್ರಿ ಎಸ್.ಎಂ. ಕೃಷ್ಣ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗೂಢಚರ್ಯೆ: ತನಿಖೆ ಆರಂಭ</strong></p>.<p><strong>ನವದೆಹಲಿ, ಡಿ. 4 (ಯುಎನ್ಐ)–</strong> ಪಾಕಿಸ್ತಾನದ ಗೂಢಚರ್ಯೆ ಸಂಸ್ಥೆ ಐಎಸ್ಐ ಪರ ಕೆಲಸ ಮಾಡುತ್ತಿದ್ದುದು ನಿಜ ಎಂದು ಬೆಂಗಳೂರು ಮೂಲದ ವಾಣಿಜ್ಯೋದ್ಯಮಿ ಚಂದ್ರಶೇಖರ್ ಅವರು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.</p>.<p>ಭಾರತದ ಬಾಹ್ಯಾಕಾಶ ಕಾರ್ಯಕ್ರಮದ ಮಹತ್ವದ ರಹಸ್ಯಗಳನ್ನು ವಿದೇಶಗಳಿಗೆ ಕಳುಹಿಸಲಾಗಿದೆ ಎಂದು ಶಂಕಿಸಲಾಗಿರುವ ಗೂಢಚರ್ಯೆ ಪ್ರಕರಣದ ತನಿಖೆಯನ್ನು ಸಿಬಿಐ ಇಂದು ಆರಂಭಿಸಿದೆ.</p>.<p><strong>ವೀರಪ್ಪನ್ನಿಂದ ಪೊಲೀಸ್ ಅಧಿಕಾರಿ ಅಪಹರಣ</strong></p>.<p><strong>ಕೊಯಮತ್ತೂರು, ಡಿ. 4 (ಪಿಟಿಐ)– </strong>ತಮಿಳುನಾಡಿನ ಉನ್ನತ ಪೊಲೀಸ್ ಅಧಿಕಾರಿ ಮತ್ತು ಅವರ ಮೂವರು ಸಂಬಂಧಿಗಳನ್ನು ಕುಖ್ಯಾತ ನರಹಂತಕ, ದಂತಚೋರ ವೀರಪ್ಪನ್, ಮೆಟ್ಟುಪಾಳ್ಯಂ ಅರಣ್ಯ ವಲಯದ ಸಿರುಮುಗೈನಿಂದ ನಿನ್ನೆ ಅಪಹರಿಸಿದ್ದಾನೆ. ಭ್ರಷ್ಟಾಚಾರ ತಡೆ ದಳದ ಡಿಎಸ್ಪಿ ಚಿದಂಬರನಾಥ್, ಅವರ ಭಾವ ಶೇಖರ್ರಾಜ್ ಮತ್ತು ಸಹೋದರ ಅಪಹರಣಕ್ಕೆ ಒಳಗಾದವರಾಗಿದ್ದಾರೆ.</p>.<p><strong>ಮುಖ್ಯಕಾರ್ಯದರ್ಶಿಯಾಗಿ ಮುದ್ದಪ್ಪ</strong></p>.<p><strong>ಬೆಂಗಳೂರು, ಡಿ. 4– </strong>ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಬಿ. ಮುದ್ದಪ್ಪ ಅವರನ್ನು ರಾಜ್ಯ ಮುಖ್ಯಕಾರ್ಯದರ್ಶಿಯನ್ನಾಗಿ ಸರ್ಕಾರ ನೇಮಿಸಿದೆ.</p>.<p><strong>ಕೃಷ್ಣಾ ಪ್ರಾಧಿಕಾರಕ್ಕೆ ಅಂಗೀಕಾರ</strong></p>.<p><strong>ಬೆಂಗಳೂರು, ಡಿ. 4–</strong> ಕೃಷ್ಣಾ ಜಲಾನಯನ ಪ್ರದೇಶದಲ್ಲಿನ ನೀರಾವರಿ ಯೋಜನೆಗಳನ್ನು ಆದಷ್ಟು ಶೀಘ್ರ ಕಾರ್ಯರೂಪಕ್ಕೆ ತರಲು ಅನುಕೂಲವಾಗುವ ಕೃಷ್ಣಾ ಕಣಿವೆ ಅಭಿವೃದ್ಧಿ ಪ್ರಾಧಿಕಾರ ಮಸೂದೆಗೆ ರಾಷ್ಟ್ರಪತಿ ಡಾ. ಶಂಕರ್ದಯಾಳ್ ಶರ್ಮಾ ಅವರು ಅಂಗೀಕಾರ ನೀಡಿದ್ದಾರೆ ಎಂದು ಉಪಮುಖ್ಯಮಂತ್ರಿ ಎಸ್.ಎಂ. ಕೃಷ್ಣ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>