<p><strong>ಒಂದು ದೇಶ ಒಂದು ಕಾಯ್ದೆ: ಚಿಂತನೆಗೆ ಎರಡು ಕವಲು</strong></p>.<p>ಬೆಂಗಳೂರು, ಜೂನ್ 16– ನ್ಯಾಯವಾದಿಗಳು, ನ್ಯಾಯಮೂರ್ತಿ ಗಳು, ಕಾನೂನು ಕಾಲೇಜಿನ ನಿವೃತ್ತ ಪ್ರಾಧ್ಯಾಪಕರಂಥ ಗಣ್ಯರು ಭಾಗವಹಿಸಿದ್ದ ವಿಚಾರ ಸಂಕಿರಣದಲ್ಲಿ, ದೇಶದ ಎಲ್ಲ ನಾಗರಿಕರಿಗೂ ಅನ್ವಯ ಆಗುವಂತೆ ಏಕರೂಪ ನಾಗರಿಕ ಸಂಹಿತೆ ರೂಪಿಸುವುದು ಅತ್ಯಗತ್ಯ ಎಂಬ ಅನಿಸಿಕೆ ಒಂದೆಡೆ ವ್ಯಕ್ತವಾದರೆ; ಮತ್ತೊಂದೆಡೆ, ಮೊದಲು ಈ ಬಗ್ಗೆ ಮುಕ್ತ ಚರ್ಚೆಯಾಗಬೇಕು ಎಂಬ ಸಲಹೆ ಮೂಡಿಬಂದಿತು.</p>.<p>ಏಕರೂಪ ನಾಗರಿಕ ಸಂಹಿತೆ ಜಾರಿ ಗೊಳಿಸಿದರೆ ಏನೋ ಎತ್ತೋ ಎಂಬ ಅಂಜಿಕೆ, ಅನುಮಾನ ನಿರಾಧಾರ. ಇದರಿಂದ ಯಾರಿಗೂ ಅನ್ಯಾಯ ಆಗದು ಎಂಬ ಭರವಸೆ; ಏಕಾಏಕಿ ಇದನ್ನು ಜಾರಿಗೊಳಿಸುವ ಬದಲು, ಮೊದಲು ಕರಡು ಮಸೂದೆ ರೂಪಿಸಿ ಚರ್ಚಿಸುವುದು ಒಳಿತೆಂಬ ಸೂಚನೆ; ಇದುವರೆಗೆ ಈ ನಿಟ್ಟಿನಲ್ಲಿ ಪ್ರಯತ್ನವನ್ನೇ ಮಾಡದ ಸರ್ಕಾರದ ಅಸಡ್ಡೆಯ ಬಗ್ಗೆ ಆಕ್ರೋಶವೂ ವ್ಯಕ್ತವಾಯಿತು.</p>.<p><strong>ಕಾಂಗ್ರೆಸ್, ಜನತಾದಳ ಸಮ್ಮಿಶ್ರ ಸರ್ಕಾರ ಇಲ್ಲ: ಹೆಗಡೆ ಸಲಹೆ ತಿರಸ್ಕೃತ</strong></p>.<p>ಬೆಂಗಳೂರು, ಜೂನ್ 16– ಲೋಕಸಭಾ ಚುನಾವಣೆಗೆ ಮುಂಚೆ ಕೇಂದ್ರದಲ್ಲಿ ಪ್ರಧಾನಿ ನರಸಿಂಹ ರಾವ್ ನೇತೃತ್ವದಲ್ಲಿ ಸಮ್ಮಿಶ್ರ ಸರ್ಕಾರ ರಚನೆಯಾಗಬೇಕು ಎಂಬ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರ ಸಲಹೆಯನ್ನು ಜನತಾದಳ ಸಾರಾಸಗಟಾಗಿ ತಿರಸ್ಕರಿಸಿದೆ.</p>.<p>ಅತ್ತಿಬೆಲೆಯಲ್ಲಿ ನಡೆಯುತ್ತಿರುವ ದಳದ ರಾಷ್ಟ್ರೀಯ ಅಧ್ಯಯನ ಶಿಬಿರದ ಪ್ರತಿನಿಧಿ ಸಭೆಯಲ್ಲಿ ಇದು ಚರ್ಚೆಗೆ ಬಂದಾಗ ‘ಹೆಗಡೆ ಮಾಡಿರುವ ಪ್ರಸ್ತಾಪ ಸ್ವೀಕಾರ ಯೋಗ್ಯವಲ್ಲದ ಸಲಹೆ’ ಎಂದು ತಳ್ಳಿಹಾಕಲಾಯಿತು ಎಂದು ಪಕ್ಷದ ವಕ್ತಾರ ಜೈಪಾಲ ರೆಡ್ಡಿ ಇಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.</p>.<p>‘ಪಕ್ಷದಲ್ಲಿ ಯಾರೊಬ್ಬರೂ ಹೆಗಡೆ ಅವರನ್ನು ಬೆಂಬಲಿಸಲಿಲ್ಲ. ಅವರು ಈ ವಿಚಾರದಲ್ಲಿ ಅಕ್ಷರಶಃ ಏಕಾಂಗಿಯಾದರು’ ಎಂದೂ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಒಂದು ದೇಶ ಒಂದು ಕಾಯ್ದೆ: ಚಿಂತನೆಗೆ ಎರಡು ಕವಲು</strong></p>.<p>ಬೆಂಗಳೂರು, ಜೂನ್ 16– ನ್ಯಾಯವಾದಿಗಳು, ನ್ಯಾಯಮೂರ್ತಿ ಗಳು, ಕಾನೂನು ಕಾಲೇಜಿನ ನಿವೃತ್ತ ಪ್ರಾಧ್ಯಾಪಕರಂಥ ಗಣ್ಯರು ಭಾಗವಹಿಸಿದ್ದ ವಿಚಾರ ಸಂಕಿರಣದಲ್ಲಿ, ದೇಶದ ಎಲ್ಲ ನಾಗರಿಕರಿಗೂ ಅನ್ವಯ ಆಗುವಂತೆ ಏಕರೂಪ ನಾಗರಿಕ ಸಂಹಿತೆ ರೂಪಿಸುವುದು ಅತ್ಯಗತ್ಯ ಎಂಬ ಅನಿಸಿಕೆ ಒಂದೆಡೆ ವ್ಯಕ್ತವಾದರೆ; ಮತ್ತೊಂದೆಡೆ, ಮೊದಲು ಈ ಬಗ್ಗೆ ಮುಕ್ತ ಚರ್ಚೆಯಾಗಬೇಕು ಎಂಬ ಸಲಹೆ ಮೂಡಿಬಂದಿತು.</p>.<p>ಏಕರೂಪ ನಾಗರಿಕ ಸಂಹಿತೆ ಜಾರಿ ಗೊಳಿಸಿದರೆ ಏನೋ ಎತ್ತೋ ಎಂಬ ಅಂಜಿಕೆ, ಅನುಮಾನ ನಿರಾಧಾರ. ಇದರಿಂದ ಯಾರಿಗೂ ಅನ್ಯಾಯ ಆಗದು ಎಂಬ ಭರವಸೆ; ಏಕಾಏಕಿ ಇದನ್ನು ಜಾರಿಗೊಳಿಸುವ ಬದಲು, ಮೊದಲು ಕರಡು ಮಸೂದೆ ರೂಪಿಸಿ ಚರ್ಚಿಸುವುದು ಒಳಿತೆಂಬ ಸೂಚನೆ; ಇದುವರೆಗೆ ಈ ನಿಟ್ಟಿನಲ್ಲಿ ಪ್ರಯತ್ನವನ್ನೇ ಮಾಡದ ಸರ್ಕಾರದ ಅಸಡ್ಡೆಯ ಬಗ್ಗೆ ಆಕ್ರೋಶವೂ ವ್ಯಕ್ತವಾಯಿತು.</p>.<p><strong>ಕಾಂಗ್ರೆಸ್, ಜನತಾದಳ ಸಮ್ಮಿಶ್ರ ಸರ್ಕಾರ ಇಲ್ಲ: ಹೆಗಡೆ ಸಲಹೆ ತಿರಸ್ಕೃತ</strong></p>.<p>ಬೆಂಗಳೂರು, ಜೂನ್ 16– ಲೋಕಸಭಾ ಚುನಾವಣೆಗೆ ಮುಂಚೆ ಕೇಂದ್ರದಲ್ಲಿ ಪ್ರಧಾನಿ ನರಸಿಂಹ ರಾವ್ ನೇತೃತ್ವದಲ್ಲಿ ಸಮ್ಮಿಶ್ರ ಸರ್ಕಾರ ರಚನೆಯಾಗಬೇಕು ಎಂಬ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರ ಸಲಹೆಯನ್ನು ಜನತಾದಳ ಸಾರಾಸಗಟಾಗಿ ತಿರಸ್ಕರಿಸಿದೆ.</p>.<p>ಅತ್ತಿಬೆಲೆಯಲ್ಲಿ ನಡೆಯುತ್ತಿರುವ ದಳದ ರಾಷ್ಟ್ರೀಯ ಅಧ್ಯಯನ ಶಿಬಿರದ ಪ್ರತಿನಿಧಿ ಸಭೆಯಲ್ಲಿ ಇದು ಚರ್ಚೆಗೆ ಬಂದಾಗ ‘ಹೆಗಡೆ ಮಾಡಿರುವ ಪ್ರಸ್ತಾಪ ಸ್ವೀಕಾರ ಯೋಗ್ಯವಲ್ಲದ ಸಲಹೆ’ ಎಂದು ತಳ್ಳಿಹಾಕಲಾಯಿತು ಎಂದು ಪಕ್ಷದ ವಕ್ತಾರ ಜೈಪಾಲ ರೆಡ್ಡಿ ಇಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.</p>.<p>‘ಪಕ್ಷದಲ್ಲಿ ಯಾರೊಬ್ಬರೂ ಹೆಗಡೆ ಅವರನ್ನು ಬೆಂಬಲಿಸಲಿಲ್ಲ. ಅವರು ಈ ವಿಚಾರದಲ್ಲಿ ಅಕ್ಷರಶಃ ಏಕಾಂಗಿಯಾದರು’ ಎಂದೂ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>