
ಹೊಲದಲ್ಲಿ ಬೆಳೆದಿರುವ ಎಳ್ಳಿನ ಗಿಡಗಳು
ಚಿತ್ರ: ಪ್ರಜಾವಾಣಿ
ಮಕರ ಸಂಕ್ರಾಂತಿಯಲ್ಲಿ ಚಳಿಗಾಲದ ಶುಷ್ಕತೆ ಗರಿಷ್ಠ ಮಟ್ಟದಲ್ಲಿರುತ್ತದೆ. ಈ ವೇಳೆ ರೋಗನಿರೋಧಕ ಶಕ್ತಿ ಕ್ಷೀಣಿಸುವುದರಿಂದ ದೇಹಕ್ಕೆ ಹೆಚ್ಚಿನ ಖನಿಜಗಳ ಅಗತ್ಯವಿರುತ್ತದೆ. ಎಳ್ಳಿನಲ್ಲಿರುವ ಸತು, ಸೆಲೆನಿಯಮ್ ಮತ್ತು ಮೆಗ್ನೀಷಿಯಮ್ ರೋಗನಿರೋಧಕತೆಯನ್ನು ಹೆಚ್ಚಿಸುತ್ತದೆ. ಎಳ್ಳಿನಲ್ಲಿರುವ ಎಣ್ಣೆಯ ಅಂಶ ದೇಹಕ್ಕೆ ಮೃದುತ್ವವನ್ನು ನೀಡುತ್ತದೆ.ಸುಪರ್ಣಾ ಮುಖರ್ಜಿ, ಕ್ಲಿನಿಕಲ್ ನ್ಯೂಟ್ರಿಷನ್, ನಾರಾಯಣ ಹೆಲ್ತ್ ಸಿಟಿ, ಬೆಂಗಳೂರು
ಹೂ ಕಾಯುತ್ತೀರುವ ಎಳ್ಳಿನ ಗಿಡಗಳು
ಚಿತ್ರ:ಪ್ರಜಾವಾಣಿ
ಎಳ್ಳನ್ನು ಎಲ್ಲ ರೀತಿಯ ಮಣ್ಣುಗಳಲ್ಲಿ ಬೆಳೆಯಬಹುದಾಗಿದೆ. ಆದರೆ ನೀರು ನಿಲ್ಲುವ ಜೌಗು ಮಣ್ಣಿನ ಪ್ರದೇಶ ಸೂಕ್ತವಲ್ಲ. ಮಳೆ ಬೀಳುವ ಪ್ರದೇಶಗಳಾದರೆ ಏಪ್ರಿಲ್ ಎರಡನೆಯ ವಾರದಿಂದ ಮೇ ಎರಡನೆಯ ವಾರದವರೆಗೆ ಮತ್ತು ಹಿಂಗಾರು ಭತ್ತದ ಗದ್ದೆಯಲ್ಲಿ ನವೆಂಬರ್ ಮೊದಲನೆಯ ವಾರದಿಂದ ಜನವರಿ ಕೊನೆಯ ವಾರದವರೆಗೆ ಬಿತ್ತನೆಯನ್ನು ಮಾಡಬಹುದು. ಎಳ್ಳು ವ್ಯರ್ಥ ಭೂಮಿಯಲ್ಲಿಯೂ ಬೆಳೆಯುತ್ತದೆ ಎಂಬುದು ವಿಶೇಷ.ಡಾ. ಯಮನೂರ, ತಳಿ ತಜ್ಞರು, ಜಿಕೆವಿಕೆ, ಬೆಂಗಳೂರು.
ಮಕರ ಸಂಕ್ರಾಂತಿ ವರ್ಷವನ್ನು ಉತ್ತರಾಯಣ ಮತ್ತು ದಕ್ಷಿಣಾಯಣ ಎಂಬ ಎರಡು ಭಾಗ ಮಾಡುತ್ತದೆ. ದಕ್ಷಿಣಾಯಣ ಪಿತೃಗಳಿಗೆ, ಉತ್ತರಾಯಣ ದೇವತೆಗಳಿಗೆ ಸಂಬಂಧಿಸಿದೆ. ದಕ್ಷಿಣಾಯಣ ಎಳ್ಳನ್ನು, ಉತ್ತರಾಯಣ ಬೆಲ್ಲವನ್ನು ಸೂಚಿಸುತ್ತದೆ. ದಕ್ಷಿಣಾಯಣ ಮುಗಿದು, ಉತ್ತರಾಯಣ ಆರಂಭವಾಗುವುದರಿಂದ ಎಳ್ಳು ಅಂತ್ಯ, ಬೆಲ್ಲ ಆರಂಭವೆಂದು ಶಾಸ್ತ್ರಗಳ ಮೂಲಕ ಅರ್ಥೈಸಿಕೊಳ್ಳಬಹುದು.ರಾಮಚಂದ್ರ ಭಟ್ಟ ಕೆಕ್ಕಾರು, ಜ್ಯೋತಿಷಿಗಳು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.