<p>ಮುಂಜಾನೆ ವಾಕಿಂಗ್ ಹೋದಾಗ ಬಸ್ಸ್ಟ್ಯಾಂಡ್ ಬಳಿ ಚಿಕ್ಕೇಶಿ ಮತ್ತು ಗುಂಡಣ್ಣ ಎದುರಾದರು. ಚಿಕ್ಕೇಶಿ ಹಣೆಗೆ ಬ್ಯಾಂಡೇಜು, ಗುಂಡಣ್ಣ ಕುಂಟುತ್ತಿದ್ದ!</p>.<p>‘ಮೊನ್ನೆ ಊರಿಗೆ ಬೋರ್ವೆಲ್ಲು, ಆಸ್ಪತ್ರೆ ಮಂಜೂರು ಮಾಡಿಸಿಕೊಳ್ಳಲು ಬೆಂಗ್ಳೂರಿಗೆ ಹೋಗ್ತೀವಿ ಅಂದಿದ್ರಿ. ನೋಡಿದ್ರೆ ಹೊಡೆದಾಟಕ್ಕೆ ಹೋಗಿ ಬಂದೋರ ಥರಾ ಕಾಣ್ತಿದೆ’ ಎಂದೆ.</p>.<p>‘ನಾವು ಬೆಂಗ್ಳೂರಿಗೆ ಹೋದಾಗ ನಮ್ಮ ಎಮ್ಮೆಲ್ಲೆ ಯಾವ್ದೋ ರೆಸಾರ್ಟ್ನಲ್ಲಿದ್ರು. ಪಕ್ಕದ ಊರಿಗೆ ಕರೆದೊಯ್ದು ಜಾತ್ರೆ ಬಾಡೂಟ ಹಾಕಿಸಿದ್ರು’ ಎಂದ ಚಿಕ್ಕೇಶಿ.</p>.<p>‘ಆಮೇಲೆ?’</p>.<p>‘ಸಂಜೆ ವಿಧಾನಸೌಧಕ್ಕೆ ಹೋದೆವು. ಮೆಟ್ಟಿಲು ಬಳಿ ಜನಜಂಗುಳಿ. ಒಬ್ಬ ಮಂತ್ರಿಗೂ ಎಮ್ಮೆಲ್ಲೆಗೂ ಜಗಳ, ಒಬ್ಬ ಎಮ್ಮೆಲ್ಲೇನ ಕೊರಳಪಟ್ಟಿ ಹಿಡಿದು ಎಳೆದಾಡ್ತಿದ್ರು!’</p>.<p>‘ನಿಮ್ಮ ಎಮ್ಮೆಲ್ಲೆ ಬರಲಿಲ್ವೆ?’</p>.<p>‘ನೀವು ಹೋಗಿರಿ, ಮೀಟಿಂಗ್ ಮುಗಿ<br />ಸ್ಕೊಂಡು ಬರ್ತೀನೀಂದ್ರು’ ಎಂದ ಗುಂಡಣ್ಣ.</p>.<p>‘ಇದ್ಯಾಕೋ ಬ್ಯಾಂಡೇಜು?’</p>.<p>‘ಎಮ್ಮೆಲ್ಲೇನ ಮೊದಲ ಮಹಡಿಯಿಂದ ಮೂರನೇ ಮಹಡಿಗೆ ತಳ್ಳಿಕೊಂಡು ಹೋದಾಗ ಗುಂಡಣ್ಣ ಮೆಟ್ಟಿಲು ಬಳಿ ಬಿದ್ದ. ಪೊಲೀಸರ ಲಾಠಿ ನನ್ನ ಹಣೆಗೆ ಬಿತ್ತು. ಹೇಗೋ ಪಾರಾಗಿ ರಾತ್ರಿ ಬಸ್ ಹತ್ಕೊಂಡು ಬಂದೆವು’.</p>.<p>‘ಬನ್ನಿ, ಕಾಫಿ ಕುಡಿಯೋಣ’ ಎಂದು ಮನೆಗೆ ಕರೆತಂದೆ. ದಿನಪತ್ರಿಕೆಯಲ್ಲಿ ಕ್ರಿಕೆಟ್ ಸುದ್ದಿ ನೋಡಿ ‘ವರ್ಲ್ಡ್ಕಪ್ ಕ್ರಿಕೆಟಲ್ಲಿ ಶಿಖರ್ ಧವನ್ನ ರಿಟೈರ್ಡ್ ಹರ್ಟ್ ಆದ ಹಾಗೆ ನೀನು ಬೆಂಗಳೂರಿಂದ ರಿಟರ್ನ್ಡ್ ಹರ್ಟ್!’ ಎಂದೆ.</p>.<p>ಮಗ ಕೆಣಕಿದ- ‘ಡ್ಯಾಡೀ, ಬೆಂಗಳೂರಿನ ಘಟನೆಗಳಿಗೂ ಮ್ಯಾಂಚೆಸ್ಟರ್ ಕ್ರಿಕೆಟ್ ಸೆಮಿಫೈನಲ್ಗೂ ಏನಾದ್ರೂ ಸಾಮ್ಯತೆ?’</p>.<p>‘ಅಲ್ಲಿ ವಿಕೆಟ್ ಬಿದ್ದಂತೆ ಇಲ್ಲಿ ಕರ್ನಾಟಕದ ಮಾನ ಹೋಯಿತಲ್ಲಾ!’ ಎಂದೆ.</p>.<p>‘ಶಾಸನ ರೂಪಿಸುವ ಶಾಸನ ಭವನದಲ್ಲೇ ಶಾಸಕನ ಮೇಲೆ ದೌರ್ಜನ್ಯ...! ನಮ್ಮ ಮೂವರು ಆರಂಭಿಕ ಬ್ಯಾಟ್ಸ್ಮನ್ಗಳೂ ಒಂದೊಂದು ರನ್ ಹೊಡೆದದ್ದು; 5 ರನ್ ಗಳಿಸುವಷ್ಟರಲ್ಲಿ ಕ್ಯಾಪ್ಟನ್ ಸಹಿತ ಮೂವರು ಪೆವಿಲಿಯನ್ಗೆ ಮರಳಿದ್ದು!’- ಮಗ ಕಣ್ಣುಹೊಡೆದ!</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮುಂಜಾನೆ ವಾಕಿಂಗ್ ಹೋದಾಗ ಬಸ್ಸ್ಟ್ಯಾಂಡ್ ಬಳಿ ಚಿಕ್ಕೇಶಿ ಮತ್ತು ಗುಂಡಣ್ಣ ಎದುರಾದರು. ಚಿಕ್ಕೇಶಿ ಹಣೆಗೆ ಬ್ಯಾಂಡೇಜು, ಗುಂಡಣ್ಣ ಕುಂಟುತ್ತಿದ್ದ!</p>.<p>‘ಮೊನ್ನೆ ಊರಿಗೆ ಬೋರ್ವೆಲ್ಲು, ಆಸ್ಪತ್ರೆ ಮಂಜೂರು ಮಾಡಿಸಿಕೊಳ್ಳಲು ಬೆಂಗ್ಳೂರಿಗೆ ಹೋಗ್ತೀವಿ ಅಂದಿದ್ರಿ. ನೋಡಿದ್ರೆ ಹೊಡೆದಾಟಕ್ಕೆ ಹೋಗಿ ಬಂದೋರ ಥರಾ ಕಾಣ್ತಿದೆ’ ಎಂದೆ.</p>.<p>‘ನಾವು ಬೆಂಗ್ಳೂರಿಗೆ ಹೋದಾಗ ನಮ್ಮ ಎಮ್ಮೆಲ್ಲೆ ಯಾವ್ದೋ ರೆಸಾರ್ಟ್ನಲ್ಲಿದ್ರು. ಪಕ್ಕದ ಊರಿಗೆ ಕರೆದೊಯ್ದು ಜಾತ್ರೆ ಬಾಡೂಟ ಹಾಕಿಸಿದ್ರು’ ಎಂದ ಚಿಕ್ಕೇಶಿ.</p>.<p>‘ಆಮೇಲೆ?’</p>.<p>‘ಸಂಜೆ ವಿಧಾನಸೌಧಕ್ಕೆ ಹೋದೆವು. ಮೆಟ್ಟಿಲು ಬಳಿ ಜನಜಂಗುಳಿ. ಒಬ್ಬ ಮಂತ್ರಿಗೂ ಎಮ್ಮೆಲ್ಲೆಗೂ ಜಗಳ, ಒಬ್ಬ ಎಮ್ಮೆಲ್ಲೇನ ಕೊರಳಪಟ್ಟಿ ಹಿಡಿದು ಎಳೆದಾಡ್ತಿದ್ರು!’</p>.<p>‘ನಿಮ್ಮ ಎಮ್ಮೆಲ್ಲೆ ಬರಲಿಲ್ವೆ?’</p>.<p>‘ನೀವು ಹೋಗಿರಿ, ಮೀಟಿಂಗ್ ಮುಗಿ<br />ಸ್ಕೊಂಡು ಬರ್ತೀನೀಂದ್ರು’ ಎಂದ ಗುಂಡಣ್ಣ.</p>.<p>‘ಇದ್ಯಾಕೋ ಬ್ಯಾಂಡೇಜು?’</p>.<p>‘ಎಮ್ಮೆಲ್ಲೇನ ಮೊದಲ ಮಹಡಿಯಿಂದ ಮೂರನೇ ಮಹಡಿಗೆ ತಳ್ಳಿಕೊಂಡು ಹೋದಾಗ ಗುಂಡಣ್ಣ ಮೆಟ್ಟಿಲು ಬಳಿ ಬಿದ್ದ. ಪೊಲೀಸರ ಲಾಠಿ ನನ್ನ ಹಣೆಗೆ ಬಿತ್ತು. ಹೇಗೋ ಪಾರಾಗಿ ರಾತ್ರಿ ಬಸ್ ಹತ್ಕೊಂಡು ಬಂದೆವು’.</p>.<p>‘ಬನ್ನಿ, ಕಾಫಿ ಕುಡಿಯೋಣ’ ಎಂದು ಮನೆಗೆ ಕರೆತಂದೆ. ದಿನಪತ್ರಿಕೆಯಲ್ಲಿ ಕ್ರಿಕೆಟ್ ಸುದ್ದಿ ನೋಡಿ ‘ವರ್ಲ್ಡ್ಕಪ್ ಕ್ರಿಕೆಟಲ್ಲಿ ಶಿಖರ್ ಧವನ್ನ ರಿಟೈರ್ಡ್ ಹರ್ಟ್ ಆದ ಹಾಗೆ ನೀನು ಬೆಂಗಳೂರಿಂದ ರಿಟರ್ನ್ಡ್ ಹರ್ಟ್!’ ಎಂದೆ.</p>.<p>ಮಗ ಕೆಣಕಿದ- ‘ಡ್ಯಾಡೀ, ಬೆಂಗಳೂರಿನ ಘಟನೆಗಳಿಗೂ ಮ್ಯಾಂಚೆಸ್ಟರ್ ಕ್ರಿಕೆಟ್ ಸೆಮಿಫೈನಲ್ಗೂ ಏನಾದ್ರೂ ಸಾಮ್ಯತೆ?’</p>.<p>‘ಅಲ್ಲಿ ವಿಕೆಟ್ ಬಿದ್ದಂತೆ ಇಲ್ಲಿ ಕರ್ನಾಟಕದ ಮಾನ ಹೋಯಿತಲ್ಲಾ!’ ಎಂದೆ.</p>.<p>‘ಶಾಸನ ರೂಪಿಸುವ ಶಾಸನ ಭವನದಲ್ಲೇ ಶಾಸಕನ ಮೇಲೆ ದೌರ್ಜನ್ಯ...! ನಮ್ಮ ಮೂವರು ಆರಂಭಿಕ ಬ್ಯಾಟ್ಸ್ಮನ್ಗಳೂ ಒಂದೊಂದು ರನ್ ಹೊಡೆದದ್ದು; 5 ರನ್ ಗಳಿಸುವಷ್ಟರಲ್ಲಿ ಕ್ಯಾಪ್ಟನ್ ಸಹಿತ ಮೂವರು ಪೆವಿಲಿಯನ್ಗೆ ಮರಳಿದ್ದು!’- ಮಗ ಕಣ್ಣುಹೊಡೆದ!</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>