‘ಎಮ್ಮೆಲ್ಲೇನ ಮೊದಲ ಮಹಡಿಯಿಂದ ಮೂರನೇ ಮಹಡಿಗೆ ತಳ್ಳಿಕೊಂಡು ಹೋದಾಗ ಗುಂಡಣ್ಣ ಮೆಟ್ಟಿಲು ಬಳಿ ಬಿದ್ದ. ಪೊಲೀಸರ ಲಾಠಿ ನನ್ನ ಹಣೆಗೆ ಬಿತ್ತು. ಹೇಗೋ ಪಾರಾಗಿ ರಾತ್ರಿ ಬಸ್ ಹತ್ಕೊಂಡು ಬಂದೆವು’.
‘ಬನ್ನಿ, ಕಾಫಿ ಕುಡಿಯೋಣ’ ಎಂದು ಮನೆಗೆ ಕರೆತಂದೆ. ದಿನಪತ್ರಿಕೆಯಲ್ಲಿ ಕ್ರಿಕೆಟ್ ಸುದ್ದಿ ನೋಡಿ ‘ವರ್ಲ್ಡ್ಕಪ್ ಕ್ರಿಕೆಟಲ್ಲಿ ಶಿಖರ್ ಧವನ್ನ ರಿಟೈರ್ಡ್ ಹರ್ಟ್ ಆದ ಹಾಗೆ ನೀನು ಬೆಂಗಳೂರಿಂದ ರಿಟರ್ನ್ಡ್ ಹರ್ಟ್!’ ಎಂದೆ.
ಮಗ ಕೆಣಕಿದ- ‘ಡ್ಯಾಡೀ, ಬೆಂಗಳೂರಿನ ಘಟನೆಗಳಿಗೂ ಮ್ಯಾಂಚೆಸ್ಟರ್ ಕ್ರಿಕೆಟ್ ಸೆಮಿಫೈನಲ್ಗೂ ಏನಾದ್ರೂ ಸಾಮ್ಯತೆ?’
‘ಅಲ್ಲಿ ವಿಕೆಟ್ ಬಿದ್ದಂತೆ ಇಲ್ಲಿ ಕರ್ನಾಟಕದ ಮಾನ ಹೋಯಿತಲ್ಲಾ!’ ಎಂದೆ.
‘ಶಾಸನ ರೂಪಿಸುವ ಶಾಸನ ಭವನದಲ್ಲೇ ಶಾಸಕನ ಮೇಲೆ ದೌರ್ಜನ್ಯ...! ನಮ್ಮ ಮೂವರು ಆರಂಭಿಕ ಬ್ಯಾಟ್ಸ್ಮನ್ಗಳೂ ಒಂದೊಂದು ರನ್ ಹೊಡೆದದ್ದು; 5 ರನ್ ಗಳಿಸುವಷ್ಟರಲ್ಲಿ ಕ್ಯಾಪ್ಟನ್ ಸಹಿತ ಮೂವರು ಪೆವಿಲಿಯನ್ಗೆ ಮರಳಿದ್ದು!’- ಮಗ ಕಣ್ಣುಹೊಡೆದ!