‘ನರಭಕ್ಷಕ ಚಿರತೆಗೆ ಕಂಡಲ್ಲಿ ಗುಂಡು ಹಾರಿಸಿ’ ಎಂಬ ಸಚಿವರ ಹೇಳಿಕೆಗೆ ಭಾರಿ ವಿರೋಧ ವ್ಯಕ್ತಪಡಿಸಿದ ವನ್ಯಮೃಗಗಳು ಒಗ್ಗಟ್ಟಾಗಿ ‘ಕಾಡು ಕಡಿದು, ನಾಡು ಮಾಡಿ, ನಮಗೆ ಹೊಟ್ಟೆಗೇನೂ ಸಿಗದೆ ನರಭಕ್ಷಕರಾಗುವಂತೆ ಮಾಡಿದ ಅರಣ್ಯಭಕ್ಷಕರಿಗೆ ಮತ್ತು ಡೆಲ್ಲಿಯಲ್ಲಿ ರಾಜಾರೋಷವಾಗಿಯೇ ಓಡಾಡುತ್ತಿರುವ ನರಭಕ್ಷಕ ನರರಿಗೆ ಮೊದಲು ಕೈಕೋಳ ತೊಡಿಸಿ’ ಎಂದು ಸುಪ್ರೀಂ ಕೋರ್ಟಿನ ಮೆಟ್ಟಿಲೇರಲು ನಿರ್ಧರಿಸಿವೆ ಎಂಬ ರೋಚಕ ಸುದ್ದಿಯನ್ನು ಓದುತ್ತ ಕೂತಿದ್ದೆ.