‘ಅಣೈ, ಅದು ನೀರಿನ ಬಾವಿ ಅಲ್ಲ, ಅಧ್ಯಕ್ಸರ ಪೀಠದ ಮುಂದಿರೋ ಖಾಲಿ ಜಾಗ. ಅಲ್ಲಿ ನಿಂತುಗಂಡು ಗಲಾಟೆ ಮಾಡಿ ಸ್ವಂತ ಕಾಯಕಕ್ಕೆ ಕಡೆದು ಹೊಂಟೋಗ್ಯವ್ರೆ. ಇಲ್ಲಿ ಕಾಣ್ತಿರೋ ಕಾರುಗಳು ಶಾಸಕರು, ಮಂತ್ರಿಗಳ ಚೋಟಾಳು, ಮೋಟಾಳುಗಳದ್ದು’ ಅಂದ ಚಂದ್ರು.
‘ಅಸೋಕಣ್ಣ ‘ನಮ್ಮ ಹಲ್ಲಂಡೆಕೋರರು ಪಕ್ಸಾನೇ ಕೊಲ್ತಾವ್ರೆ. ಅಧಿಕಾರ ಇದ್ರೂ ಕಷ್ಟ, ಇಲ್ಲದಿದ್ರೂ ಕಷ್ಟ. ಇವುಕ್ಕೆ ಬಾಯಿಬೀಗ ಹಾಕದು ಯಂಗೆ?’ ಅಂತ ತಲೆ ಮ್ಯಾಲೆ ಕೈಹೊತುಗಂಡು ಕೂತದೆ. ಕೈ ಪಕ್ಸದ್ದೂ ಇದೇ ಕಥೆ’ ನಾನು ವಿಷಾದ ವ್ಯಕ್ತಪಡಿಸಿದೆ.
‘ಅಲ್ಲ ಕನಣೈ, ಸುಳ್ಳು ಪತ್ತೆ ಮಾಡಕ್ಕೆ ಸರ್ಕಾರ ಐದು ಸಂಸ್ಥೆ ನೇಮಕ ಮಾಡ್ಯದಂತೆ. ಅವ್ಯಾಕೆ ಬೇಕಿತ್ತು? ಯಾವತ್ತೂ ಸತ್ಯ ನುಡಿದೇ ಇರೋ ರಾಜಕೀಯದವುಕ್ಕೆ ಏನೆನ್ನಬೈದು?’ ಚಂದ್ರು ವಿಷಯಾಂತರ ಮಾಡಿದ.
‘ಅವುಕ್ಕೆ ಇನ್ನೇನಂದರ್ಲಾ? ಅನಾಯಕತ್ವದ ನಾಯಕರು ಅನ್ನಬೈದಷ್ಟೀಯೆ!’ ತುರೇಮಣೆ ಲೇವಡಿ ಮಾಡಿದರು.