<p>ಚಟ್ನಿಹಳ್ಳಿಯಲ್ಲಿ ಹಲವು ಮನೆಗಳಿಗೆ ಬೀಗ ಬಿದ್ದಿತ್ತು. ಅಲ್ಲೊಂದು ಇಲ್ಲೊಂದು ಮನೆಯಲ್ಲಿ ವಯಸ್ಸಾದವರು, ಕೈಲಾಗದವರು ಉಳಿದಿದ್ದರು.</p>.<p>ಮೈಕ್ರೊ ಫೈನಾನ್ಸ್ ಸಂಸ್ಥೆಗಳಿಂದ ಸಾಲ ಪಡೆದವರು ತೀರಿಸಲಾಗದೆ, ಅವರ ಕಿರುಕುಳ ತಾಳಲಾಗದೆ ರಾತ್ರೋರಾತ್ರಿ ಹೆಂಡತಿ, ಮಕ್ಕಳೊಂದಿಗೆ ಊರು ಬಿಟ್ಟಿದ್ದರು. ಎಲ್ಲಿಗೆ ಹೋದರು, ಏನಾದರು ಅಂತ ಗೊತ್ತಿಲ್ಲ. ಕಾಣೆಯಾದವರ ಬಗ್ಗೆ ಕಂಪ್ಲೇಂಟ್ ಕೊಡುವವರೂ ಇಲ್ಲ.</p>.<p>ಪೊಲೀಸರು ಊರಿನಲ್ಲಿ ಗಸ್ತು ಮಾಡುತ್ತಿದ್ದರು. ವರದಿ ಮಾಡಲು ಸರ್ಕಾರಿ ಅಧಿಕಾರಿಗಳು ಚಟ್ನಿಹಳ್ಳಿಗೆ ಬಂದರು.</p>.<p>ಮನೆಯಲ್ಲಿದ್ದ ತಿಮ್ಮಜ್ಜ, ತಿಮ್ಮಜ್ಜಿ ಬಳಿಗೆ ಬಂದ ಅಧಿಕಾರಿಗಳು, ‘ಯಾಕೆ ಜನ ಊರು ಬಿಟ್ಟಿದ್ದಾರೆ?’ ಕೇಳಿದರು.</p>.<p>‘ದೊಡ್ಡವರು ದೊಡ್ಡ ಸಾಲ ಮಾಡಿಕೊಂಡು ದೇಶ ಬಿಟ್ರು, ಸಣ್ಣವರು ಸಣ್ಣ ಸಾಲ ಮಾಡಿಕೊಂಡು ಊರು ಬಿಟ್ರು...’ ತಿಮ್ಮಜ್ಜ ಒಗಟಿನಂಥಾ ಉತ್ತರ ಕೊಟ್ಟ.</p>.<p>‘ದನಕರುಗಳನ್ನು ಕೊಟ್ಟಿಗೆಯಲ್ಲಿ ಕಟ್ಟಿ ಹೋಗಿದ್ದಾರೆ, ಹುಲ್ಲುನೀರಿಲ್ಲದೆ ಅವು ‘ಅಂಬಾ...’ ಅನ್ತಿವೆ...’ ತಿಮ್ಮಜ್ಜಿಗೆ ಕರುಳು ಚುರುಕ್ ಅಂದಿತು.</p>.<p>‘ಮೈಕ್ರೊ ಫೈನಾನ್ಸ್ ಕಂಪನಿಗಳ ಬಳಿ ಜನ ಸಾಲ ಮಾಡಬಾರದಾಗಿತ್ತು...’ ಅಂದ್ರು ಅಧಿಕಾರಿ.</p>.<p>‘ಸಾಲ ಕೊಡ್ತೀವಿ ತಗೊಳ್ಳಿ ಅಂತ ಮನೆ ಬಾಗಿಲಿಗೆ ಬಂದರೆ ಯಾರು ಬೇಡ ಅಂತಾರೆ? ಈಸ್ಕೊಂಡ್ರು, ಖರ್ಚು ಮಾಡಿಕೊಂಡ್ರು’.</p>.<p>‘ಫೈನಾನ್ಸ್ನವರು ಜನರಿಗೆ ಕಿರುಕುಳ ಕೊಡ್ತಿದ್ರಾ?’</p>.<p>‘ಕೊಡದೇ ಇರ್ತಾರಾ? ಹೆಂಡ್ತಿ ತಾಳಿ ಮಾರಿ ದುಡ್ಡು ಕೊಡು ಅಂದ್ರು, ಸತ್ಯ ಹರಿಶ್ಚಂದ್ರ ಹೆಂಡ್ತಿಮಕ್ಕಳನ್ನು ಮಾರಿ ವಿಶ್ವಾಮಿತ್ರನ ಸಾಲ ತೀರಿಸಿದ, ನೀವೂ ಹಾಗೇ ಮಾಡಿ ಅಂತ ಮನೆ ಮುಂದೆ ಕೂಗಾಡಿದರು. ನಮ್ಮೂರಿನವರು ಹೆಂಡ್ತಿ ಮಕ್ಕಳನ್ನು ಮಾರುವಂತಹ ಹರಿಶ್ಚಂದ್ರರಲ್ಲ ಸಾರ್’ ತಿಮ್ಮಜ್ಜಿ ಹೇಳಿದಳು.</p>.<p>‘ಕುಟುಂಬದ ಯಜಮಾನನಿಗೆ ಸಾಲ ನೀಡುವ ‘ಸಾಲಲಕ್ಷ್ಮಿ’ ಯೋಜನೆ ಜಾರಿ ಮಾಡಿ ಸಂಕಷ್ಟ ನಿವಾರಣೆ ಮಾಡಲು ಸರ್ಕಾರಕ್ಕೆ ಹೇಳಿ ಸಾರ್...’ ತಿಮ್ಮಜ್ಜ ಮನವಿ ಮಾಡಿದ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಚಟ್ನಿಹಳ್ಳಿಯಲ್ಲಿ ಹಲವು ಮನೆಗಳಿಗೆ ಬೀಗ ಬಿದ್ದಿತ್ತು. ಅಲ್ಲೊಂದು ಇಲ್ಲೊಂದು ಮನೆಯಲ್ಲಿ ವಯಸ್ಸಾದವರು, ಕೈಲಾಗದವರು ಉಳಿದಿದ್ದರು.</p>.<p>ಮೈಕ್ರೊ ಫೈನಾನ್ಸ್ ಸಂಸ್ಥೆಗಳಿಂದ ಸಾಲ ಪಡೆದವರು ತೀರಿಸಲಾಗದೆ, ಅವರ ಕಿರುಕುಳ ತಾಳಲಾಗದೆ ರಾತ್ರೋರಾತ್ರಿ ಹೆಂಡತಿ, ಮಕ್ಕಳೊಂದಿಗೆ ಊರು ಬಿಟ್ಟಿದ್ದರು. ಎಲ್ಲಿಗೆ ಹೋದರು, ಏನಾದರು ಅಂತ ಗೊತ್ತಿಲ್ಲ. ಕಾಣೆಯಾದವರ ಬಗ್ಗೆ ಕಂಪ್ಲೇಂಟ್ ಕೊಡುವವರೂ ಇಲ್ಲ.</p>.<p>ಪೊಲೀಸರು ಊರಿನಲ್ಲಿ ಗಸ್ತು ಮಾಡುತ್ತಿದ್ದರು. ವರದಿ ಮಾಡಲು ಸರ್ಕಾರಿ ಅಧಿಕಾರಿಗಳು ಚಟ್ನಿಹಳ್ಳಿಗೆ ಬಂದರು.</p>.<p>ಮನೆಯಲ್ಲಿದ್ದ ತಿಮ್ಮಜ್ಜ, ತಿಮ್ಮಜ್ಜಿ ಬಳಿಗೆ ಬಂದ ಅಧಿಕಾರಿಗಳು, ‘ಯಾಕೆ ಜನ ಊರು ಬಿಟ್ಟಿದ್ದಾರೆ?’ ಕೇಳಿದರು.</p>.<p>‘ದೊಡ್ಡವರು ದೊಡ್ಡ ಸಾಲ ಮಾಡಿಕೊಂಡು ದೇಶ ಬಿಟ್ರು, ಸಣ್ಣವರು ಸಣ್ಣ ಸಾಲ ಮಾಡಿಕೊಂಡು ಊರು ಬಿಟ್ರು...’ ತಿಮ್ಮಜ್ಜ ಒಗಟಿನಂಥಾ ಉತ್ತರ ಕೊಟ್ಟ.</p>.<p>‘ದನಕರುಗಳನ್ನು ಕೊಟ್ಟಿಗೆಯಲ್ಲಿ ಕಟ್ಟಿ ಹೋಗಿದ್ದಾರೆ, ಹುಲ್ಲುನೀರಿಲ್ಲದೆ ಅವು ‘ಅಂಬಾ...’ ಅನ್ತಿವೆ...’ ತಿಮ್ಮಜ್ಜಿಗೆ ಕರುಳು ಚುರುಕ್ ಅಂದಿತು.</p>.<p>‘ಮೈಕ್ರೊ ಫೈನಾನ್ಸ್ ಕಂಪನಿಗಳ ಬಳಿ ಜನ ಸಾಲ ಮಾಡಬಾರದಾಗಿತ್ತು...’ ಅಂದ್ರು ಅಧಿಕಾರಿ.</p>.<p>‘ಸಾಲ ಕೊಡ್ತೀವಿ ತಗೊಳ್ಳಿ ಅಂತ ಮನೆ ಬಾಗಿಲಿಗೆ ಬಂದರೆ ಯಾರು ಬೇಡ ಅಂತಾರೆ? ಈಸ್ಕೊಂಡ್ರು, ಖರ್ಚು ಮಾಡಿಕೊಂಡ್ರು’.</p>.<p>‘ಫೈನಾನ್ಸ್ನವರು ಜನರಿಗೆ ಕಿರುಕುಳ ಕೊಡ್ತಿದ್ರಾ?’</p>.<p>‘ಕೊಡದೇ ಇರ್ತಾರಾ? ಹೆಂಡ್ತಿ ತಾಳಿ ಮಾರಿ ದುಡ್ಡು ಕೊಡು ಅಂದ್ರು, ಸತ್ಯ ಹರಿಶ್ಚಂದ್ರ ಹೆಂಡ್ತಿಮಕ್ಕಳನ್ನು ಮಾರಿ ವಿಶ್ವಾಮಿತ್ರನ ಸಾಲ ತೀರಿಸಿದ, ನೀವೂ ಹಾಗೇ ಮಾಡಿ ಅಂತ ಮನೆ ಮುಂದೆ ಕೂಗಾಡಿದರು. ನಮ್ಮೂರಿನವರು ಹೆಂಡ್ತಿ ಮಕ್ಕಳನ್ನು ಮಾರುವಂತಹ ಹರಿಶ್ಚಂದ್ರರಲ್ಲ ಸಾರ್’ ತಿಮ್ಮಜ್ಜಿ ಹೇಳಿದಳು.</p>.<p>‘ಕುಟುಂಬದ ಯಜಮಾನನಿಗೆ ಸಾಲ ನೀಡುವ ‘ಸಾಲಲಕ್ಷ್ಮಿ’ ಯೋಜನೆ ಜಾರಿ ಮಾಡಿ ಸಂಕಷ್ಟ ನಿವಾರಣೆ ಮಾಡಲು ಸರ್ಕಾರಕ್ಕೆ ಹೇಳಿ ಸಾರ್...’ ತಿಮ್ಮಜ್ಜ ಮನವಿ ಮಾಡಿದ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>