<p>‘ಟೀವಿ ಆನ್ ಮಾಡಿದ್ರೆ ಜಾಹೀರಾತುಗಳದ್ದೇ ರೋಸು. ಇವುಗಳ ಹೊಡೆತ ತಾಳಿಕ್ಯಂಡು ನ್ಯೂಸು ನೋಡಂಗಾಗದೆ’ ಅಂತ ನನ್ನ ನೋವು ತೋಡಿಕೊಂಡೆ.</p>.<p>‘ಜಾಹೀರಾತುಗಳ ಗೂಢಾರ್ಥ ಬ್ಯಾರೆ ಇರತವೆ ಕನೋ. ಪಾತ್ರೆ ತೊಳೆಯೋ ಸೋಪಿಗೆ ನೂರು ನಿಂಬೆಗಳ ಶಕ್ತಿ ಅದೆ ಅಂದ್ರೆ ಅದರಲ್ಲಿ ಜ್ಯೂಸ್ ಮಾಡಿಕ್ಯಂದು ಕುಡಿಯಕ್ಕಾದದೇ’ ಅಂತ ತುರೇಮಣೆ ವೇದಾಂತ ತೆಗೆದರು.</p>.<p>‘ಈ ಬೊಡ್ಡಿಹೈದನ ತಳ್ಳಿ ಮಾತು ಕೇಳಬೇಡ ಕಲಾ’ ಯಂಟಪ್ಪಣ್ಣ ಬುದ್ಧಿಮಾತು ಹೇಳಿತು. ಹೇಳಿದಂಗೆ ಕೇಳಕ್ಕೆ, ಮಾಡಕ್ಕೆ ನಾನೇನು ರಾಜಕೀಯದೋನಾ?</p>.<p>‘ಅದೇನೇಳಿ ಸಾ’ ಅಂತಂದೆ.</p>.<p>‘ಬೆಂಗಳೂರಗೆಲ್ಲಾ ಅಧಿಕಾರಿಗಳು, ರಾಜಕಾರಣಿಗಳು ನೂರಾರು ಅಕ್ರಮ ಜಾಹೀರಾತು ಬೋರ್ಡು ಹಾಕ್ಕ್ಯಂದಿರತರೆ. ಅದರಗೆ ಅವುರ ಪವರ್ ಕರಂಟಿನಂಗೆ ಪಾಸಾಯ್ತಾ ಇರತದೆ. ಅದನ್ನ ಮುಟ್ಟಿದೋನು ಭಸ್ಮ ಆಯ್ತನೆ’ ತುರೇಮಣೆ ಮಾತು ನನಗೆ ಅರ್ಥಾಗಲಿಲ್ಲ.</p>.<p>‘ಜಾಹೀರಾತು ಅರ್ಥ ಮಾಡಿಕ್ಯಳದು ಯಂಗೆ ಸಾ’ ಅಂದೆ.</p>.<p>‘ಒಬ್ಬ ಕೌಂಟರಲ್ಲಿ ನಿಂತಿರತನೆ. ‘ಎರಡೂ ಬಿಲ್ಲು ಪಾಸ್ ಮಾಡಿ ಅಣ್ಣ’ ಅಂದಾಗ, ಕೌಂಟರ<br>ಲ್ಲಿದ್ದೋನು ‘ನೋ ಸಾರ್’ ಅಂತನೆ. ‘ಒಂದು ಬಿಲ್ಲಾದ್ರೂ ಪಾಸ್ ಮಾಡಿ. ಆಗ ಪರ್ಸೆಂಟೇಜ್ ಜಾಸ್ತಿ ಇತ್ತು ಕೊಡಕ್ಕಾಗಲಿಲ್ಲ. ಈಗ ಕೊಡಕ್ಕೆ ಹಣ ಇಲ್ಲ’ ಅಂದ ಅಂತ ತಿಳಕೋ’ ಈ ವಿವರಣೆಯಿಂದ ನನ್ನ ತಲೆ ಗಿರ್ ಅಂತು.</p>.<p>‘ನಮಗೆ ರಾಜಕಾರಣಿಗಳದ್ದೇ ನೋವು ಜಾಸ್ತಿಯಾಗ್ಯದೆ. ನಡಂತರದೇಲಿ ನಿಂದು ಬ್ಯಾರೆ’ ಯಂಟಪ್ಪಣ್ಣ ರೇಗಿತು.</p>.<p>‘ಅಣೈ, ‘ನೋವುರಹಿತ ಜೀವನಕ್ಕಾಗಿ ಪೇನ್ ರಿಲೀಫ್ ತೈಲ ತಕ್ಕಳಿ’ ಅಂತ ಜಾಹೀರಾತಲ್ಲಿದ್ರೆ ನಿಮ್ಮ ರಾಜಕೀಯದ ನೋವಿಗೆ ಇದುನ್ನ ತಿಕ್ಕಿ<br>ಕಳಂಗಿಲ್ಲ’ ತುರೇಮಣೆ ಉವಾಚ.</p>.<p>‘ಜಾಹೀರಾತು ಅಂದರೇನರ್ಥ ಸಾ?’ ಅಂತ ಮಿಲಿಯನ್ ಡಾಲರ್ ಪ್ರಶ್ನೆ ಕೇಳಿದೆ.</p>.<p>‘ನಮ್ಮ ದುಡ್ಡಲ್ಲೇ ನಮಗೆ ಜಾದೂ ತೋರಿಸೋ ಮಾಯಕವೇ ಜಾಹೀರಾತು ಕಯ್ಯಾ. ಅದುಕ್ಕೆ ಠೂ ಬುಡಬಕು!’ ಅಂತ ಷರಾ ಬರೆದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ಟೀವಿ ಆನ್ ಮಾಡಿದ್ರೆ ಜಾಹೀರಾತುಗಳದ್ದೇ ರೋಸು. ಇವುಗಳ ಹೊಡೆತ ತಾಳಿಕ್ಯಂಡು ನ್ಯೂಸು ನೋಡಂಗಾಗದೆ’ ಅಂತ ನನ್ನ ನೋವು ತೋಡಿಕೊಂಡೆ.</p>.<p>‘ಜಾಹೀರಾತುಗಳ ಗೂಢಾರ್ಥ ಬ್ಯಾರೆ ಇರತವೆ ಕನೋ. ಪಾತ್ರೆ ತೊಳೆಯೋ ಸೋಪಿಗೆ ನೂರು ನಿಂಬೆಗಳ ಶಕ್ತಿ ಅದೆ ಅಂದ್ರೆ ಅದರಲ್ಲಿ ಜ್ಯೂಸ್ ಮಾಡಿಕ್ಯಂದು ಕುಡಿಯಕ್ಕಾದದೇ’ ಅಂತ ತುರೇಮಣೆ ವೇದಾಂತ ತೆಗೆದರು.</p>.<p>‘ಈ ಬೊಡ್ಡಿಹೈದನ ತಳ್ಳಿ ಮಾತು ಕೇಳಬೇಡ ಕಲಾ’ ಯಂಟಪ್ಪಣ್ಣ ಬುದ್ಧಿಮಾತು ಹೇಳಿತು. ಹೇಳಿದಂಗೆ ಕೇಳಕ್ಕೆ, ಮಾಡಕ್ಕೆ ನಾನೇನು ರಾಜಕೀಯದೋನಾ?</p>.<p>‘ಅದೇನೇಳಿ ಸಾ’ ಅಂತಂದೆ.</p>.<p>‘ಬೆಂಗಳೂರಗೆಲ್ಲಾ ಅಧಿಕಾರಿಗಳು, ರಾಜಕಾರಣಿಗಳು ನೂರಾರು ಅಕ್ರಮ ಜಾಹೀರಾತು ಬೋರ್ಡು ಹಾಕ್ಕ್ಯಂದಿರತರೆ. ಅದರಗೆ ಅವುರ ಪವರ್ ಕರಂಟಿನಂಗೆ ಪಾಸಾಯ್ತಾ ಇರತದೆ. ಅದನ್ನ ಮುಟ್ಟಿದೋನು ಭಸ್ಮ ಆಯ್ತನೆ’ ತುರೇಮಣೆ ಮಾತು ನನಗೆ ಅರ್ಥಾಗಲಿಲ್ಲ.</p>.<p>‘ಜಾಹೀರಾತು ಅರ್ಥ ಮಾಡಿಕ್ಯಳದು ಯಂಗೆ ಸಾ’ ಅಂದೆ.</p>.<p>‘ಒಬ್ಬ ಕೌಂಟರಲ್ಲಿ ನಿಂತಿರತನೆ. ‘ಎರಡೂ ಬಿಲ್ಲು ಪಾಸ್ ಮಾಡಿ ಅಣ್ಣ’ ಅಂದಾಗ, ಕೌಂಟರ<br>ಲ್ಲಿದ್ದೋನು ‘ನೋ ಸಾರ್’ ಅಂತನೆ. ‘ಒಂದು ಬಿಲ್ಲಾದ್ರೂ ಪಾಸ್ ಮಾಡಿ. ಆಗ ಪರ್ಸೆಂಟೇಜ್ ಜಾಸ್ತಿ ಇತ್ತು ಕೊಡಕ್ಕಾಗಲಿಲ್ಲ. ಈಗ ಕೊಡಕ್ಕೆ ಹಣ ಇಲ್ಲ’ ಅಂದ ಅಂತ ತಿಳಕೋ’ ಈ ವಿವರಣೆಯಿಂದ ನನ್ನ ತಲೆ ಗಿರ್ ಅಂತು.</p>.<p>‘ನಮಗೆ ರಾಜಕಾರಣಿಗಳದ್ದೇ ನೋವು ಜಾಸ್ತಿಯಾಗ್ಯದೆ. ನಡಂತರದೇಲಿ ನಿಂದು ಬ್ಯಾರೆ’ ಯಂಟಪ್ಪಣ್ಣ ರೇಗಿತು.</p>.<p>‘ಅಣೈ, ‘ನೋವುರಹಿತ ಜೀವನಕ್ಕಾಗಿ ಪೇನ್ ರಿಲೀಫ್ ತೈಲ ತಕ್ಕಳಿ’ ಅಂತ ಜಾಹೀರಾತಲ್ಲಿದ್ರೆ ನಿಮ್ಮ ರಾಜಕೀಯದ ನೋವಿಗೆ ಇದುನ್ನ ತಿಕ್ಕಿ<br>ಕಳಂಗಿಲ್ಲ’ ತುರೇಮಣೆ ಉವಾಚ.</p>.<p>‘ಜಾಹೀರಾತು ಅಂದರೇನರ್ಥ ಸಾ?’ ಅಂತ ಮಿಲಿಯನ್ ಡಾಲರ್ ಪ್ರಶ್ನೆ ಕೇಳಿದೆ.</p>.<p>‘ನಮ್ಮ ದುಡ್ಡಲ್ಲೇ ನಮಗೆ ಜಾದೂ ತೋರಿಸೋ ಮಾಯಕವೇ ಜಾಹೀರಾತು ಕಯ್ಯಾ. ಅದುಕ್ಕೆ ಠೂ ಬುಡಬಕು!’ ಅಂತ ಷರಾ ಬರೆದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>