<p>‘ಪಿಎಸ್ಐ ಪರೀಕ್ಷೆ ಹಗರಣದ ಕಿಂಗ್ಪಿನ್, ಕ್ವೀನ್ಪಿನ್ಗಳು ಅರೆಸ್ಟ್ ಆದ್ರೇನ್ರೀ?’ ಅನು ಕೇಳಿದಳು.</p>.<p>‘ಇನ್ನಷ್ಟು ಪಿನ್ಗಳ ಬಗ್ಗೆ ತನಿಖೆ ನಡೆಯುತ್ತಿದೆಯಂತೆ. ಒಂದು ಗುಂಡುಪಿನ್ನೂ ತಪ್ಪಿಸಿಕೊಳ್ಳಲು ಬಿಡುವುದಿಲ್ಲ ಅಂತ ಹೋಂ ಮಿನಿಸ್ಟರ್ ಹೇಳಿದ್ದಾರೆ’ ಅಂದ ಗಿರಿ.</p>.<p>‘ಪರೀಕ್ಷೆಯಲ್ಲಿ ಇಂಥಾ ಕಾಪಿ ಚೇಷ್ಟೆ ಬೇಕಿತ್ತಾ? ನಮ್ಮ ಕಾಲದಲ್ಲಿ ವಿದ್ಯಾರ್ಥಿಗಳು ಕಾಪಿ ಹೊಡೆಯುವಾಗ ಸಿಕ್ಕಿಬಿದ್ದು ಡಿಬಾರ್ ಆಗ್ತಿದ್ರು, ಈಗ ಕಾಪಿ ಮಾಡಿಸಲು ಹೋಗಿ ಪರೀಕ್ಷಾ ಹೊಣೆಗಾರರೇ ಡಿಬಾರ್ ಆಗುವಂತಾಗಿದೆ. ಬೇಲಿಯೇ ಎದ್ದು ಹೊಲ ಮೇಯ್ದರೆ ಹೇಗೆ?’</p>.<p>‘ಆ ಬೇಲಿಯ ಕಾವಲಿಗೆ ಇನ್ನೊಂದು ಬೇಲಿ ಹಾಕಿ ಭದ್ರ ಮಾಡಬೇಕಷ್ಟೇ...’</p>.<p>‘ಆ ಬೇಲಿಯೂ ಮೇಯ್ದರೆ, ಅದರ ಕಾವಲಿಗೆ ಮತ್ತೊಂದು ಬೇಲಿ ಹಾಕಬೇಕೇನ್ರೀ? ಪರೀಕ್ಷಾರ್ಥಿಗಳಿಗಿಂತ ಪರೀಕ್ಷೆ ನಡೆಸುವವರನ್ನು ಕಾಯುವ ದುಃಸ್ಥಿತಿ ಬರಬಾರದು’.</p>.<p>‘ಪರೀಕ್ಷೆ ನಡೆಸುವವರಿಗೆ ಸತ್ಯಪರೀಕ್ಷೆ ನಡೆಸಿ, ಅದರಲ್ಲಿ ಪಾಸಾದವರನ್ನು ಪರೀಕ್ಷೆ ಕಾರ್ಯಕ್ಕೆ ನೇಮಿಸುವುದು ಸೂಕ್ತವೇನೋ’.</p>.<p>‘ಇವರಿಗೆ ಪರೀಕ್ಷೆ ನಡೆಸುವವರು ಸತ್ಯವಂತರು ಅನ್ನೋದು ಏನು ಗ್ಯಾರಂಟಿ? ಇದು ಸತ್ಯ ಹರಿಶ್ಚಂದ್ರನ ಕಾಲ ಅಲ್ಲ’.</p>.<p>‘ಪರೀಕ್ಷೆಯಲ್ಲಿ ಕಾಪಿ ತಡೆಯಲೊಂದು ಕಾವಲು, ಕಾವಲುಗಾರರನ್ನು ತಡೆಯಲು ಇನ್ನೊಂದು ಕಾವಲು, ಅಕ್ರಮ ಮಾಡಿ ತಪ್ಪಿಸಿ<br />ಕೊಂಡವರನ್ನು ಪತ್ತೆ ಮಾಡಿ ಹಿಡಿಯಲು, ಹಿಡಿದ ಮೇಲೆ ಕೇಸು, ಕೋರ್ಟ್, ಶಿಕ್ಷೆ... ಒಂದು ಪರೀಕ್ಷೆಗೆ ಎಷ್ಟೊಂದು ಇಲಾಖೆಗಳು ಹೆಣಗಾಡಬೇಕು. ಕಾವಲುರಹಿತ ಪರೀಕ್ಷಾ ಪದ್ಧತಿ ಜಾರಿಯಾಗಬೇಕು’.</p>.<p>‘ಕಾವಲು ಇಲ್ಲದಿದ್ದರೆ ಕಾಪಿ ಮಾಡಲು ಕಾಪಿರೈಟ್ಸ್ ಕೊಟ್ಟಂತಾಗುವುದಿಲ್ಲವೇ?’</p>.<p>‘ಪರೀಕ್ಷಾರ್ಥಿಗಳಿಗೆ ಪುಸ್ತಕಗಳನ್ನು ಕೊಟ್ಟು ಕಾಪಿ ಮಾಡುವ ಕಾಪಿರೈಟ್ಸ್ ಕೊಡಬೇಕು. ಓದಿದ್ದವರು ನಿಗದಿತ ಸಮಯದಲ್ಲಿ ಉತ್ತರ ಬರೆದು ಪಾಸ್ ಆಗ್ತಾರೆ, ಓದದವರು ಪುಸ್ತಕದಲ್ಲಿ ಉತ್ತರ ಹುಡುಕಲು ಪರದಾಡಿ ಫೇಲ್ ಆಗ್ತಾರೆ...’ ಎಂದು ಅಸಹನೆ ವ್ಯಕ್ತಪಡಿಸಿದಳು ಅನು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ಪಿಎಸ್ಐ ಪರೀಕ್ಷೆ ಹಗರಣದ ಕಿಂಗ್ಪಿನ್, ಕ್ವೀನ್ಪಿನ್ಗಳು ಅರೆಸ್ಟ್ ಆದ್ರೇನ್ರೀ?’ ಅನು ಕೇಳಿದಳು.</p>.<p>‘ಇನ್ನಷ್ಟು ಪಿನ್ಗಳ ಬಗ್ಗೆ ತನಿಖೆ ನಡೆಯುತ್ತಿದೆಯಂತೆ. ಒಂದು ಗುಂಡುಪಿನ್ನೂ ತಪ್ಪಿಸಿಕೊಳ್ಳಲು ಬಿಡುವುದಿಲ್ಲ ಅಂತ ಹೋಂ ಮಿನಿಸ್ಟರ್ ಹೇಳಿದ್ದಾರೆ’ ಅಂದ ಗಿರಿ.</p>.<p>‘ಪರೀಕ್ಷೆಯಲ್ಲಿ ಇಂಥಾ ಕಾಪಿ ಚೇಷ್ಟೆ ಬೇಕಿತ್ತಾ? ನಮ್ಮ ಕಾಲದಲ್ಲಿ ವಿದ್ಯಾರ್ಥಿಗಳು ಕಾಪಿ ಹೊಡೆಯುವಾಗ ಸಿಕ್ಕಿಬಿದ್ದು ಡಿಬಾರ್ ಆಗ್ತಿದ್ರು, ಈಗ ಕಾಪಿ ಮಾಡಿಸಲು ಹೋಗಿ ಪರೀಕ್ಷಾ ಹೊಣೆಗಾರರೇ ಡಿಬಾರ್ ಆಗುವಂತಾಗಿದೆ. ಬೇಲಿಯೇ ಎದ್ದು ಹೊಲ ಮೇಯ್ದರೆ ಹೇಗೆ?’</p>.<p>‘ಆ ಬೇಲಿಯ ಕಾವಲಿಗೆ ಇನ್ನೊಂದು ಬೇಲಿ ಹಾಕಿ ಭದ್ರ ಮಾಡಬೇಕಷ್ಟೇ...’</p>.<p>‘ಆ ಬೇಲಿಯೂ ಮೇಯ್ದರೆ, ಅದರ ಕಾವಲಿಗೆ ಮತ್ತೊಂದು ಬೇಲಿ ಹಾಕಬೇಕೇನ್ರೀ? ಪರೀಕ್ಷಾರ್ಥಿಗಳಿಗಿಂತ ಪರೀಕ್ಷೆ ನಡೆಸುವವರನ್ನು ಕಾಯುವ ದುಃಸ್ಥಿತಿ ಬರಬಾರದು’.</p>.<p>‘ಪರೀಕ್ಷೆ ನಡೆಸುವವರಿಗೆ ಸತ್ಯಪರೀಕ್ಷೆ ನಡೆಸಿ, ಅದರಲ್ಲಿ ಪಾಸಾದವರನ್ನು ಪರೀಕ್ಷೆ ಕಾರ್ಯಕ್ಕೆ ನೇಮಿಸುವುದು ಸೂಕ್ತವೇನೋ’.</p>.<p>‘ಇವರಿಗೆ ಪರೀಕ್ಷೆ ನಡೆಸುವವರು ಸತ್ಯವಂತರು ಅನ್ನೋದು ಏನು ಗ್ಯಾರಂಟಿ? ಇದು ಸತ್ಯ ಹರಿಶ್ಚಂದ್ರನ ಕಾಲ ಅಲ್ಲ’.</p>.<p>‘ಪರೀಕ್ಷೆಯಲ್ಲಿ ಕಾಪಿ ತಡೆಯಲೊಂದು ಕಾವಲು, ಕಾವಲುಗಾರರನ್ನು ತಡೆಯಲು ಇನ್ನೊಂದು ಕಾವಲು, ಅಕ್ರಮ ಮಾಡಿ ತಪ್ಪಿಸಿ<br />ಕೊಂಡವರನ್ನು ಪತ್ತೆ ಮಾಡಿ ಹಿಡಿಯಲು, ಹಿಡಿದ ಮೇಲೆ ಕೇಸು, ಕೋರ್ಟ್, ಶಿಕ್ಷೆ... ಒಂದು ಪರೀಕ್ಷೆಗೆ ಎಷ್ಟೊಂದು ಇಲಾಖೆಗಳು ಹೆಣಗಾಡಬೇಕು. ಕಾವಲುರಹಿತ ಪರೀಕ್ಷಾ ಪದ್ಧತಿ ಜಾರಿಯಾಗಬೇಕು’.</p>.<p>‘ಕಾವಲು ಇಲ್ಲದಿದ್ದರೆ ಕಾಪಿ ಮಾಡಲು ಕಾಪಿರೈಟ್ಸ್ ಕೊಟ್ಟಂತಾಗುವುದಿಲ್ಲವೇ?’</p>.<p>‘ಪರೀಕ್ಷಾರ್ಥಿಗಳಿಗೆ ಪುಸ್ತಕಗಳನ್ನು ಕೊಟ್ಟು ಕಾಪಿ ಮಾಡುವ ಕಾಪಿರೈಟ್ಸ್ ಕೊಡಬೇಕು. ಓದಿದ್ದವರು ನಿಗದಿತ ಸಮಯದಲ್ಲಿ ಉತ್ತರ ಬರೆದು ಪಾಸ್ ಆಗ್ತಾರೆ, ಓದದವರು ಪುಸ್ತಕದಲ್ಲಿ ಉತ್ತರ ಹುಡುಕಲು ಪರದಾಡಿ ಫೇಲ್ ಆಗ್ತಾರೆ...’ ಎಂದು ಅಸಹನೆ ವ್ಯಕ್ತಪಡಿಸಿದಳು ಅನು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>