‘ಕೇಂದ್ರದಿಂದ ಕೊಡ್ತಾರಂದ್ರ ಪ್ರಧಾನಿನೇ ಕೊಟ್ಟಂಗೆ. ನೋಡಿಲ್ಲಿ, ನಿರ್ಮಲಕ್ಕ ತೆಲಂಗಾಣದ ಕಾಮಾರೆಡ್ಡಿ ಜಿಲ್ಲೆಯ ಜಿಲ್ಲಾಧಿಕಾರಿಗೆ ಹೆಂಗೆ ಕ್ಲಾಸ್ ತಗೊಂಡಾಳ. ಪಡಿತರ ವಿತರಣೆಯಲ್ಲಿ ಕೇಂದ್ರದ ಪಾಲು ರಾಜ್ಯಕ್ಕಿಂತ ಜಾಸ್ತಿ ಐತಿ, ಹಂಗಿದ್ದಾಗ ಪಡಿತರ ಅಂಗಡಿ ಬಾಗಿಲಿನ ಮ್ಯಾಗೆ ನಗ್ತಾ ಇರೋ ಮೋದಿಮಾಮಾನ ಫೋಟೊ ಎದಕ್ಕ ಹಾಕಿಲ್ಲಂತ ಛಲೋತ್ನಾಗಿ ಬೈದಾಳ’ ಬೆಕ್ಕಣ್ಣ ವಿವರಿಸಿತು.