<p>‘ರಿಸಲ್ಟಲೇ’, ಅಂದ ಬಸ್ಯ.<br />‘ತಗಂಡೇನ್ಮಾಡ್ಲಿ?’ ಅಂದೆ.<br />‘ನೀ ಯಾ ಪಾರ್ಟಿಲೇ?’ ಅಂದ.<br />‘ವೊಗಲೇ. ಯೆಲ್ಲಾ ಪಾರ್ಟಿಗ್ಳೂ ವೊಲ್ಸ್ ಮಾಡ್ಕಂಡವೆ. ನಾ ಯಾ ಪಾರ್ಟಿನೂ ಅಲ್ಲ’, ಅಂದೆ.<br />‘ಅಂಗಂತಿಯಾ?’<br />‘ಮತ್ತಿನ್ನೇನು? ಯೀ ರಾಜಕೀಯ ಮಂದಿ ಕೈ ಆಕಿದ್ದೆಲ್ಲಾ ವೊಲಸೇ. ಕೈ ಆಕಿ ಕುಲಗೆಡಿಸೋರು<br />ಒಬ್ರು, ಜನಗಳ ಕಿವಿ ಮ್ಯಾಗೆ ಕಮಲದ ಊವು ಇಕ್ಕೋರು ಇನ್ನೊಬ್ರು, ಭತ್ತದ ತೆನ್ಯಾಗೇ<br />ಬಾರ್ಸೋರು ಮತ್ತೊಬ್ರು. ಯೆಲ್ಲ ಆಟೇ. ಯೀ ರಾಜ್ಕೀಯ ಮಂದಿ ಯಾವ್ ವಿಸ್ಯನ ಅದ್ರ್<br />ಪಾಡಿಗೆ ಬಿಟ್ಟಾರೆ, ಯೇಳು. ಬೈಯೆಲೆಕ್ಸನ್ನು, ಟಿಪ್ಪು ಜಯಂತಿ, ಶಬ್ರಿಮಲೈಯಿ, ಅಯೋದ್ಯೆ, ವಲ್ಲಬಾಯ್ ಪ್ರತಿಮಿ, ಕಡೀಕ್ ನಮ್ ರಾಜ್ಯೋಸ್ತವ ಪ್ರಸಸ್ತಿನೂ ಬಿಡ್ಲಿಲ್ಲ,<br />ಗಬ್ಬೆಬ್ಬಿಸಿಟ್ರು...’<br />‘ಚಲೋ ಮಂದಿನೂ ಅದಾರ್ಲೇ’.<br />‘ಅದಾರೆ. ಆದ್ರೆ ಮೂಲ್ಯಾಗ್ ಕುಂತಾರೆ. ಅವ್ರು ಮುಂದ್ ಬಂದು ರಾಜ್ಕೀಯಕ್ಕಿಳ್ಯಮಟ ನಾ<br />ಯಾ ಪಾರ್ಟಿನೂ ಅಲ್ಲ’.<br />‘ಸರಿ ಬಿಡು, ಅಂಗೇ ಮಾಡು. ಯಿವತ್ತು ನರಕ ಚತುರ್ದಸಿ. ಹಬ್ಬ ಜೋರಾ?’<br />‘ರಾಜ್ಕೀಯದಾಗಿರ ನರ್ಕಾಸುರ್ರ ಸಮ್ಮಾರ ಆಗಮಟ ಹಬ್ಬಾನೂ ಜೋರಿಲ್ಲ, ದಿಬ್ಣಾನೂ<br />ಜೋರಿಲ್ಲ. ಸುಮ್ನೆ ಹಬ್ಬ ಮಾಡ್ಬಕು, ಮಾಡ್ಬಕು, ಅಸ್ಟೆ. ಯೀ ಪುಢಾರಿ ಪಡಪೋಸಿಗ್ಳು,<br />ಮೂಲಭೂತಗ್ಳು, ಯಿಂತೋರ್ನೆಲ್ಲ ಬಲಿ ಆಕಂಥಾ ತ್ರಿವಿಕ್ರಮ ಉಟ್ಟಿಬಂದಾಗ್ಲೇ ನಮ್ಗೆ<br />ನಿಜವಾದ್ ದೀಪಾವ್ಳಿ ನೋಡಪ’.<br />‘ಸರಿ ನೀನ್ ಅವಾಗೇ ದೀಪಾವ್ಳಿ ಮಾಡು, ನಮ್ಮ್ ಉಡ್ರು ಅಲ್ಲೀಮಟ ಸುಮ್ಕಿರಂಗಿಲ್ಲ, ಪಟಾಕಿ ಕೇಳಕತ್ಯರೆ. ತಗಳಕೋಕ್ಕಿನಿ. ಆಗ್ಲೇ ಗಂಟಿ ಯೆಂಟಾಗಕ್ಬಂತು. ಅತ್ರೊಳಗೆ ವೊಡ್ದು<br />ಮುಗ್ಸಿರ್ಬಕು. ಸಿಗಣ’.<br />ಯಿಸ್ಟಂದನೇ ವುತ್ರುಕ್ಕ್ ಕಾಯ್ದಲೇ ವೊಂಟೇವೋದ ಬಸ್ಯ.<br />ನಾನು, ‘ಬೈಯೆಲೆಕ್ಸನ್ ರಿಸಲ್ಟುಗ್ಳು, ಆಮ್ಯಾಕಿನ್ ಅಬ್ರ, ಆರ್ಬಟ ಯೆಲ್ಲ ಬರ್ಜರಿ<br />ಧಡಾಕಿ ಯಿದ್ದಂಗಿರ್ತವೆ, ನೋಡಣ’ ಅನ್ಕಂತ ಟೀವಿಕಡಿ ವೊಂಟೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ರಿಸಲ್ಟಲೇ’, ಅಂದ ಬಸ್ಯ.<br />‘ತಗಂಡೇನ್ಮಾಡ್ಲಿ?’ ಅಂದೆ.<br />‘ನೀ ಯಾ ಪಾರ್ಟಿಲೇ?’ ಅಂದ.<br />‘ವೊಗಲೇ. ಯೆಲ್ಲಾ ಪಾರ್ಟಿಗ್ಳೂ ವೊಲ್ಸ್ ಮಾಡ್ಕಂಡವೆ. ನಾ ಯಾ ಪಾರ್ಟಿನೂ ಅಲ್ಲ’, ಅಂದೆ.<br />‘ಅಂಗಂತಿಯಾ?’<br />‘ಮತ್ತಿನ್ನೇನು? ಯೀ ರಾಜಕೀಯ ಮಂದಿ ಕೈ ಆಕಿದ್ದೆಲ್ಲಾ ವೊಲಸೇ. ಕೈ ಆಕಿ ಕುಲಗೆಡಿಸೋರು<br />ಒಬ್ರು, ಜನಗಳ ಕಿವಿ ಮ್ಯಾಗೆ ಕಮಲದ ಊವು ಇಕ್ಕೋರು ಇನ್ನೊಬ್ರು, ಭತ್ತದ ತೆನ್ಯಾಗೇ<br />ಬಾರ್ಸೋರು ಮತ್ತೊಬ್ರು. ಯೆಲ್ಲ ಆಟೇ. ಯೀ ರಾಜ್ಕೀಯ ಮಂದಿ ಯಾವ್ ವಿಸ್ಯನ ಅದ್ರ್<br />ಪಾಡಿಗೆ ಬಿಟ್ಟಾರೆ, ಯೇಳು. ಬೈಯೆಲೆಕ್ಸನ್ನು, ಟಿಪ್ಪು ಜಯಂತಿ, ಶಬ್ರಿಮಲೈಯಿ, ಅಯೋದ್ಯೆ, ವಲ್ಲಬಾಯ್ ಪ್ರತಿಮಿ, ಕಡೀಕ್ ನಮ್ ರಾಜ್ಯೋಸ್ತವ ಪ್ರಸಸ್ತಿನೂ ಬಿಡ್ಲಿಲ್ಲ,<br />ಗಬ್ಬೆಬ್ಬಿಸಿಟ್ರು...’<br />‘ಚಲೋ ಮಂದಿನೂ ಅದಾರ್ಲೇ’.<br />‘ಅದಾರೆ. ಆದ್ರೆ ಮೂಲ್ಯಾಗ್ ಕುಂತಾರೆ. ಅವ್ರು ಮುಂದ್ ಬಂದು ರಾಜ್ಕೀಯಕ್ಕಿಳ್ಯಮಟ ನಾ<br />ಯಾ ಪಾರ್ಟಿನೂ ಅಲ್ಲ’.<br />‘ಸರಿ ಬಿಡು, ಅಂಗೇ ಮಾಡು. ಯಿವತ್ತು ನರಕ ಚತುರ್ದಸಿ. ಹಬ್ಬ ಜೋರಾ?’<br />‘ರಾಜ್ಕೀಯದಾಗಿರ ನರ್ಕಾಸುರ್ರ ಸಮ್ಮಾರ ಆಗಮಟ ಹಬ್ಬಾನೂ ಜೋರಿಲ್ಲ, ದಿಬ್ಣಾನೂ<br />ಜೋರಿಲ್ಲ. ಸುಮ್ನೆ ಹಬ್ಬ ಮಾಡ್ಬಕು, ಮಾಡ್ಬಕು, ಅಸ್ಟೆ. ಯೀ ಪುಢಾರಿ ಪಡಪೋಸಿಗ್ಳು,<br />ಮೂಲಭೂತಗ್ಳು, ಯಿಂತೋರ್ನೆಲ್ಲ ಬಲಿ ಆಕಂಥಾ ತ್ರಿವಿಕ್ರಮ ಉಟ್ಟಿಬಂದಾಗ್ಲೇ ನಮ್ಗೆ<br />ನಿಜವಾದ್ ದೀಪಾವ್ಳಿ ನೋಡಪ’.<br />‘ಸರಿ ನೀನ್ ಅವಾಗೇ ದೀಪಾವ್ಳಿ ಮಾಡು, ನಮ್ಮ್ ಉಡ್ರು ಅಲ್ಲೀಮಟ ಸುಮ್ಕಿರಂಗಿಲ್ಲ, ಪಟಾಕಿ ಕೇಳಕತ್ಯರೆ. ತಗಳಕೋಕ್ಕಿನಿ. ಆಗ್ಲೇ ಗಂಟಿ ಯೆಂಟಾಗಕ್ಬಂತು. ಅತ್ರೊಳಗೆ ವೊಡ್ದು<br />ಮುಗ್ಸಿರ್ಬಕು. ಸಿಗಣ’.<br />ಯಿಸ್ಟಂದನೇ ವುತ್ರುಕ್ಕ್ ಕಾಯ್ದಲೇ ವೊಂಟೇವೋದ ಬಸ್ಯ.<br />ನಾನು, ‘ಬೈಯೆಲೆಕ್ಸನ್ ರಿಸಲ್ಟುಗ್ಳು, ಆಮ್ಯಾಕಿನ್ ಅಬ್ರ, ಆರ್ಬಟ ಯೆಲ್ಲ ಬರ್ಜರಿ<br />ಧಡಾಕಿ ಯಿದ್ದಂಗಿರ್ತವೆ, ನೋಡಣ’ ಅನ್ಕಂತ ಟೀವಿಕಡಿ ವೊಂಟೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>